ಬೆಂಗಳೂರು: ಕನ್ನಡ ಚಿತ್ರಪ್ರೇಮಿಗಳಿಗೆ ಇಲ್ಲೊಂದು ವಿಶೇಷ ಕೊಡುಗೆ ಇದೆ. ಅದೇನೆಂದರೆ ಬರೀ 99 ರೂಪಾಯಿಗೆ ಅದೂ ಮಾಲ್ನಲ್ಲೇ ಕನ್ನಡ ಸಿನಿಮಾ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ ಇಂದೇ ಈ ಆಫರ್ ಆರಂಭಗೊಂಡಿದ್ದು, ಸೀಮಿತ ಅವಧಿಯಲ್ಲಿ ಮುಗಿಯಲಿದೆ.
ಇದನ್ನೂ ಓದಿ: ದಕ್ಷಿಣದಿಂದ ಉತ್ತರಕ್ಕೂ ಕೊರಗಜ್ಜ: ಹಾವೇರಿಯಲ್ಲಿ ಕರಾವಳಿಯ ಕೋಲ!
ಇತ್ತೀಚಿನ ವರ್ಷಗಳಲ್ಲಿ ಮಲ್ಟಿಪ್ಲೆಕ್ಸ್, ಥಿಯೇಟರ್ಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಕನ್ನಡ ಚಿತ್ರಗಳು ನಲುಗುತ್ತಿವೆ. ಇನ್ನು ಮಲ್ಟಿಪ್ಲೆಕ್ಸ್ಗೆ ಹೋದರೆ ಟಿಕೆಟ್ ದರ ಕೂಡ ಜಾಸ್ತಿಯೇ. ಈ ಎಲ್ಲ ಕಾರಣಗಳಿಂದಾಗಿ ಮಲ್ಟಿಪ್ಲೆಕ್ಸ್ಗೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ. ಆದರೆ, ಮತ್ತೆ ಕನ್ನಡದ ಪ್ರೇಕ್ಷಕರನ್ನು ಮಲ್ಟಿಪ್ಲೆಕ್ಸ್ಗಳಿಗೆ ಕರೆತರಲೇಬೇಕು ಎಂದು ಮಾಲೀಕರು ನಿರ್ಧರಿಸಿದಂತಿದೆ. ಹೀಗಾಗಿ ಬಂಪರ್ ಕೊಡುಗೆ ಮೂಲಕ ತನ್ನತ್ತ ಸೆಳೆಯುವ ಪ್ರಯತ್ನ ಪಿವಿಆರ್ ಐನಾಕ್ಸ್ ಮಾಡುತ್ತಿದೆ.
ಇದನ್ನೂ ಓದಿ: ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಬಾಲಕರು ಸ್ಥಳದಲ್ಲಿಯೇ ಮೃತ
“ಕನ್ನಡ ಸ್ಪೆಷಲ್ ‘ ಎಂಬ ವಿಶೇಷ ಆಫರ್ನಲ್ಲಿ ಮೇ 19ರಿಂದ ಮೇ 25ರವರೆಗೆ ಕನ್ನಡದ ಹಿಟ್ ಸಿನಿಮಾಗಳು ಮಲ್ಟಿಪ್ಲೆಕ್ಸ್ಗಳಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಪುನೀತ್ ರಾಜಕುಮಾರ್ ಅಭಿನಯದ “ರಾಜಕುಮಾರ’ ಮತ್ತು “ಗಂಧದ ಗುಡಿ’, ಯಶ್ ಅಭಿನಯದ “ಕೆಜಿಎಫ್-1′ ಮತ್ತು “ಮಾಸ್ಟರ್ಪೀಸ್’, ಶಿವರಾಜಕುಮಾರ್, ಶ್ರೀಮುರಳಿ ಅಭಿನಯದ “ಮಫ್ತಿ’, ಹಾಗೂ ರಾಜ್ ಬಿ. ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ, ರಿಷಬ್ ಶೆಟ್ಟಿ ಕೂಡ ನಟಿಸಿರುವ “ಗರುಡ ಗಮನ, ವೃಷಭ ವಾಹನ’ ಚಿತ್ರಗಳು ಬಿಡುಗಡೆಯಾಗಲಿವೆ. ಈ ಪ್ರದರ್ಶನಗಳಿಗೆ ಕೇವಲ 99 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ.
ಅಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಂದು ಬಿ.ಎಲ್.ಸಂತೋಷ್ ಮರುಪ್ರಶ್ನೆ!: ವಿಷಯ ಇದು..
ಹೆಲ್ಮೆಟ್ ಧರಿಸದ ಮಹಿಳಾ ಪಿಎಸ್ಐ; ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲು, ದಂಡ ವಿಧಿಸಿದ ಪೊಲೀಸರು