More

    15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ತರಿಕೇರೆ ಮಾಜಿ ಶಾಸಕರ ಮನೆ ದರೋಡೆ: 1 ಕೆಜಿಗೂ ಅಧಿಕ ಚಿನ್ನ, ಹಣ ಲೂಟಿ

    ಚಿಕ್ಕಮಗಳೂರು: ತರಿಕೇರೆಯ ಮಾಜಿ ಶಾಸಕ ಎಸ್​. ಎಂ. ನಾಗರಾಜ್ ಅವರ​ ಮನೆಯಲ್ಲಿ ದರೊಡೆ ನಡೆದಿರುವುದಾಗಿ ವರದಿಯಾಗಿದೆ. ಬಂದೂಕು ಹಾಗೂ ಮಚ್ಚಿನೊಂದಿಗೆ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳಿಂದ ದರೋಡೆ ನಡೆದಿದೆ ಎಂದು ಹೇಳಲಾಗಿದೆ.

    ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ ನಾಗರಾಜ್​​ ಅವರ ತೋಟದ ಮನೆಯಲ್ಲಿ ದರೋಡೆ ನಡೆದಿದೆ. ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿ 1ಕೆಜಿಗೂ ಅಧಿಕ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಇದನ್ನೂ ಓದಿ: ಫೋನ್​​​ ನಂಬರ್​ಗಾಗಿ ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದ ಕಾನ್ಸ್​ಟೆಬಲ್​! ನಂತರ ನಡೆದಿದ್ದಿಷ್ಟು…

    ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಈ ಸಮಯದಲ್ಲಿ ದರೋಡೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಉಮ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪ್ರಕರಣ ದಾಖಲಲಾಗಿದ್ದು, ದುಷ್ಕರ್ಮಿಗಳ ಶೋಧಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ದರೋಡೆಯು ಚುನಾವಣೆ ದ್ವೇಷಕ್ಕಾಗಿ ನಡೆದಿದೆಯೋ? ಅಥವಾ ಹಣಕ್ಕಾಗಿ ನಡೆದಿದೆಯೋ? ಎಂಬ ಪ್ರಶ್ನೆಗೆ ಹುಟ್ಟಿಕೊಂಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ತಿಳಿದುಬರಲಿದೆ. (ದಿಗ್ವಿಜಯ ನ್ಯೂಸ್​)

    ಉಪಾಯ ಅಪಾಯ: ಆ ಕ್ಷಣ ಅಂಕಣ…

    ಬೆಂಗಳೂರಲ್ಲಿಂದು ಪ್ರಧಾನಿ ಮೋದಿಯಿಂದ ಮತ್ತೊಂದು ರೋಡ್ ಶೋ: ಪೊಲೀಸರಿಂದ ಬಿಗಿ ಭದ್ರತೆ

    ಜಲಸುರಂಗ, ಅಚ್ಚರಿ ತರಂಗ: ಹೂಗ್ಲಿ ನದಿಯಡಿ ದೇಶದ ಮೊದಲ ಮೆಟ್ರೋ ಮಾರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts