ಚಾಕು ದಾಳಿ ಡ್ರಾಮಾನಾ? ಆಗಿದ್ದು ಸಣ್ಣ ಗಾಯಗಳಾ? ಕಾರುಗಳಿದ್ರೂ ಆಟೋದಲ್ಲಿ ಹೋಗಿದ್ದೇಕೆ? ಕೊನೆಗೂ ಉತ್ತರ ಕೊಟ್ಟ ಸೈಫ್​! Saif Ali Khan

Saif Ali Khan

Saif Ali Khan : ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಮೇಲೆ ಚಾಕು ದಾಳಿ ನಡೆದು ಸುಮಾರು ಒಂದು ತಿಂಗಳು ಸಮೀಪಿಸುತ್ತಿದೆ. ಆದರೂ ಈ ಘಟನೆಯ ಬಗ್ಗೆ ಆಗಾಗ ಜನರು ಮಾತನಾಡುತ್ತಿದ್ದಾರೆ. ಅದಕ್ಕೆ ಕಾರಣ ಈ ಘಟನೆಯ ಬಳಿಕ ನಡೆದ ಕೆಲವು ಸಂಗತಿಗಳು. ಸ್ಟಾರ್​ ನಟನೊಬ್ಬನ ಮನೆಗೆ ಭಾರಿ ಭದ್ರತೆಯ ನಡುವೆ ಅಪರಿಚಿತನೊಬ್ಬ ನುಗ್ಗಿ ದಾಳಿ ಮಾಡಿದ್ದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ಸೈಫ್​ ಅಲಿ ಖಾನ್​ ನಡೆದುಕೊಂಡು ಬಂದ ರೀತಿಯು ಕೂಡ ಅನೇಕ ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ಐಷಾರಾಮಿ ಕಾರುಗಳು ಇರುವಾಗ ಸಾಮಾನ್ಯ ಆಟೋ ರಿಕ್ಷಾದಲ್ಲಿ ಹೋಗಿದ್ದೇಕೆ ಎಂಬ ಪ್ರಶ್ನೆಯು ಇದೆ. ಇದೆಲ್ಲವೂ ಸಿಂಪತಿಗಾಗಿ ಮಾಡಿದ ನಾಟಕನಾ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆಲ್ಲ ಇದೀಗ ಸ್ವತಃ ಸೈಫ್​ ಅಲಿ ಖಾನ್​ ಅವರೇ ಉತ್ತರವನ್ನು ನೀಡಿದ್ದಾರೆ.

ದಾಳಿಯ ನಂತರ ಇದೇ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸೈಫ್​ ಅಲಿ ಖಾನ್​, ಅನೇಕ ಸಂದೇಹಗಳಿಗೆ ಉತ್ತರವನ್ನು ನೀಡಿದ್ದಾರೆ. ಮೊದಲು ಘಟನೆ ನಡೆದ ದಿನ ರಾತ್ರಿ ಏನು ನಡೆಯಿತು ಎಂಬುದನ್ನು ಸೈಫ್​ ವಿವರಿಸಿದರು.

ಕರೀನಾ ಊಟಕ್ಕಾಗಿ ಹೊರಗಡೆ ಹೋಗಿದ್ದಳು ಮತ್ತು ನನಗೆ ಬೆಳಗ್ಗೆ ಸ್ವಲ್ಪ ಮುಖ್ಯವಾದ ಕೆಲಸವಿತ್ತು. ಹಾಗಾಗಿ ನಾನು ಮನೆಯಲ್ಲೇ ಇದ್ದೆ. ಊಟ ಮುಗಿಸಿ ಕರೀನಾ ಮನೆಗೆ ಹಿಂತಿರುಗಿದಳು. ನಾವಿಬ್ಬರು ಮಾತನಾಡುತ್ತಾ ಮಲಗಿದೆವು. ಇದಾದ ಸ್ವಲ್ಪ ಸಮಯದ ನಂತರ, ಮನೆಯ ಸಹಾಯಕನೊಬ್ಬ ನಮ್ಮ ರೂಮಿಗೆ ಓಡಿ ಬಂದನು. ಯಾರೋ ಒಬ್ಬ ಮನೆಗೆ ನುಸುಳಿದ್ದಾನೆ. ಆತ ಜೆಹ್‌ನ ಕೋಣೆಯಲ್ಲಿದ್ದು, ಚಾಕು0 ತೋರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದರು. ಆಗ ಸಮಯ ಸುಮಾರು 2 ಗಂಟೆಯಾಗಿತ್ತು. ಸಮಯ ಸರಿಯಾಗಿ ನೆನಪಿಲ್ಲ. ಆ ಸಂದರ್ಭದಲ್ಲಿ ಯಾರು ತಾನೇ ಟೈಂ ನೋಡ್ತಾರೆ. ಆದರೆ, ತುಂಬಾ ತಡವಾಗಿತ್ತು.

ಸಹಾಯಕ ಹೇಳಿದ್ದನ್ನು ಕೇಳಿ ತಕ್ಷಣ ಅಲ್ಲಿಗೆ ಓಡಿ ಹೋದೆ. ಈ ವೇಳೆ ಆ ವ್ಯಕ್ತಿ ಜೆಹ್‌ನ ಹಾಸಿಗೆಯ ಮೇಲೆ ಇದ್ದನು. ಆತನ ಎರಡೂ ಕೈಗಳಲ್ಲಿ ಚಾಕು ಇತ್ತು ಮತ್ತು ಮುಖವಾಡವೂ ಇತ್ತು. ಅದೊಂದು ಅವಾಸ್ತವಿಕ ದೃಶ್ಯವಾಗಿತ್ತು. ಆತ ಬೆದರಿಕೆ ಹಾಕುತ್ತಿದ್ದನು. ಈ ವೇಳೆ ನಾನು ಓಡಿ ಹೋಗಿ ಅವನನ್ನು ಹಿಡಿದು, ಕೆಳಗೆ ಎಳೆದೆ. ಬಳಿಕ ಇಬ್ಬರ ನಡುವೆ ಕೆಲ ಕಾಲ ಫೈಟ್​ ನಡೆಯಿತು. ಈ ವೇಳೆ ಆತ ನನ್ನ ಬೆನ್ನಿಗೆ ಎಷ್ಟು ಸಾಧ್ಯವೋ ಅಷ್ಟು ಬಲವಾಗಿ ಬಡಿಯುತ್ತಿದ್ದನು. ಆ ಕ್ಷಣದಲ್ಲಿ ನಾನು ತುಂಬಾ ಆಘಾತದಲ್ಲಿ ಇದ್ದುದ್ದರಿಂದ ಆತನ ಹೊಡೆತದ ನೋವು ಅನುಭವಕ್ಕೆ ಬರಲಿಲ್ಲ. ಇದಾದ ಬಳಿಕ ಆತ ನನ್ನ ಕುತ್ತಿಗೆಗೆ ಸೀಳಲು ಪ್ರಯತ್ನಿಸಿದನು. ನಾನದನ್ನು ನನ್ನ ಕೈಯಿಂದ ತಡೆಯುತ್ತಿದ್ದೆ. ನನ್ನ ಅಂಗೈ, ನನ್ನ ಮಣಿಕಟ್ಟು ಮತ್ತು ತೋಳಿಗೆ ಆತ ಚಾಕುವಿನಿಂದ ಚುಚ್ಚಿದನು. ಈ ವೇಳೆ ತುಂಬಾ ಹಿಂಸೆ ಆಯಿತು. ಆದರೂ ನಾನು ಅವನೊಂದಿಗೆ ಹೋರಾಡುತ್ತಿದ್ದೆ. ಆದರೆ, ಸ್ವಲ್ಪ ಸಮಯದ ನಂತರ ನನಗೆ ನಿಭಾಯಿಸಲು ಸಾಧ್ಯವಾಗಲಿಲ್ಲ. ಏಕೆಂದರೆ, ಆತ ಎರಡೂ ಚಾಕುಗಳಿಂದ ದಾಳಿ ಮಾಡುತ್ತಿದ್ದನು. ಈ ವೇಳೆ ನಾನು ಬರಿಗಾಲಿನಲ್ಲಿ, ಕುರ್ತಾ ಪೈಜಾಮಾದಲ್ಲಿದ್ದೆ. ಕೈಯಲ್ಲೂ ಯಾವುದೇ ವಸ್ತು ಇರಲಿಲ್ಲ. ಆ ಸಮಯದಲ್ಲಿ ಯಾರಾದರೂ ಆತನನ್ನು ನನ್ನಿಂದ ದೂರ ಎಳೆದುಕೊಂಡರೆ ಸಾಕು ಎಂದು ಪ್ರಾರ್ಥಿಸುತ್ತಿದ್ದೆ. ಅಷ್ಟರಲ್ಲಿ ನಮ್ಮ ಮನೆಗೆಲಸಗಾರ್ತಿ (ಗೀತಾ) ಅವನನ್ನು ನನ್ನಿಂದ ಎಳೆದು ದೂರ ತಳ್ಳಿದಳು. ಬಳಿಕ ನಾವಿಬ್ಬರೂ ಸ್ವಲ್ಪ ದೂರ ಉರುಳಿ ಬಾಗಿಲು ಮುಚ್ಚಿದೆವು. ಆ ಸಮಯದಲ್ಲಿ ನಾನು ರಕ್ತದಲ್ಲಿ ಮುಳುಗಿದ್ದೆ ಮತ್ತು ನನ್ನ ಬಲಗಾಲಿನಲ್ಲಿ ಸ್ವಲ್ಪ ಸಂವೇದನೆ ಕಳೆದುಕೊಂಡೆ. ಏಕೆಂದರೆ, ಬೆನ್ನುಮೂಳೆಗೆ ಚಾಕುವಿನಿಂದ ಇರಿದಿದ್ದ. ಆದರೆ, ಆ ಸಮಯದಲ್ಲಿ ನನಗೆ ಅದು ತಿಳಿದಿರಲಿಲ್ಲ. ಬಹುಶಃ ನನ್ನ ಕಾಲಿಗೆ ಇರಿತವಾಗಿದೆ ಎಂದು ನಾನು ಭಾವಿಸಿದೆ. ಆಗಲೂ ಆ ವ್ಯಕ್ತಿಯೊಂದಿಗೆ ಹೋರಾಡಲು ಏನಾದರೂ ಹುಡುಕಲು ನಾನು ಮೇಲಕ್ಕೆ ಹೋದೆ. ಈ ಮಧ್ಯೆ, ಕರೀನಾ, ಜೆಹ್​ನನ್ನು ಹೊರಗೆ ಕರೆದುಕೊಂಡು ಟಿಮ್‌ನ ಕೋಣೆಗೆ ಹೋದಳು. ನಾನು ಫೈಟ್​ ಮಾಡುವಾಗಲೇ ಜೆಹ್​ ಎಚ್ಚರಗೊಂಡಿದ್ದ. ಅದರ ನಡುವೆ ಕರೀನಾ ಆತನನ್ನು ಕರೆದುಕೊಂಡು ಹೋದಳು. ಬಳಿಕ ನಾವೆಲ್ಲರೂ ಮೇಲಿನ ಮಹಡಿಯಲ್ಲಿ ಒಟ್ಟುಗೂಡಿದೆವು.

ಗೀತಾ ಹೊರಗಿನಿಂದ ಬಾಗಿಲು ಮುಚ್ಚಿದ್ದಳು. ಆದ್ದರಿಂದ ಅವನು ಒಳಗೆ ಲಾಕ್ ಆಗಿದ್ದಾನೆಂದು ನಾವು ಭಾವಿಸಿದೆವು. ಆದರೆ, ಆತ ತಾನು ಬಂದ ದಾರಿಯಿಂದ ತಪ್ಪಿಸಿಕೊಂಡನು. ಆದರೆ, ಆ ವಿಚಾರ ನಮಗೆ ತಿಳಿದಿರಲಿಲ್ಲ. ಆತ ಮಕ್ಕಳ ಸ್ನಾನಗೃಹಕ್ಕೆ ಹೊಂದಿಕೊಂಡಿರುವ ಡ್ರೈನ್ ಪೈಪ್ ಮೂಲಕ ಹೋದನೆಂದು ಭಾವಿಸಿದೆವು. ಅವನನ್ನು ಮತ್ತೆ ಹಿಡಿಯೋಣ ಅಂದುಕೊಂಡೆವು. ಆದರೆ, ನನ್ನ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ಆದ್ದರಿಂದ ಕರೀನಾ ಬೇಡ ಆಸ್ಪತ್ರೆಗೆ ಹೋಗೋಣ ಎಂದಳು. ಅಲ್ಲದೆ, ಜೆಹ್‌ನನ್ನು ಅಲ್ಲಿಂದ ಹೊರಗೆ ಕರೆದೊಯ್ಯಬೇಕಿತ್ತು. ಏಕೆಂದರೆ, ನುಸುಳುಕೋರ ತಮ್ಮ ಸುತ್ತಲೂ ಇರುವಂತೆ ಅನಿಸಿತು. ನಂತರ ನಾವೆಲ್ಲರೂ ಕೆಳಗೆ ಹೋದೆವು. ಕರೀನಾ ರಿಕ್ಷಾ, ಕ್ಯಾಬ್ ಅಥವಾ ಇನ್ನಾವುದೇ ವಾಹನಕ್ಕಾಗಿ ಕೂಗುತ್ತಿದ್ದಳು. ನನಗೆ ಸ್ವಲ್ಪ ನೋವಾಗುತ್ತಿದೆ ಎಂದೆ. ನನ್ನ ಬೆನ್ನಿನಲ್ಲಿ ಏನೋ ತೊಂದರೆ ಇದೆ ಎಂದೆ. ಮೊದಲು ನೀನು ಆಸ್ಪತ್ರೆಗೆ ಹೋಗು, ನಾನು ನನ್ನ ಸಹೋದರಿಯ ಮನೆಗೆ ಹೋಗುತ್ತೇನೆ ಎಂದಳು. ನಾವು ಒಬ್ಬರನ್ನೊಬ್ಬರು ನೋಡಿದೆವು, ನಾನು ಚೆನ್ನಾಗಿದ್ದೇನೆ ಮತ್ತು ನಾನೇನು ಸಾಯುವುದಿಲ್ಲ ಎಂದು ಆಕೆಗೆ ಧೈರ್ಯ ಹೇಳಿದೆ. ತೈಮೂರ್​ ಕೂಡ ನೀನು ಸಾಯುತ್ತೀಯಾ ಎಂದು ಕೇಳಿದಾ, ಅದಕ್ಕೆ ನಾನು ಇಲ್ಲ ಎಂದೆ.

ಇದನ್ನೂ ಓದಿ: ಭಾರತದ ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಗೆ ಇಬ್ಬರು ಹೆಂಡ್ತಿಯರು ಇರಲೇಬೇಕು! ಕಾರಣ ಕೇಳಿದ್ರೆ ಅಚ್ಚರಿ ಖಚಿತ | Two Wives

ಬಳಿಕ ರಿಕ್ಷಾದವನು ಬಂದನು. ಆ ರಿಕ್ಷಾದವನಿಗೆ ರಕ್ತ ಕಾಣಿಸಿತು ಮತ್ತು ಏನೋ ಆಗಿದೆ ಅಂತ ಅವನಿಗೆ ಅರ್ಥವಾಯಿತು. ಆದರೆ, ಅಲ್ಲಿಯೇ ತೈಮೂರ್​ ಇದ್ದಿದ್ದರಿಂದ ಆತ ಏನೂ ಮಾತನಾಡದೇ ಗೌರವಯುತವಾಗಿ ನಡೆದುಕೊಂಡನು. ತಕ್ಷಣ ಆತನ ನನ್ನನ್ನು ಲೀಲಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದನು. ಬೆನ್ನಿನಲ್ಲಿ ಚಾಕು ಚುಚ್ಚಿದ್ದರೂ ಒಂದೂವರೆ ಗಂಟೆಗಳ ಕಾಲ ಏನು ಮಾಡುತ್ತಿದ್ದ? ಎಂದು ಪ್ರಶ್ನಿಸಬಹುದು. ಆದರೆ, ಚಾಕು ಇರುವ ಅನುಭವ ನನಗೆ ಆಗಲಿಲ್ಲ. ನೋವು ತೀವ್ರವಾದ ಬಳಿಕ ನಾನು ಕೆಳಗೆ ಹೋಗಿ, ಹೊರಗೆ ಹೋದೆ ಎಂದು ಸೈಫ್​ ಹೇಳಿದರು.

ಇದೇ ಸಂದರ್ಭದಲ್ಲಿ ಕಾರುಗಳಿದ್ದರೂ ಆಟೋದಲ್ಲಿ ಹೋಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸೈಫ್​, ರಾತ್ರಿಯಿಡೀ ಇಲ್ಲಿ ಯಾರೂ ಉಳಿಯುವುದಿಲ್ಲ. ಎಲ್ಲರಿಗೂ ಮನೆ ಇರುತ್ತೆ ಅಲ್ವಾ? ಅವರು ಮನೆಗೆ ಹೋಗುತ್ತಾರೆ. ನಮ್ಮ ಮನೆಯಲ್ಲಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಅವರು ಚಾಲಕರಲ್ಲ. ನೀವು ರಾತ್ರಿ ಹೊರಗೆ ಹೋಗುವುದಿದ್ದರೆ ಅಥವಾ ಏನಾದರೂ ಅಗತ್ಯವಿದ್ದರೆ, ಚಾಲಕರನ್ನು ಉಳಿದುಕೊಳ್ಳಲು ಹೇಳುತ್ತೀರಿ. ಆದರೆ, ಅಂದು ಯಾವುದೇ ಅಗತ್ಯ ಇರಲಿಲ್ಲ. ಇಂದು ವೇಳೆ ಅಂದು ಕಾರಿನ ಕೀ ನನಗೆ ಸಿಕ್ಕಿದ್ದರೆ, ನಾನೇ ಕಾರನ್ನು ಓಡಿಸುತ್ತಿದ್ದೆ. ಅದೃಷ್ಟವಶಾತ್, ನಾನು ಹಾಗೆ ಮಾಡಲಿಲ್ಲ. ಏಕೆಂದರೆ, ನನ್ನ ಬೆನ್ನನ್ನು ಹೆಚ್ಚು ಅಲುಗಾಡಿಸಬಾರದಿತ್ತು. ನಾನು ಕರೆ ಮಾಡಿ ಕರೆಯಬಹುದಿಲ್ಲ. ಆದರೆ, ಆತ ಅಲ್ಲಿಗೆ ಬರಲು ಸಮಯವಾಗುತ್ತದೆ ಎಂಬುದು ನನಗೆ ತಿಳಿದಿತ್ತು. ಅಲ್ಲದೆ, ನಾನು ಬೇಗನೆ ಆಸ್ಪತ್ರೆಗೆ ಹೋಗಬೇಕೆಂದು ತಿಳಿದಿತ್ತು. ಹೀಗಾಗಿ ಆಟೋದಲ್ಲಿ ಹೋದೆನು ಎಂದು ಸೈಫ್​ ಹೇಳಿದರು.

ಮೊದಲೇ ಊಹಿಸಿದ್ದೆ

ಇಂತಹ ಘಟನೆ ನಡೆದ ಬಳಿಕ ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ ಎಂದು ನಾನು ಮೊದಲೇ ನಿರೀಕ್ಷಿಸಿದ್ದೆ. ಏನೇ ನಡೆದರೂ ಅದನು ಅಪಹಾಸ್ಯ ಮಾಡುವ ಜನರಿರುತ್ತಾರೆ. ಅದನ್ನು ನಂಬದ ಜನರು, ಅದನ್ನು ಗೇಲಿ ಮಾಡುವ ಜನರು ಇರುತ್ತಾರೆ. ಅದು ಕೂಡ ಸರಿಯೇ. ಏಕೆಂದರೆ, ಒಂದು ಜಗತ್ತು ಅಂದಮೇಲೆ ಅಲ್ಲಿ ವಿವಿಧ ರೀತಿಯ ಜನರು ಇರಲೇಬೇಕೆಂದು ನಾನು ಭಾವಿಸುತ್ತೇನೆ. ಆದರೆ, ಅವರಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನನಗೆ ಸ್ಪಷ್ಟವಾದ ವಿಷಯವೆಂದರೆ ಈ ಜಗತ್ತಿನಲ್ಲಿ ತುಂಬಾ ದಯೆಯೂ ಇದೆ. ಬೆಂಬಲದ ಮಾತುಗಳನ್ನು ಹೇಳುವ ಮೂಲಕ ನಿಮ್ಮನ್ನು ಹೇಗೆ ಉತ್ತಮಗೊಳಿಸಬೇಕೆಂದು ತಿಳಿದಿರುವ ಅನೇಕ ಅದ್ಭುತ ಜನರು ಕೂಡ ಇದ್ದಾರೆ. ಆಸ್ಪತ್ರೆಯ ವಾರ್ಡ್ ಹುಡುಗರು ಮತ್ತು ವೈದ್ಯರಿಂದ ಹಿಡಿದು ರಿಕ್ಷಾ ಚಾಲಕನವರೆಗೆ, ಅವರೆಲ್ಲರೂ ಕೇವಲ ದೇವರುಗಳಾಗಿದ್ದರು. ಸ್ವರ್ಗದಿಂದ ಕಳುಹಿಸಲ್ಪಟ್ಟವರು ಅನಿಸಿದರು. ಜಗತ್ತಿನಲ್ಲಿ ಬಹಳಷ್ಟು ದಯೆ ಮತ್ತು ಸಾಕಷ್ಟು ಮೂರ್ಖತನವೂ ಇದೆ. ಇದೇ ಕೆಲವೊಂದನ್ನು ಆಸಕ್ತಿದಾಯಕವಾಗಿಸುತ್ತದೆ ಎಂದು ಟೀಕಾಕಾರಿಗೆ ಸೈಫ್​ ತಿರುಗೇಟು ನೀಡಿದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಹೊರ ಬಂದಾಗ ನಗು ನಗುತ್ತಾ ಕೈಬೀಸಿ ಬಂದಿದ್ದನ್ನು ನೋಡಿ ಕೆಲವರು ಟೀಕಿಸಿದ್ದಕ್ಕೆ ಸೈಫ್​ ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು. ಇದಕ್ಕೆ ಏನೆಂದು ಹೇಳುವುದು ಗೊತ್ತಾಗುತ್ತಿಲ್ಲ. ಆಸ್ಪತ್ರೆಯಿಂದ ಹೊರಗೆ ಬರುವಾಗ ಮಾಮೂಲಿಯಂತೆ ನಡೆದುಕೊಂಡು ಬಂದರೆ, ಸಹಜವಾಗಿಯೇ ಏನು ಆಗಿಲ್ಲ ಅಂತ ನಿಮಗೆ ಅನಿಸುತ್ತದೆ. ನಾನು ಆಸ್ಪತ್ರೆಯಿಂದ ಹೇಗೆ ಹೊರಗೆ ನಡೆದುಕೊಂಡು ಬಂದೆ ಎಂಬುದು ನನ್ನ ಸಹಜ ಪ್ರವೃತ್ತಿಯಾಗಿತ್ತು. ನಾನು ಆಸ್ಪತ್ರೆಯ ಒಳಗೂ ಹೋಗಿದ್ದೆ ಮತ್ತು ನಾನು ನನ್ನಷ್ಟಕ್ಕೆ ನಡೆದಾಡಲು ಇಷ್ಟಪಡುತ್ತೇನೆ ಹೊರತು ಅದು ಪ್ರದರ್ಶನಕ್ಕಾಗಿ ಅಥವಾ ಬೇರೇನೂ ಅಲ್ಲ. ಹೇಗೆ ಪ್ರಸ್ತುತಪಡಿಸಬೇಕೆಂದು ನಾನು ಎಂದಿಗೂ ಯೋಚಿಸುವುದಿಲ್ಲ. ಪಿಆರ್ ಅಂಶವನ್ನು ಹೆಚ್ಚು ಪರಿಗಣಿಸಿದಾಗ, ನನ್ನ ಜೀವನವು ನಿಜವಾಗಿಯೂ ಆಸಕ್ತಿದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ, ಇಂತಹ ವಿಚಾರದಲ್ಲಿ ಯಾವುದೇ ತಿರುವು ನೀಡಬೇಕಾದ ಅಗತ್ಯವಿಲ್ಲ. ಅದನ್ನು ತಿರುಚಿ ಪ್ರಸ್ತುತಪಡಿಸುವ ಅಗತ್ಯವಿಲ್ಲ. ಹಾಗಾಗಿ, ನನ್ನ ಅಭಿಪ್ರಾಯವೇನೆಂದರೆ, ಇದು ಉತ್ಪ್ರೇಕ್ಷಿತ ಗಾಯವಲ್ಲ. ಇದು ಪವಾಡ ರೀತಿಯಲ್ಲಿ ಬದುಕುಳಿಯುವಿಕೆ. ಅದರ ನಂತರವೂ ಹೆಚ್ಚು ಹೊತ್ತು ನಡೆಯುವುದು ಇನ್ನೂ ನೋವಿನ ಸಂಗತಿಯಾಗಿದೆ. ನೋವುಗಳು ಹಾಗೆಯೇ ಇವೆ, ಆದರೆ ಅವು ಪ್ರತಿದಿನ ಸುಧಾರಿಸುತ್ತಿವೆ ಮತ್ತು ಅದು ಸಂಪೂರ್ಣ ಚೇತರಿಕೆಯಾಗುತ್ತದೆ ಎನ್ನುವ ಮೂಲಕ ಎಲ್ಲ ಸಂದೇಹಗಳಿಗೆ ಸೈಫ್​ ಉತ್ತರಿಸಿದರು. (ಏಜೆನ್ಸೀಸ್​)

ಇಂದು ನನಗೆ… ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಗೆದ್ದ ಬೆನ್ನಲ್ಲೇ ರೋಹಿತ್​ ಶರ್ಮ ಅಚ್ಚರಿ ಮಾತು! Rohit Sharma

ಸಲ್ಲು ಭಾಯ್ ಪ್ರತಿ​ ದಿನ ಎಷ್ಟು ಗಂಟೆ ನಿದ್ದೆ ಮಾಡ್ತಾರೆ ಗೊತ್ತಾ? ತಿಂಗಳ ಲೆಕ್ಕ ಕೇಳಿದ್ರೆ ಹುಬ್ಬೇರೋದು ಖಚಿತ! Salman Khan

ಪ್ರತಿದಿನ ರೇಷನ್​ ಅಕ್ಕಿ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ! Ration Rice

Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…