blank

ನಾನೇನಾದರೂ ಹೆಣ್ಣಾಗಿದ್ದರೆ… ಚೆನ್ನೈನಲ್ಲಿ ನಟ ಶಿವರಾಜಕುಮಾರ್ ಕೊಟ್ಟ ಇಂಟೆರೆಸ್ಟಿಂಗ್​ ಹೇಳಿಕೆ ವೈರಲ್​! Shiva Rajkumar

Shiva Rajkumar

Shiva Rajkumar : ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ನಟನೆಯ 45 ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಎಸ್‌ಪಿ ಸ್ವರಾಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಮತಿ ಉಮಾ ರಮೇಶ್ ರೆಡ್ಡಿ ಮತ್ತು ಎಂ. ರಮೇಶ್ ರೆಡ್ಡಿ ನಿರ್ಮಿಸಿರುವ ಈ ಚಿತ್ರವು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಆಗಸ್ಟ್ 15 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡ ಈಗಾಗಲೇ ಪ್ರಚಾರ ಆರಂಭಿಸಿದೆ.

ಚಿತ್ರದ ತಮಿಳು ಆವೃತ್ತಿಯ ಟೀಸರ್ ಅನ್ನು ಚೆನ್ನೈನಲ್ಲಿ ಬಿಡುಗಡೆ ಮಾಡಲಾಯಿತು. ರಾಯಪೇಟದ ಸ್ಥಳೀಯ ಪಿವಿಆರ್ ಸತ್ಯಂ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಶಿವ ರಾಜ್‌ಕುಮಾರ್, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯಾ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ಚೆನ್ನೈಗೆ ಬಂದಾಗಲೆಲ್ಲ ನನಗೆ ಸಂತೋಷವಾಗುತ್ತದೆ ಎಂದರು. ನಾನು ಇಲ್ಲಿ ಹುಟ್ಟಿ, ಬೆಳೆದು, ಅಧ್ಯಯನ ಮಾಡಿದೆ ಎಂದು ಹೇಳಿದರು. ಓರ್ವ ನಟನಾಗಿ ನನಗೆ ಮೊದಲ ಅವಕಾಶ ಸಿಕ್ಕಿದ್ದು ಇಲ್ಲೇ ಎಂದರು.

ಚೆನ್ನೈನೊಂದಿಗೆ ನನಗೆ ಅನೇಕ ಸಿಹಿ ನೆನಪುಗಳಿವೆ. ನಾನು ಎಂದಿಗೂ ನಾಯಕನಾಗಲು ಬಯಸಿರಲಿಲ್ಲ ಆದರೆ, ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಅವರಂತೆ ಆಗಬೇಕೆಂದು ಬಯಸಿದ್ದೆ. ಅವರಿಬ್ಬರು ನನ್ನ ಫೇವರಿಟ್​ ಎಂದು ಹೇಳಿದರು. ವಿಶೇಷವಾಗಿ ನಟ ಕಮಲ್ ಹಾಸನ್ ನನಗೆ ಸ್ಫೂರ್ತಿ. ನಾನೇದರೂ ಹುಡುಗಿ ಆಗಿದ್ದರೆ ಅವರನ್ನು ಪ್ರೀತಿಸಿ ಮದುವೆಯಾಗುತ್ತಿದೆ. ಏಕೆಂದರೆ, ಅವರು ತುಂಬಾ ಸುಂದರವಾಗಿದ್ದಾರೆ ಎಂದು ಶಿವಣ್ಣ ಹೇಳಿದರು.

ಇದನ್ನೂ ಓದಿ: ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

ನಟನಾದ ನಂತರ ಅನೇಕ ಯಶಸ್ಸು ಮತ್ತು ವೈಫಲ್ಯಗಳನ್ನು ಅನುಭವಿಸಿದ್ದೇನೆ. ಆದರೆ, ಅವುಗಳನ್ನು ಎಂದಿಗೂ ತಲೆಗೆ ಹಾಕಿಕೊಂಡಿಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇವೆ. ನನ್ನ ಜೀವನದಲ್ಲಿ ಅನೇಕ ನೋವು ಮತ್ತು ದುಃಖಗಳನ್ನು ಎದುರಿಸಿದ್ದೇನೆ. ತಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ ಮತ್ತು ಇತ್ತೀಚೆಗೆ ಕ್ಯಾನ್ಸರ್​ನಿಂದ ಚೇತರಿಸಿಕೊಂಡಿದ್ದೇನೆ ಎಂದು ಹೇಳಿದರು.

45 ಚಿತ್ರದಲ್ಲಿ ನಟಿಸಿದ್ದು ತುಂಬಾ ಸಂತೋಷವಾಯಿತು. ನಿರ್ದೇಶಕ ಅರ್ಜುನ್ ಜನ್ಯಾ ಹೇಳಿದ ತಕ್ಷಣ ಕಥೆ ಇಷ್ಟವಾಯಿತು. ಈ ಚಿತ್ರವು ಪ್ರೇಕ್ಷಕರಿಗೆ ಖಂಡಿತವಾಗಿಯೂ ಹೊಸ ಅನುಭವವನ್ನು ನೀಡುತ್ತದೆ ಎಂಬ ಅಭಿಪ್ರಾಯವನ್ನು ಶಿವಣ್ಣ ವ್ಯಕ್ತಪಡಿಸಿದರು.

ನಿರ್ಮಾಪಕ ಎಂ. ರಮೇಶ್ ರೆಡ್ಡಿ ಅವರು 45 ಚಿತ್ರವನ್ನು ಹಿಂದೆಂದೂ ನೋಡಿರದ ನವೀನ ಕಥಾಹಂದರದೊಂದಿಗೆ ನಿರ್ಮಿಸಲಾಗಿದೆ ಮತ್ತು ಇದು ಯಾವುದೇ ಒಂದು ಭಾಷೆಗೆ ಸೇರದ ಭಾರತೀಯ ಚಿತ್ರ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಮತ್ತೊಂದು ಗ್ರಹದಲ್ಲಿ ಜೀವಿಗಳಿರುವ ಸೂಚನೆ! ಸಾಕ್ಷಿ ಕಂಡುಕೊಂಡ ಭಾರತೀಯ ಮೂಲದ ಈ ವಿಜ್ಞಾನಿ ಯಾರು ಗೊತ್ತಾ? Nikku Madhusudhan

ಈ ಮೂರು ರಾಶಿಯವರು ಹುಟ್ಟಿನಿಂದಲೇ ರಾಜತಾಂತ್ರಿಕ ನಿಪುಣರು, ಯಾರಿಂದಲೂ ಸೋಲಿಸಲಾಗದು! Zodiac Signs

Share This Article

ನೀವು ತಪ್ಪದೇ ಈ ಆಹಾರಗಳನ್ನು ತಿನ್ನಲೇಬೇಕು… ಇವು ಕೆಟ್ಟ ಕೊಲೆಸ್ಟ್ರಾಲ್‌ನ ಶತ್ರುಗಳು! Cholesterol

Cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಅದರಲ್ಲೂ…

ದಾಲ್ಚಿನ್ನಿ ಸೇವನೆ ಪುರುಷರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಯಾಕೆ ಗೊತ್ತಾ? | Cinnamon

Cinnamon: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿ ಭಾರತೀಯರ ಮನೆಗಳಲ್ಲಿ ಹೆಚ್ಚಾಗಿ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ. ಇದು…

ಬೀದಿ ಬದಿ ಅಂಗಡಿಗಳಿಂದ ಜ್ಯೂಸ್​ ಖರೀದಿಸಿ ಕುಡಿಯುವಾಗ ಎಚ್ಚರ… ಈ ಜ್ಯೂಸ್ ಅತ್ಯಂತ ಅಪಾಯಕಾರಿ! Soft Drinks

Soft Drinks : ದೇಶಾದ್ಯಂತ ಬೇಸಿಗೆಯ ಬಿಸಿ ಸುಡುತ್ತಿದೆ. ಸೂರ್ಯ ಶಾಖದಿಂದ ಬಳಲಿ ಬೆಂಡಾದ ಜನರು…