ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಶತಕ: ರಾಜಸ್ಥಾನ ರಾಯಲ್ಸ್​ಗೆ ಎದುರಾಯ್ತು ಹೊಸ ಚಾಲೆಂಜ್​! ಏನದು? Vaibhav Suryavanshi

Vaibhav Suryavanshi

Vaibhav Suryavanshi : ನಿನ್ನೆ (ಏಪ್ರಿಲ್​ 28) ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​​ ತಂಡ ಬಲಿಷ್ಠ ಗುಜರಾತ್​ ಟೈಟಾನ್ಸ್​ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಯುವ ಪ್ರತಿಭೆ ವೈಭವ್ ಸೂರ್ಯವಂಶಿ (101 ರನ್​, 38 ಎಸೆತ, 7 ಬೌಂಡರಿ, 11 ಸಿಕ್ಸರ್) ಅವರ ಅದ್ಭುತ ಶತಕದ ನೆರವಿನಿಂದ ರಾಜಸ್ಥಾನ ತಂಡ ಗುಜರಾತ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ಮೊದಲ ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​, ಶುಭಮನ್ ಗಿಲ್ (84 ರನ್​, 50 ಎಸೆತ, 5 ಬೌಂಡರಿ ಹಾಗೂ 4 ಸಿಕ್ಸರ್) ಮತ್ತು ಜೋಸ್ ಬಟ್ಲರ್ (ಅಜೇಯ 50 ರನ್​, 26 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದಾಟದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ರಾಜಸ್ಥಾನ ತಂಡ ವೈಭವ್ ಮತ್ತು ಯಶಸ್ವಿ ಜೈಸ್ವಾಲ್ (ಅಜೇಯ 70 ರನ್​, 40 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ 15.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಸುಲಭವಾಗಿ ಗುರಿ ತಲುಪಿತು. ಈ ಐಪಿಎಲ್ ಸೀಸನ್​ನಲ್ಲಿ ರಾಜಸ್ಥಾನ ಇದುವರೆಗೂ ಆಡಿದ 10 ಪಂದ್ಯಗಳಲ್ಲಿ ಇದು ಮೂರನೇ ಗೆಲುವು, ಆದರೆ ಗುಜರಾತ್​ ತಂಡಕ್ಕೆ 9 ಪಂದ್ಯಗಳಲ್ಲಿ ಇದು ಮೂರನೇ ಸೋಲು.

ಏಪ್ರಿಲ್ 16ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೂಪರ್ ಓವರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಪಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗಾಯದ ತೀವ್ರತೆಯಿಂದಾಗಿ, ಅವರನ್ನು ಲಖನೌ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಗಳಿಂದ ಹೊರಗುಳಿಸಲಾಯಿತು. ಹೀಗಾಗಿ, ರಿಯಾನ್ ಪರಾಗ್ ಮಧ್ಯಂತರ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಜು ಸ್ಯಾಮ್ಸನ್ ಬದಲಿಗೆ 14 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಆರ್‌ಆರ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕರೆತಂದಿದೆ. ಲಖನೌ ವಿರುದ್ಧದ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಈ ಹುಡುಗ ಉತ್ತಮ ಪ್ರದರ್ಶನ ನೀಡಿದರು. ನಂತರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿ, ವಿಶ್ವ ಕ್ರಿಕೆಟ್​ ಬೆರಗಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್​ ಭಯೋತ್ಪಾದಕ ದಾಳಿ: ನಿಜವಾಯ್ತಾ ಬಾಬಾ ವಂಗಾ ಭವಿಷ್ಯವಾಣಿ? ಇಂಡೋ-ಪಾಕ್​ ಯುದ್ಧ ನಡೆಯುತ್ತಾ? Baba Vanga

ಇದೇ ಸಂದರ್ಭದಲ್ಲಿ ಮೇ 1 ರಂದು ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಲಭ್ಯವಿದ್ದರೆ, ಅಂತಿಮ ತಂಡವನ್ನು ಆಯ್ಕೆ ಮಾಡುವಲ್ಲಿ ಆರ್‌ಆರ್ ನಿರ್ವಹಣೆಗೆ ತಲೆನೋವು ಎದುರಾಗಬಹುದು. ಸಂಜು, ಮುಂಬೈ ವಿರುದ್ಧದ ಪಂದ್ಯಕ್ಕೆ ಲಭ್ಯವಾದರೆ, ಮೂರನೇ ಪಂದ್ಯದಲ್ಲಿ ಶತಕ ಗಳಿಸಿದ ಸೂರ್ಯವಂಶಿ ಅವರನ್ನು ಕೈಬಿಡಲಾಗುತ್ತದೆಯೇ? ಎಂಬ ಪ್ರಶ್ನೆ ಮೂಡಿದೆ.

ಆದರೆ, ಸಂಜು ಓಪನರ್ ಆಗಿ ಮಾತ್ರವಲ್ಲದೆ ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಬಹುದು. ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು ಲಭ್ಯವಾದರೆ, ಸೂರ್ಯವಂಶಿ ಓಪನರ್ ಆಗಿ ಮುಂದುವರಿಸಿ, ಸಂಜು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು. ಆದಾಗ್ಯೂ, ಸಂಜು ಬದಲಿಗೆ ಯಾರನ್ನು ಆಡಿಸುವುದು ಎಂಬುದು ಈಗ ಆರ್‌ಆರ್ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ. ಸಂಜು ಗಾಯದಿಂದ ಚೇತರಿಸಿಕೊಳ್ಳದಿದ್ದರೆ, ಯಾವುದೇ ತಲೆನೋವು ಇರುವುದಿಲ್ಲ. ಗುಜರಾತ್ ವಿರುದ್ಧ ಆಡಿದ ತಂಡದೊಂದಿಗೆ ಆರ್‌ಆರ್ ಮುಂದುವರಿಯಲಿದೆ. (ಏಜೆನ್ಸೀಸ್​)

ಕೇವಲ 14ನೇ ವಯಸ್ಸಿನಲ್ಲೇ ಐಪಿಎಲ್​ನಲ್ಲಿ ಮೊದಲ ಶತಕ: ದಾಖಲೆ ಬರೆದ ಬೆನ್ನಲ್ಲೇ ವೈಭವ್ ಹೇಳಿಕೆ ವೈರಲ್! Vaibhav suryavanshi​​

ಪ್ಲೇಆಫ್​ಗೆ ಏರುವುದಲ್ಲ ನಮ್ಮ ಗುರಿ ಬೇರೆಯೇ ಇದೆ ಎಂದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್​

Share This Article

ಕಣ್ಣಿನ ಸುತ್ತ ಕಪ್ಪು ಕಲೆಗಳ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಒಂದು ಕೆಲಸ ಮಾಡಿ..Dark Circles

Dark Circles :  ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆಗಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕಂಡು…

ಮಾವಿನ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿದೆ…mangoes

mangoes : ಮಾವು ಹಣ್ಣುಗಳ ರಾಜ. ಎಲ್ಲರೂ ಮಾವಿನ ಹಣ್ಣುಗಳಿಗಾಗಿ ಬೇಸಿಗೆಯನ್ನು ಎದುರು ನೋಡುವುದರಲ್ಲಿ ಆಶ್ಚರ್ಯವಿಲ್ಲ.…

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

Battery Drain: ಇದು ಸ್ಮಾರ್ಟ್​ಫೋನ್ ಯುಗ. ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ…