ನವದೆಹಲಿ: ಟೀಮ್ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ದಿನದಿಂದ ದಿನಕ್ಕೆ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ಮೆಂಟರ್ ಆಗಿ ಅಧಿಕಾರವಹಿಸಿಕೊಂಡ ಗೌತಮ್ ಸಂಯೋಜನೆ ಬದಲಿಸುವ ಮೂಲಕ ತಂಡ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಾದ ಬಳಿಕ ಅವರು ಟೀಮ್ ಇಂಡಿಯಾದ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಿಹಿ-ಕಹಿ ಎರಡು ದೊರೆತಿದೆ.
ಜುಲೈ ಅಂತ್ಯದಲ್ಲಿ ಶ್ರೀಲಂಕಾ ವಿರುದ್ದ ಆರಂಭವಾದ ಸರಣಿಯಲ್ಲಿ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ತಮ್ಮ ಕಾರ್ಯತಂತ್ರದ ಮೂಲಕ ಟಿ20 ಸೀರೀಸ್ಅನ್ನು ಗೆಲ್ಲಿಸಿದ್ದರು. ಅದೇ ರೀತಿ ಏಕದಿನ ಸರಣಿಯಲ್ಲಿ ತಂಡವನ್ನು ಗೆಲ್ಲಿಸಲಿದ್ದಾರೆ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತಾದರೂ ಇಲ್ಲದ ಪ್ರಯೋಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಇದೀಗ ಗೌತಮ್ರನ್ನು ಕೋಚ್ ಸ್ಥಾನದಿಂದ ವಜಾ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಅನುಭವಿಗಳನ್ನು ನೇಮಿಸುವಂತೆ ಕ್ರೀಡಾಭಿಮಾನಿಗಳು ಬಿಸಿಸಿಐಗೆ ಒತ್ತಾಯಿಸಿದ್ದಾರೆ.
ಏಕೆಂದರೆ 17ನೇ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಆಗಿಸಿದ ಬೆನ್ನಲ್ಲೇ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಕೋಚ್ ಆಗಿ ನೇಮಕ ಮಾಡಲಾಯಿತು. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಫ್, 2026ರಲ್ಲಿ ನಡೆಯುವ ಟಿ20 ವಿಶ್ವಕಪ್, 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಗೌತಮ್ ಮುಂದೆ ಬೆಟ್ಟದಷ್ಟು ಸವಾಲಿದ್ದು, ಆರಂಭದಲ್ಲೇ ಎಡವಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇದಲ್ಲದೆ ವೈಯಕ್ತಿಯವಾಗಿಯೂ ಅವರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ.
The Great GG Era starts with first bilateral series loss against Sri Lanka after 27 YEARS. 💥
— CSK Fans Army™ (@CSKFansArmy) August 7, 2024
RESIGN GAUTAM GAMBHIR pic.twitter.com/9VnO6VtKSk
ಇದನ್ನೂ ಓದಿ: ಸೋತಿದ್ದೇವೆ ಎಂದಾಕ್ಷಣ ಪ್ರಪಂಚ… ಏಕದಿನ ಸರಣಿ ಸೋಲಿನ ಬಳಿಕ ರೋಹಿತ್ ಶರ್ಮ ಹೇಳಿದ್ದಿಷ್ಟು
ಏಕೆಂದರೆ ಶ್ರೀಲಂಕಾ ವಿರುದ್ಧ ಭಾರತ ಕಳೆದ 27 ವರ್ಷಗಳಲ್ಲಿ ಯಾವುದೇ ಸರಣಿ ಸೋತಿರಲಿಲ್ಲ. ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಸೋತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಐಪಿಎಲ್ನಲ್ಲಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುವುದೇ ಬೇರೆ, ರಾಷ್ಟ್ರೀಯ ತಂಡದ ಕೋಚ್ ಆಗಿ ಕೆಲಸ ಮಾಡುವುದೇ ಬೇರೆ. ನೀವು ದಯವಿಟ್ಟು ರಾಜೀನಾಮೆ ಕೊಟ್ಟು ಹೊರಟು ಹೋಗಿ, ಇಲ್ಲಾಂದರೆ ಬಿಸಿಸಿಐ ಇವರನ್ನು ತೆಗೆದುಹಾಕುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಒಟ್ಟಿನಲ್ಲಿ ಗೌತಮ್ ಗಂಭೀರ್ ವಿರುದ್ಧ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದು, ಇವರು ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಿಲ್ಲ ಎಂದು ಹೇಳಿದ್ದಾರೆ. ಈ ಎಲ್ಲಾ ಟೀಕೆಗಳಿಗೆ ಗೌತಿ ಮುಂದಿನ ದಿನಗಳಲ್ಲಿ ಹೇಗೆ ಉತ್ತರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
Welcome to Gautam Gambhir era freinds 🔥👌
— Shivam Dubey (@ShivamDubey45) August 7, 2024
Our very own fearless australian mindset GG sir will destroy our beutifull team india till 2027 with his dumb decisions 🥺
THANK YOU FOR BREAKING 27 Years of India's winning streak against sri lanka.#INDvsSL #ViratKohli #SLvIND pic.twitter.com/1E85Cu3bnz
Hire Good PR
— 🗿 (@MsdianReturns) August 7, 2024
Do unnecessary experiments to look different from others
Give three or four statements in fluent english and aggressive tone
Aspire to become messiah of Indian cricket and still lose against SL
Coach Gautam Gambhir sir.pic.twitter.com/hG2XnjiVVO
GAMBHIR ERA 🤡
— CSK Fans Army™ (@CSKFansArmy) August 7, 2024
RESIGN GAUTAM GAMBHIR !!pic.twitter.com/05crvamwUa
IPL me boundary line se chipak kr baithne wale Gautam Gambhir 😎 India ke liye AC room se bahar aane ko hi tyyar nhi hai, game me involve hona to door ki baat hai 🔥🙌 Clear Priorities 🫡#INDvSL #SLvIND pic.twitter.com/o2smegVdZX
— Chota Don (@The_ChotaDon) August 7, 2024
Now where are those fools who think that KKR won IPL because of Gautam Gambhir, He can't even win against tinpot Sri Lanka. 😂
— Harsh (@harshfu_) August 7, 2024
We won IPL because of the brilliant captaincy of one and only Sir Shreyas Iyer. 🐐 pic.twitter.com/HSCJUQyBzb