ನವದೆಹಲಿ: ಜನನಿಬಿಡ ಪ್ರದೇಶದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ಗುಂಡಿ ಬಿದ್ದ ಕಾರಣ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದ ಘಟನೆ ದೆಹಲಿಯ ಖುರೇಜಿ ಖಾಸ್ನಲ್ಲಿ ನಡೆದಿದೆ.
ಸದ್ಯ ಪ್ರದೇಶದ ಸುತ್ತ ಬ್ಯಾರಿಕೇಡ್ ಹಾಕಿರುವ ಪೊಲೀಸರು ಸಾರ್ವಜನಿಕರು ಹಾಗೂ ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ನಿರತರಾಗಿದ್ದಾರೆ.
ಇದೇ ಮೊದಲಲ್ಲ
ರಸ್ತೆ ಮಧ್ಯದಲ್ಲಿ ಈ ರೀತಿ ಬೃಹತ್ ಗಾತ್ರದ ಗುಂಡಿ ಬೀಳುತ್ತಿರುವುದು ಇದೇ ಮೊದಲಲ್ಲ. ಮಾರ್ಚ್ 31ರಂದು ಹೌಜ್ ರಾಣಿ ರೆಡ್ ಲೈಟ್ ಪ್ರದೇಶದಲ್ಲಿ ಈ ರೀತಿ ಘಟನೆಯಾಗಿತ್ತು.
ಈ ವೇಳೆ ದೆಹಲಿ ಸಾರಿಗೆ ಸ=ನಿಗಮಕ್ಕೆ ಸೇರಿದ್ದ ಬಸ್ ಒಂದು ಗುಂಡಿಯಲ್ಲಿ ಸಿಲುಕಿಕೊಂಡು ಅನೇಕ ಘಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಇದನ್ನೂ ಓದಿ: ತಮಿಳಿನ ಖ್ಯಾತ ಹಾಸ್ಯ ನಟ, ನಿರ್ದೇಶಕ ಮನೋಬಾಲ ಇನ್ನಿಲ್ಲ
ಕಳಪೆ ಕಾಮಗಾರಿ
ರಸ್ತೆ ಮಧ್ಯೆ ಬೃಹತ್ ಗುಂಡಿ ಬಿದ್ದಿರುವ ಕಿಡಿಕಾರಿರುವ ಸಾರ್ವಜನಿಕರು ಕಳಪೆ ಕಾಮಗಾರಿಯೇ ಇದ್ದಕ್ಕೆಲ್ಲಾ ಕಾರಣ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಆಡಳಿತ ಪಕ್ಷ ಎಎಪಿ ಹಾಗು ವಿಪಕ್ಷ ಬಿಜೆಪಿ ಇನ್ನು ಪ್ರತಿಕ್ರಿಯಿಸಿಲ್ಲ.