Sachin Tendulkar : ಕ್ರಿಕೆಟ್ ದಂತಕಥೆ, ಭಾರತರತ್ನ, ಟೀಮ್ ಇಂಡಿಯಾದ ಮಾಜಿ ಸ್ಟಾರ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ಅಂತರರಾಷ್ಟ್ರೀಯ (ODI) ಎರಡರಲ್ಲೂ ಅತಿ ಹೆಚ್ಚು ರನ್ ಗಳಿಸಿದ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು (ಒಂದೇ ಇನ್ನಿಂಗ್ಸ್ನಲ್ಲಿ 100 ರನ್ಗಳು ) ಗಳಿಸಿದ ಮೊದಲ ಕ್ರಿಕೆಟಿಗ.
ಇದನ್ನೂ ಓದಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಖಾಲಿ ಮಾಡಿ| ಪಾಕ್ ಸೇನಾ ಮುಖ್ಯಸ್ಥನ ವಿವಾದಾತ್ಮಕ ಹೇಳಿಕೆಗೆ ಭಾರತ ತಿರುಗೇಟು
ಹೌದು, ಸಚಿನ್ ಬಗ್ಗೆ ಎಷ್ಟು ಹೊಗಳಿದರು ಸಾಲದು. ಇದೀಗ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿವ ಅವರ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಕ್ರಿಕೆಟ್ ಆಡುವ ಸಮಯದಲ್ಲಿ ಕೆಲ ಕಂಪನಿಯು ನನಗೆ ಖಾಲಿ ಚೆಕ್ ನೀಡುತ್ತಿತ್ತು. ಆದರೆ, ನನ್ನ ತಂದೆಯ ಮಾತನಿಂದಾಗಿ ಅವರು ಅದನ್ನು ತಿರಸ್ಕರಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಏಕೆ? ಏನು ಎಂಬುದು ತಿಳಿಯೋಣ..
ಇಂದಿನ ಕ್ರಿಕೆಟಿಗರನ್ನು ನೋಡಿದರೆ, ಟೀಮ್ ಇಂಡಿಯಾ ಪರ ಆಡುವುದರ ಜತೆಗೆ, ಅವರು ಅನೇಕ ಕಂಪನಿಗಳಿಗೆ ಬ್ರಾಂಡ್ ಅನುಮೋದನೆಗಳನ್ನು ನೀಡುವುದನ್ನು ಸಹ ಕಾಣಬಹುದು. ಬಹುತೇಕ ಕ್ರಿಕೆಟಿಗರು ಹಣಕ್ಕಾಗಿ ಬೆಟ್ಟಿಂಗ್ ಆ್ಯಪ್ ನಂತಹ ಕ್ರಿಕೆಟ್ ಫ್ಯಾಂಟಸಿ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುತ್ತಾರೆ. ಆದರೆ, ಸಚಿನ್ ಇದುವರೆಗೂ ಒಂದೇ ಒಂದು ಬೆಟ್ಟಿಂಗ್ ಆ್ಯಪ್ ಪ್ರಚಾರಕ್ಕೆ ಮುಂದೆ ಬಂದಿಲ್ಲ. ಅಲ್ಲದೆ, ಅವರು ಕ್ರಿಕೆಟ್ ಆಡುವ ಸಮಯದಲ್ಲಿ ತಂಬಾಕು ಉತ್ಪನ್ನ ಜಾಹಿರಾತು ಪ್ರಚಾರಗಳಿಗೆ ಅನೇಕ ಕಂಪನಿಗಳು ದುಂಬಾಲು ಬಿದ್ದಿದ್ದರು.ಆದರೆ, ಅದನೆಲ್ಲಾ ತಿರಸ್ಕರಿಸಿದ್ದೆ ಎಂದಿದ್ದಾರೆ.
ಸಚಿನ್ ಹೇಳಿದ್ದೇನು..?
“ನಾನು ಭಾರತ ಪರ ಆಡಲು ಪ್ರಾರಂಭಿಸಿದಾಗ, ನಾನು ಶಾಲೆಯನ್ನು ಬಿಟ್ಟಿದ್ದೆ. ನನಗೆ ಅನೇಕ ಜಾಹೀರಾತು ಕೊಡುಗೆಗಳು ಬರಲು ಪ್ರಾರಂಭಿಸಿದವು, ಆದರೆ ನನ್ನ ತಂದೆ ಯಾವುದೇ ತಂಬಾಕು ಉತ್ಪನ್ನಗಳನ್ನು ಎಂದಿಗೂ ಪ್ರಚಾರ ಮಾಡಬೇಡಿ ಎಂದು ಹೇಳಿದ್ದರು. ನಾನು ಎಂದಿಗೂ ತಂಬಾಕನ್ನು ಪ್ರಚಾರ ಮಾಡಲಿಲ್ಲ. ಕಂಪನಿಯ ಮಾಲೀಕರು ಸಹ ನನಗೆ ಖಾಲಿ ಚೆಕ್ಗಳನ್ನು ನೀಡಲು ಸಿದ್ಧರಿದ್ದರು” ಎಂದು ಸಚಿನ್ ತೆಂಡೂಲ್ಕರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇದು ನಾನು ನನ್ನ ತಂದೆಗೆ ನೀಡಿದ ಭರವಸೆ. ನಾನು ಅವರ ಮಾತನ್ನು ಇಂದಿಗೂ ಉಳಿಸಿಕೊಂಡಿದ್ದೇನೆ. ಅದಕ್ಕಾಗಿಯೇ ನಾನು ಎಂದಿಗೂ ತಂಬಾಕು ಉತ್ಪನ್ನಗಳು ಅಥವಾ ಮದ್ಯವನ್ನು ಜಾಹೀರಾತು ಮಾಡಲಿಲ್ಲ. 1990 ರ ದಶಕದಲ್ಲಿ ನನ್ನ ಬ್ಯಾಟ್ ಮೇಲೆ ಯಾವುದೇ ಸ್ಟಿಕ್ಕರ್ ಇರಲಿಲ್ಲ. ಏಕೆಂದರೆ ನನಗೆ ಯಾವುದೇ ಒಪ್ಪಂದವಿರಲಿಲ್ಲ ಎಂದು ಸಚಿನ್ ಹೇಳಿದರು.(ಏಜೆನ್ಸೀಸ್)
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಅಭಿಷೇಕ್ ಶರ್ಮ, ನಿತೀಶ್ ರೆಡ್ಡಿ, ಹರ್ಷಿತ್ ರಾಣಾ ಸೇರ್ಪಡೆ?
ತವರಿನಲ್ಲೂ ಗೆಲ್ಲುವ ಹಂಬಲದಲ್ಲಿ ಆರ್ಸಿಬಿ; ಇಂದು ಪಂಜಾಬ್ ಕಿಂಗ್ಸ್ ಸವಾಲು