Pawan Kalyan : ಸಿಂಧೂ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತಹರಿಯುತ್ತದೆ ಎಂದು ಪಾಕಿಸ್ತಾನ ಪಿಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಬೆದರಿಕೆಗೆ ಅಗತ್ಯಬಿದ್ದರೆ ನಮ್ಮ ದೇಶಕ್ಕೆ ನಾವು ರಕ್ತ ಹರಿಸುವೆವು ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ:ಮೂಕ ಜೀವಿಯ ಪ್ರಾಣಕ್ಕೆ ಬೆಲೆ ಇಲ್ಲವೇ? ಗಾಳಿಪಟ ದಾರ ಸಿಲುಕಿ ವಿಲವಿಲ ಒದ್ದಾಡಿ ಜೀವಬಿಟ್ಟ ಪಾರಿವಾಳ! Kite Thread
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ ಬಿಲಾವಲ್ ಭುಟ್ಟೋ-ಜರ್ದಾರಿ ಇತ್ತೀಚೆಗೆ ತೀಕ್ಷ್ಣ ಪ್ರತಿಕ್ರಿಯೆ(ಸಿಂಧೂ ನೀರು ನಿಲ್ಲಿಸಿದರೆ ನದಿಗಳಲ್ಲಿ ರಕ್ತಹರಿಯುತ್ತೆ) ನೀಡಿದ್ದರು.
ಇದನ್ನೂ ಓದಿ:ಅಮೆರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣನಾದ ಮೈಸೂರಿನ ಉದ್ಯಮಿ
VIDEO | When asked about PPP chief Bilawal Bhutto’s ‘blood will flow’ remark, Andhra Pradesh deputy CM Pawan Kalyan (@PawanKalyan) says, “They should be reminded how they lost the past three wars. We have to send the visuals to them, around 70,000 soldiers, how they were treated,… pic.twitter.com/USHjR6jTXg
— Press Trust of India (@PTI_News) April 29, 2025
ಬಿಲಾವಲ್ ಭುಟ್ಟೋ ಹೇಳಿಕೆಗೆ ಪ್ರತಿಕ್ರಿಯಿಸಿದ ಪವನ್ ಕಲ್ಯಾಣ್, “ಅವರು (ಪಾಕಿಸ್ತಾನ) ಕಳೆದ ಮೂರು ಯುದ್ಧಗಳನ್ನು ಹೇಗೆ ಸೋತರು ಎಂಬುದನ್ನು ನೆನಪಿಸಬೇಕು. ನಾವು ಅವರಿಗೆ ದೃಶ್ಯಗಳನ್ನು ಕಳುಹಿಸಬೇಕು. ಸುಮಾರು 70,000 ಸೈನಿಕರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂದು ನೆನಪು ಮಾಡಿಕೊಳ್ಳಬೇಕು. ಪಾಕಿಸ್ತಾನಿಗಳು ಮಿತಿಮೀರಲು ಪ್ರಯತ್ನಿಸಿದರೆ, ಪ್ರತಿಯೊಬ್ಬ ಭಾರತೀಯನು ಪಾಕಿಸ್ತಾನಕ್ಕೆ ಬರುತ್ತಾನೆ. ಅಲ್ಲದೆ, ಅಗತ್ಯವಿದ್ದಲ್ಲಿ, ನಾವು ರಾಷ್ಟ್ರಕ್ಕಾಗಿ ನಮ್ಮ ರಕ್ತವನ್ನು ಚೆಲ್ಲುತ್ತೇವೆ. ಅವರಿಗೆ ಅವರ ಹಿಂದಿನದನ್ನು ನೆನಪಿಸಬೇಕು” ಎಂದು ಹೇಳಿದರು.(ಏಜೆನ್ಸೀಸ್)
ನಾನೀಗ 3 ತಿಂಗಳ ಗರ್ಭಿಣಿ… ನನ್ನ ಮನೆ ಇಲ್ಲಿದೆ: ಭಾರತದಲ್ಲಿ ಪಾಕ್ ಪ್ರಜೆಗಳ ಅಳಲು! | Pakistani Citizen