blank

ಸರಿಯಾದ ಸಮಯಕ್ಕೆ Loan ಕಟ್ಟದಿದ್ದಕ್ಕೆ ಪತ್ನಿಯ ಅಶ್ಲೀಲ ಫೋಟೋ ವೈರಲ್​; ಮನನೊಂದು ಪ್ರಾಣಬಿಟ್ಟ ನವವಿವಾಹಿತ

Narendra

ಅಮರಾವತಿ: ಲೋನ್​ ಆ್ಯಪ್​ (Loan App) ಮೂಲಕ ಎರಡು ಸಾವಿರ ರೂಪಾಯಿ ಸಾಲ ಪಡೆದಿದ್ದ ವ್ಯಕ್ತಿಯೋರ್ವ ರಿಕವರಿ ಏಜೆಂಟರ ಕಾಟ ತಾಳಲಾರದೆ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಮೃತರನ್ನು ನರೇಂದ್ರ (25) ಎಂದು ಗುರುತಿಸಲಾಗಿದ್ದು, ಲೋನ್​ ಆ್ಯಪ್​ (Loan App) ಮೂಲಕ ಪಡೆದಿದ್ದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದಕ್ಕೆ ಆ್ಯಪ್‌ ಏಜೆಂಟರು ತನ್ನ ಪತ್ನಿ ಅಖಿಲಾರ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನು (Morphed Photo) ಸಂತ್ರಸ್ತನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದು, ಈ ವಿಚಾರವಾಗಿ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೃತ್ತಿಯಲ್ಲಿ ಮೀನುಗಾರನಾಗಿರುವ ನರೇಂದ್ರ ಈ ವರ್ಷ (2024) ಅಕ್ಟೋಬರ್​ 28ರಂದು ಅಖಿಲಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ಹಮಾವಾನ ವೈಪರಿತ್ಯದಿಂದಾಗಿ ಸಮುದ್ರಕ್ಕೆ ಇಳಿಯದ ಕಾರಣ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ (Loan App) 2,000 ರೂ. ಸಾಲ ಪಡೆದುಕೊಂಡಿದ್ದ.

Narendra Marriage

ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್‌ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನರೇಂದ್ರರನ್ನು ನಿಂದಿಸಲು ಶುರು ಮಾಡಿದ್ದು, ನರೇಂದ್ರ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನ (Morphed Photo) ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆ್ಯಪ್​ ಏಜೆಂಟರ ನಿರಂತರ ಕಿರುಕುಳದಿಂದ ಮನನೊಂದಿದ್ದ ನರೇಂದ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಲೋನ್​ ಆ್ಯಪ್​ (Loan App) ಏಜೆಂಟರ ಕಿರುಕುಳ ತಾಳಲಾರದೆ ಈವರೆಗೆ ಮೂವರು ಮೃತಪಟ್ಟಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

Instagram Reels Comment ವಿಚಾರವಾಗಿ ಪತ್ನಿಯ ಕತ್ತು ಸೀಳಿ ಕೊಂದ ಪತಿ; ಮೂವರು ಹೆಣ್ಣುಮಕ್ಕಳು ಹೇಳಿದ್ದಿಷ್ಟು

ಗೌರವ-ಘನತೆ ಮಹಿಳೆಯರಿಗೆ ಸೀಮಿತವಲ್ಲ, ಪುರುಷರಿಗೂ ಕೂಡ ಇದೆ: HighCourt

 

Share This Article

ಅಧಿಕ ಬಿಪಿ ಇರುವವರು ಯಾವ ಆಹಾರದಿಂದ ದೂರವಿರಬೇಕು ಎಂದು ನಿಮಗೆ ತಿಳಿದಿದೆಯೇ? high blood pressure

high blood pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಿಪಿ ಸಮಸ್ಯೆಯೂ ಒಂದು. ಅಧಿಕ…

ಶಿವನ ಕೃಪೆಗೆ ಪಾತ್ರರಾಗಲು ಈ ಒಂದು ಕೆಲಸ ಮಾಡಬೇಕು! Lord Shiva Worship

Lord Shiva Worship: ಪರಮೇಶ್ವರ ಹಿಂದೂಗಳು ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಂದಾಗಿದೆ. ಭಗವಂತನನ್ನು ಒಂದೊಂದು ಸ್ಥಳದಲ್ಲಿ…

ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ…