ಉಗ್ರನಿಗೆ ಪಾಕ್​ ಸೇನೆಯ ಲಿಂಕ್​: ಯಾರು ಈ ಹಾಶಿಮ್ ಮೂಸಾ? ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹರಂಗ! Pahalgam Terror Attack

Pahalgam Terror Attack

Pahalgam Terror Attack : ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದು, ಈಗಾಗಲೇ ಮಹತ್ವದ ಪುರಾವೆಗಳನ್ನು ಸಂಗ್ರಹಿಸಿದೆ. ಇದಲ್ಲದೆ, ಸ್ಥಳೀಯ ವಿಡಿಯೋಗ್ರಾಫರ್‌ಗಳಿಂದ ವಿಡಿಯೋಗಳನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ಭಯೋತ್ಪಾದಕರು ಗುಂಡು ಹಾರಿಸುವ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ವಿಡಿಯೋಗಳನ್ನು ಆಧರಿಸಿ ತನಿಖೆ ಮುಂದುವರೆದಿದೆ.

ಭಯೋತ್ಪಾದಕರಲ್ಲಿ ಒಬ್ಬನಾದ ಹಾಶಿಮ್ ಮೂಸಾ ಬಗ್ಗೆ ತನಿಖಾ ತಂಡವು ಪ್ರಮುಖ ಮಾಹಿತಿಯನ್ನು ಸಂಗ್ರಹಿಸಿದೆ. ಈ ಹಾಶಿಮ್ ಮೂಸಾಗೂ ಪಾಕಿಸ್ತಾನ ಸೇನೆಗೂ ಸಂಬಂಧ ಇರುವುದು ಗೊತ್ತಾಗಿದೆ. ಭಯೋತ್ಪಾದಕನಾಗುವ ಮುನ್ನ ಈ ಮೂಸಾ, ಪಾಕಿಸ್ತಾನದ ವಿಶೇಷ ಪಡೆಯಾದ ಪ್ಯಾರಾ ಕಮಾಂಡೋದಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದಬಂದಿದೆ. ಇದೀಗ ಆತ ಮೋಸ್ಟ್​ ವಾಂಟೆಡ್​ ಟೆರರಿಸ್ಟ್​ ಎಂದು ತನಿಖಾ ತಂಡಗಳು ತೀರ್ಮಾನಿಸಿವೆ.

ಸದ್ಯ ಹಾಶಿಮ್​ ಮೂಸಾ, ಲಷ್ಕರ್-ಎ-ತೊಯ್ಬಾ ಜೊತೆ ಕೆಲಸ ಮಾಡುತ್ತಿದ್ದಾನೆ. ದೊಡ್ಡ ಸಂಚಿನ ಭಾಗವಾಗಿ ಪಹಲ್ಗಾಮ್ ಅನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹಾಶಿಮ್ ಮೂಸಾ ಈ ಹಿಂದೆ ಕಾಶ್ಮೀರದಲ್ಲಿ ನಡೆದ ಮೂರು ಭಯೋತ್ಪಾದಕ ದಾಳಿಗಳಲ್ಲಿಯೂ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ.

ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಶಂಕೆಯ ಮೇಲೆ ಅಧಿಕಾರಿಗಳು ನೂರಾರು ಸ್ಥಳೀಯರನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಈ ಪೈಕಿ 15 ಜನರನ್ನು ಭಯೋತ್ಪಾದಕ ಭೂಗತ ಕೆಲಸಗಾರರು ಎಂದು ಗುರುತಿಸಲಾಗಿದೆ. ಅವರನ್ನು ವಿಚಾರಣೆ ನಡೆಸಿದ ನಂತರ, ಮೂಸಾ ಪಾಕಿಸ್ತಾನಿ ಸೇನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ: ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ: ರಾಜಸ್ಥಾನ ರಾಯಲ್ಸ್​ಗೆ ಎದುರಾಯ್ತು ಹೊಸ ಚಾಲೆಂಜ್​! ಏನದು? Vaibhav Suryavanshi

ಪಾಕಿಸ್ತಾನಿ ಪ್ಯಾರಾ ಕಮಾಂಡೋಗಳು ಕಠಿಣ ತರಬೇತಿಯನ್ನು ಪಡೆಯುತ್ತಾರೆ. ಅವರು ಅಸಾಂಪ್ರದಾಯಿಕ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ನುರಿತವರು. ತರಬೇತಿಯ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಪಡಿಸಲಾಗುತ್ತದೆ. ಅವರಿಗೆ ಯುದ್ಧಭೂಮಿಯಲ್ಲಿ ತಂತ್ರಗಳನ್ನು ಸಹ ಕಲಿಸಲಾಗುತ್ತದೆ. ಅವರು ಸುಧಾರಿತ ಶಸ್ತ್ರಾಸ್ತ್ರಗಳ ಬಳಕೆ ಮತ್ತು ಕೈಯಿಂದ ಹೋರಾಡುವಲ್ಲಿಯೂ ಪರಿಣಿತರು.

ಪಹಲ್ಗಾಮ್ ತಲುಪಲು ಭಯೋತ್ಪಾದಕರು ಸುಮಾರು 22 ಗಂಟೆಗಳ ಕಾಲ ನಡೆದು ಬಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಅವರು ಕೊಕರ್ನಾಗ್ ಕಾಡುಗಳಿಂದ ಬೈಸರನ್ ಕಣಿವೆಗೆ ಕಾಲ್ನಡಿಗೆಯಲ್ಲಿ ಬಂದಿದ್ದಾರೆಂದು ತೋರುತ್ತದೆ. ಈ ನಿಟ್ಟಿನಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ, ಭದ್ರತಾ ಪಡೆಗಳು ಭಯೋತ್ಪಾದಕರನ್ನು ಬೇಟೆಯಾಡುತ್ತಿವೆ. ಅಂದಹಾಗೆ ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡರು. (ಏಜೆನ್ಸೀಸ್​)

ಏಕತೆ, ಒಗ್ಗಟ್ಟು ಅತ್ಯಗತ್ಯ… ತುರ್ತು ಅಧಿವೇಶನ ಕರೆಯಲು ಪ್ರಧಾನಿಗೆ ಪತ್ರದ ಬರೆದ ಮಲ್ಲಿಕಾರ್ಜುನ ಖರ್ಗೆ! Mallikarjun Kharge

ಈ 3 ರಾಶಿಯ ಮಹಿಳೆಯರು ಆದರ್ಶ ಪತ್ನಿ ಹೊಂದಿರಬೇಕಾದ ಎಲ್ಲ ಗುಣಗಳನ್ನು ಹೊಂದಿರುತ್ತಾರಂತೆ! Zodiac Signs

Share This Article

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…

ಕೂದಲು ಉದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಿ.. ಫಲಿತಾಂಶ ಗ್ಯಾರಂಟಿ! hair care

hair care: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಅನೇಕ ಜನರು ಎದುರಿಸುತ್ತಿರುವ ಒಂದು ದೊಡ್ಡ ಸಮಸ್ಯೆಯಾಗಿದೆ.…