blank

ಚಿನ್ನದ ಬೆಲೆ ಮತ್ತಷ್ಟು ದುಬಾರಿ; 90,000 ಗಡಿ ದಾಟಿದ್ರೂ ಆಶ್ಚರ್ಯವಿಲ್ಲ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Price

blank

Today Gold Price: ಚಿನ್ನದ ಬೆಲೆಗಳು ಇದೀಗ ಆಕಾಶ ನೋಡುತ್ತಿವೆ. ಜನರ ಕೈಯಿಂದ ಮತ್ತಷ್ಟು ದೂರ ಓಡಲು ಚಿಂತಿಸುತ್ತಿದೆ. ಇದಕ್ಕೆ ಕಾರಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಇತ್ತೀಚಿನ ಮಹತ್ವದ ಬೆಳವಣಿಗೆಗಳು. ಇದರ ಹಿನ್ನೆಲೆ ಚಿನ್ನದ ದರದಲ್ಲಿ ತೀವ್ರ ಏರಿಕೆ ಕಾಣುತ್ತಿವೆ. ಪರಿಣಾಮವಾಗಿ, ಚಿನ್ನದ ದರವು ಶೀಘ್ರವೇ 90,000 ರೂ. ಗಡಿ ದಾಟುವತ್ತ ದಾಪುಗಾಲಿಟ್ಟಿದೆ.

ಇದನ್ನೂ ಓದಿ: ಐಷಾರಾಮಿ ಬೈಕ್ ಖರೀದಿಸಿದ ಮೊದಲ ಭಾರತೀಯ ನಟ ಮಾಧವನ್! ಈ ಬೈಕ್​ನ ಬೆಲೆ ಎಷ್ಟು ಗೊತ್ತಾ?…R Madhavan

ಇಂದು (ಫೆ.10) ಬೆಳಗ್ಗೆ ದಾಖಲಾದ ಮಾಹಿತಿ ಪ್ರಕಾರ, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 390 ರೂ. ಹೆಚ್ಚಾಗಿದೆ. ಆದರೆ, 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 350 ರೂ. ಹೆಚ್ಚಳವಾಗಿದೆ. ಇದರೊಂದಿಗೆ, ಕಳೆದ ವಾರದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,010 ರೂ. ಜಾಸ್ತಿಯಾಗಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಸ್ಥಿರವಾಗಿದೆ. ವರದಿಗಳ ಪ್ರಕಾರ, ಕರ್ನಾಟಕ, ತೆಲುಗು ರಾಜ್ಯಗಳು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೀಗಿವೆ.

ಚಿನ್ನದ ಬೆಲೆ ಮತ್ತಷ್ಟು ದುಬಾರಿ; 90,000 ಗಡಿ ದಾಟಿದ್ರೂ ಆಶ್ಚರ್ಯವಿಲ್ಲ! ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Price

ದೇಶದಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ

ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬೆಲೆ 79,950 ರೂ. ಇದ್ದರೆ, 24 ಕ್ಯಾರೆಟ್‌ನ ಬೆಲೆ 87,210 ರೂ. ಆಗಿದೆ.
ಮುಂಬೈ, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿ ಚಿನ್ನದ ಬೆಲೆ ಒಂದೇ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,800 ರೂ. ಆಗಿದ್ದರೆ, 24 ಕ್ಯಾರೆಟ್​ನ ಬೆಲೆ 87,060 ರೂ. ತಲುಪಿದೆ.

ಇದನ್ನೂ ಓದಿ: 5 ವರ್ಷಗಳಿಂದ ಸ್ನಾನ ಮಾಡಿಲ್ಲ, ಆದ್ರೂ ನನ್ನ ದೇಹವು ವಾಸನೆ ಬರುವುದಿಲ್ಲ! ವೈದ್ಯ ಹೀಗೆ ಹೇಳಿದ್ಯಾಕೆ?..doctor who didn’t shower for 5 years

ಬೆಳ್ಳಿ ಬೆಲೆ ಸ್ಥಿರ

ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 99,500 ರೂ. ಇದೆ. ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ. ಇದೆ. ಇದು ಗಮನಾರ್ಹ.

ಇನ್ನು ತೆಲುಗು ರಾಜ್ಯಗಳಲ್ಲಿ..

ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣ ಸೇರಿದಂತೆ ತೆಲುಗು ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,800 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 87,060 ರೂ. ಆಗಿದೆ. ಬೆಳ್ಳಿಯ ಬೆಲೆ ಸ್ಥಿರವಾಗಿದೆ. ಇದರೊಂದಿಗೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪ್ರಮುಖ ನಗರಗಳಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,07,000 ರೂ. ತಲುಪಿದೆ,(ಏಜೆನ್ಸೀಸ್).

3ನೇ ಬಾರಿ ಪಟ್ಟಕ್ಕೇರುವ ಆಸೆ ನುಚ್ಚುನೂರು! ಈ 5 ವಿಷಯಗಳೇ ಎಎಪಿ ಸೋಲಿಗೆ ಕಾರಣವಾಯ್ತಾ? | Delhi Election

Share This Article

ದೇ ಪದೇ ಗಂಟಲು ನೋವು ಬರುತ್ತಿದೆಯೇ? ಹಾಗಾದ್ರೆ ಈ ಸುಲಭ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ | Home remedies

Home remedies: ಹವಾಮಾನ ಬದಲಾದಂತೆ ಸೋಂಕಿನ ಹರಡುವಿಕೆ ಕೂಡಾ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ಅನೇಕ ಜನರು…

ಈರುಳ್ಳಿ ರಸ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ | Onion Juice

Onion Juice: ಈರುಳ್ಳಿ ನಮ್ಮ ದಿನನಿತ್ಯದ ಅಡುಗೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಡುಗೆಯನ್ನು…

ನೀವು ಹೆಚ್ಚು ಬೀನ್ಸ್​​ ತಿನ್ನುತ್ತೀರಾ? ಹಾಗಾದ್ರೆ ಇದನ್ನು ತಿಳಿಯಲೇ ಬೇಕು | Beans

Beans: ಹೆಚ್ಚಿನ ಜನರಿಗೆ ಬೀನ್ಸ್ ಒಂದು ಪ್ರಮುಖ ಆಹಾರವಾಗಿದೆ. ದ್ವಿದಳ ಧಾನ್ಯಗಳ ಕುಟುಂಬಕ್ಕೆ ಸೇರಿದ ಇವು…