ಬೆಂಗಳೂರು: ಕನ್ನಡದ ‘ಅಮೃತವರ್ಷಿಣಿ’ ಸಿನಿಮಾದಲ್ಲೂ ಅಭಿನಯಿಸಿ ಗಮನ ಸೆಳೆದಿದ್ದ ಬಹುಭಾಷಾ ನಟ ಶರತ್ಬಾಬು ಅನಾರೋಗ್ಯ ಸಂಬಂಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತಿರುವಂಥದ್ದೇ. ಆದರೆ ಈ ಮಧ್ಯೆ ಅವರು ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ದೇವಾಲಯಗಳಲ್ಲಿ ನಾಳೆ ‘ಹನುಮಾನ್ ಚಾಲೀಸಾ’ ಪಠಣ
ನಟ ಕಮಲಹಾಸನ್ ಅವರು ಶರತ್ಬಾಬುವನ್ನು ಸಹೋದರ, ಗೆಳೆಯ, ಹಿತೈಷಿ ಎಂದೆಲ್ಲ ಸಂಬೋಧಿಸಿ, ನೀವು ಸದಾ ನೆನಪಿನಲ್ಲಿರುತ್ತೀರಿ ಎಂದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಆದರೆ ಶರತ್ ಅವರು ಜೀವಂತವಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದರಿಂದ, ಕಮಲಹಾಸನ್ ಇಂದು ರಾತ್ರಿ 9.20ಕ್ಕೆ ಮಾಡಿದ್ದ ಟ್ವೀಟನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಅಲ್ಲದೆ ಶರತ್ ಅವರು ಅನಾರೋಗ್ಯದಲ್ಲಿರುವುದು ನಿಜ. ಆದರೆ ಅವರು ಸಾವಿಗೀಡಾಗಿಲ್ಲ ಎಂದು ಅವರ ಆಪ್ತವರ್ಗದ ಹಲವರು ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ, ಶರತ್ಬಾಬು ಅವರ ಕುರಿತು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಶರತ್ಬಾಬು ಅವರು ಚೇತರಿಸಿಕೊಂಡಿದ್ದು, ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಅವರ ಸಹೋದರಿ ಸ್ಪಷ್ಟನೆ ನೀಡಿದ್ದಾಗಿ ಆಪ್ತಮೂಲಗಳು ತಿಳಿಸಿವೆ.
ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!