ಸೇವಕಿ ಮದ್ವೆಯಾದ್ರೆ ಇಷ್ಟಬಂದವರ ಜತೆ ದೈಹಿಕ ಸಂಬಂಧ ಇಟ್ಕೋಬಹುದು! ಅಜಿತ್​-ಹೀರಾ ಮಾತಿನ ರಹಸ್ಯ? ಏನಿದು ವಿವಾದ? Heera Rajagopal

Heera Rajagopal

Heera Rajagopal : ಕಾಲಿವುಡ್​ ಸ್ಟಾರ್​ ಹೀರೋ ಅಜಿತ್ ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆಂಬುದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ, ಬಿಡುಗಡೆಯಾದ ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲದೆ, ಕೆಲವು ದಿನಗಳ ಹಿಂದಷ್ಟೇ ಅಜಿತ್ ಮತ್ತು ಅವರ ಪತ್ನಿ ಶಾಲಿನಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸಹ ವೈರಲ್ ಆಗಿವೆ.

blank

ನಿನ್ನೆಯಷ್ಟೇ ಅಜಿತ್​ ಅವರು ಕೇಂದ್ರ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಮಯದಲ್ಲಿ, ವಿವಾದವೊಂದು ಭುಗಿಲೆದ್ದಿದೆ. ಇದೇನು ಹೊಸ ವಿವಾದವಲ್ಲ. ಹಳೆಯ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದೊಮ್ಮೆ ನಟಿ ಹೀರಾ ರಾಜಗೋಪಾಲ್ ತಮ್ಮ ಪ್ರೇಮಕಥೆಯನ್ನು ಹಂಚಿಕೊಂಡಿದ್ದರು. ತಮ್ಮ ಮಾಜಿ ಬಾಯ್​ಫ್ರೆಂಡ್​ ಅಜಿತ್​ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ್ದರು. ತಮ್ಮ ಲವ್​ ಬ್ರೇಕಪ್ ಬಗ್ಗೆ ಮಾತನಾಡಿದ್ದರು. ಅದೇ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.

ನಟಿ ಹೀರಾ ಜತೆಗೆ ಅಜಿತ್ ಅವರ ಲವ್​ಸ್ಟೋರಿ 1990 ರಲ್ಲಿ ಭಾರಿ ಸುದ್ದಿಯಾಗಿತ್ತು. ಬಳಿಕ ಕೆಲ ವಿವಾದಗಳಿಂದಾಗಿ 1999ರಲ್ಲಿ ಇಬ್ಬರು ಬೇರ್ಪಟ್ಟರು ಎಂಬ ವರದಿಗಳು ಬಂದವು. ಆದರೆ, ಇದೀಗ ಅಜಿತ್ ಹೆಸರನ್ನು ಉಲ್ಲೇಖಿಸದೆ, ಹೀರಾ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ತನ್ನ ಬ್ಲಾಗ್‌ನಲ್ಲಿ ಹೀರಾ ಮಾಡಿದ್ದ ಪೋಸ್ಟ್ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಒಬ್ಬ ನಟ ನನಗೆ ದ್ರೋಹ ಬಗೆದಿದ್ದಲ್ಲದೆ, ತನ್ನ ಅಭಿಮಾನಿಗಳ ಜತೆ ಸೇರಿ ನನ್ನ ವ್ಯಕ್ತಿತ್ವಕ್ಕೂ ಹಾನಿ ಮಾಡಿದ್ದಾನೆ. ಅವನಿಂದಾಗಿ ನಾನು ಬಹಳಷ್ಟು ಅವಮಾನ ಮತ್ತು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಒಮ್ಮೆ ಆತ ತನ್ನ ಬೆನ್ನುಮೂಳೆಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಹೇಳಿದ. ಆ ಸಮಯದಲ್ಲಿ, ನಾನು ಅವನೊಂದಿಗೆ ಇದ್ದು ಅನೇಕ ಕೆಲಸಗಳನ್ನು ಮಾಡಿದೆ. ಆಸ್ಪತ್ರೆಯಲ್ಲೂ ಉಳಿದುಕೊಂಡಿದ್ದೆ. ಆದರೆ, ಆತ ತನ್ನ ಆರೋಗ್ಯದ ಬಗ್ಗೆ ಸುಳ್ಳು ಹೇಳಿದ್ದಾನೆಂಬುದು ಆನಂತರ ನನಗೆ ತಿಳಿದು ತುಂಬಾ ಬೇಜಾರಾಯಿತು ಎಂದು ಹೀರಾ ಬರೆದಿದ್ದಾರೆ.

ಇದನ್ನೂ ಓದಿ: 1 ಕೆಜಿ ಅಕ್ಕಿ 339, ಮೊಟ್ಟೆ 332 ರೂ.! ಭಾರತಕ್ಕೆ ಯುದ್ಧ ಸವಾಲು ಹಾಕುವ ಪಾಕಿಸ್ತಾನಕ್ಕಿಲ್ಲ ನೆಮ್ಮದಿಯ ಬದುಕು | Pakistan Inflation

ಹೀಗಿರುವಾಗ ಇದ್ದಕ್ಕಿದ್ದಂತೆ ನನ್ನ ವಿರುದ್ಧದ ಸುದ್ದಿಗಳನ್ನು ನೋಡಿ ನಾನು ಶಾಕ್​ ಆದೆ. ನನ್ನ ವಿರುದ್ಧ ಏನೇನೋ ಕಟ್ಟು ಕತೆಗಳು ಹರಿದಾಡಿದವು. ಒಮ್ಮೆ ನಾನು ಭೇಟಿಯಾಗಲು ನಟನ ಮನೆಗೆ ಹೋಗಿದ್ದೆ. ಆಗ ಆತ ನನ್ನ ಮೇಲೆ ನಿರ್ಲಕ್ಷ್ಯದ ಭಾವನೆ ಹೊಂದಿದ್ದ. ಅಲ್ಲದೇ, ಸೇವಕಿಯಂತೆ ಇರುವ ಹೆಣ್ಣನ್ನು ಮದುವೆಯಾಗಲು ಬಯಸುವುದಾಗಿ ಹೇಳಿದ. ಆಕೆಯನ್ನು ಯಾರೂ ನೋಡುವುದಿಲ್ಲ ಆದರೆ, ನಾನು ಮಾತ್ರ ಇಷ್ಟಪಡುವ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದುತ್ತೇನೆ ಎಂದು ಹೇಳಿದ ಎಂದು ತನ್ನ ಬ್ಲಾಗ್‌ನಲ್ಲಿ ಹೀರಾ ಬರೆದುಕೊಂಡಿದ್ದಾರೆ.

ಅಂದಹಾಗೆ, 1990ರಲ್ಲಿ ನಟಿ ಹೀರಾ ರಾಜ್‌ಗೋಪಾಲ್ ಅವರೊಂದಿಗಿನ ಅಜಿತ್ ಅವರ ಪ್ರೇಮಕಥೆ ವೈರಲ್ ಆಗಿತ್ತು. ಅಜಿತ್ ಮತ್ತು ಹೀರಾ ಮೊದಲು ಕಾಥಲ್ ಕೊಟ್ಟೈ ಚಿತ್ರದಲ್ಲಿ ಒಟ್ಟಿಗೆ ನಟಿಸಿದರು ಮತ್ತು ಚಿತ್ರೀಕರಣದ ಸಮಯದಲ್ಲಿ ಆಳವಾಗಿ ಪ್ರೀತಿಸುತ್ತಿದ್ದರು. ನಂತರ, ಅವರು ‘ತೋಡರಂ’ ಎಂಬ ಮತ್ತೊಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಆದಾಗ್ಯೂ, ಅವರ ಪ್ರೇಮಕಥೆಯು ಮದುವೆಗೆ ಕಾರಣವಾಗಲಿಲ್ಲ. ಹೀರಾ ಅವರ ತಾಯಿ ಮದುವೆಯನ್ನು ನಿರಾಕರಿಸಿದರು. ಹೀಗಾಗಿ ಅವರ ಪ್ರೇಮಕಥೆ ಅಂತ್ಯವಾಯಿತು ಎಂದು ಕಾಲಿವುಡ್ ಮೂಲಗಳು ತಿಳಿಸಿವೆ.

ಆದಾಗ್ಯೂ, ಅಜಿತ್ ಅವರನ್ನು ತ್ಯಜಿಸಿದರು ಎಂಬ ವದಂತಿಗಳೂ ಇವೆ. ಆಕೆ ಡ್ರಗ್ಸ್​ ವ್ಯಸನಿ ಆಗಿದ್ದಳು. ಹೀಗಾಗಿ ಅಜಿತ್​ ಆಕೆಯಿಂದ ಬೇರ್ಪಟ್ಟರು ಎಂಬ ವದಂತಿಗಳೂ ಇವೆ. ಇಬ್ಬರು ಬೇರೆಯಾದ ಕೆಲವು ವರ್ಷಗಳ ನಂತರ, ಅಜಿತ್ ಅಬರು ನಟಿ ಶಾಲಿನಿ ಅವರನ್ನು ಪ್ರೀತಿಸಿ ವಿವಾಹವಾದರು. ಅವರಿಗೆ ಅನುಷ್ಕಾ ಮತ್ತು ಆದ್ವಿಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ನಟಿಯಾಗಿ ತಮ್ಮ ವೃತ್ತಿಜೀವನದಲ್ಲಿ ನಿರತರಾಗಿದ್ದಾಗ ಅಜಿತ್​ ಅವರನ್ನು ವಿವಾಹವಾದ ಶಾಲಿನಿ, ಆ ನಂತರ ಚಲನಚಿತ್ರಗಳಿಗೆ ವಿದಾಯ ಹೇಳಿದರು.

ಅಂದಹಾಗೆ, ಅಜಿತ್​ ನಿನ್ನೆಯಷ್ಟೇ (ಏಪ್ರಿಲ್​ 28) ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು. ಅದೇ ದಿನ ಅವರ ಹಳೆಯ ಲವ್​ ಸ್ಟೋರಿ ವಿವಾದವನ್ನು ಏಕೆ ಬಹಿರಂಗಪಡಿಸಲಾಗಿದೆ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಇದರ ಹಿಂದೆ ನಟ ವಿಜಯ್ ಅವರ ಅಭಿಮಾನಿಗಳಿದ್ದಾರೆ ಎಂದು ಅಜಿತ್​ ಫ್ಯಾನ್ಸ್​ ಆಪಾದನೆ ಮಾಡಿದ್ದಾರೆ. ಅಲ್ಲದೆ, ಹೀರಾ ರಾಜಗೋಪಾಲ್ ಬಂದು ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಅಜಿತ್​ ಫ್ಯಾನ್ಸ್​ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಮತ್ತೊಮ್ಮೆ ಅಜಿತ್​ ಮತ್ತು ವಿಜಯ್​ ಫ್ಯಾನ್ಸ್​ ನಡುವೆ ಕಿತ್ತಾಟ ನಡೆಯುತ್ತಿದೆ. (ಏಜೆನ್ಸೀಸ್​)

ಐಪಿಎಲ್​ ಬಿಟ್ಟು ಮಾಲ್ಡೀವ್ಸ್​ಗೆ ಹಾರಿದ SRH​ ತಂಡ! ಇದರ ಹಿಂದಿರೋ ಕಾವ್ಯಾ ಮಾರನ್ ಮಾಸ್ಟರ್ ಪ್ಲಾನ್​ ಏನು?

ಮೊದಲು ಅದು ಕೊಡಿ… ಪಹಲ್ಗಾಮ್ ದಾಳಿ ಬಗ್ಗೆ ಭಾರತೀಯರ ರಕ್ತ ಕುದಿಯುವಂಥ ಹೇಳಿಕೆ ನೀಡಿದ ಅಫ್ರಿದಿ! Shahid Afridi

ಈ ಮೂರು ರಾಶಿಯಲ್ಲಿ ಜನಿಸಿದವರು ಸಿಂಹದಷ್ಟು ಧೈರ್ಯಶಾಲಿಗಳು… ನೀವು ಅವರಲ್ಲಿ ಒಬ್ಬರೇ? Zodiac Signs

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…