ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಳೆದ ಎರಡು ದಿನಗಳಿಂದ ನಟ ಕಿಚ್ಚ ಸುದೀಪ್ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಭಾನುವಾರ (ಜು. 2) ಅವರ 46ನೇ ಸಿನಿಮಾ ಟೀಸರ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್, ಎಂದು ವರ್ಷಗಳ ಹಿಂದೆ ಸಿನಿಮಾಗಾಗಿ ಸಂಭಾವನೆ ಪಡೆದಿದ್ದ ಸುದೀಪ್ ಈಗ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ತಿಂಗಳಂತ್ಯಕ್ಕೆ “ಆಚಾರ್ ಆ್ಯಂಡ್ ಕೋ’ – ಪಿಆರ್ಕೆ ಪ್ರೊಡಕ್ಷನ್ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ

ಅದರ ಬೆನ್ನಲ್ಲೇ ಮಂಗಳವಾರ (ಜು.4) ಸುದೀಪ್ ಟ್ವಿಟರ್ನಲ್ಲಿ “ಇದು ಎಲ್ಲರಿಗೂ ತಿಳಿಯಲಿ: ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ. ಅದು ನಿಜವಾಗಿದ್ದಾಗ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರ ಅದನ್ನು ಹಾಳು ಮಾಡಲು ನಾನು ಬಿಡುವುದಿಲ್ಲ. ವಿನಮ್ರವಾಗಿರಿ, ನಿಜವಾಗಿರಿ’ ಎಂದು ಹಂಚಿಕೊಂಡಿರುವ ಸುದೀಪ್, “ಈ ಉಲ್ಲೇಖವನ್ನು ಓದಿ, ತುಂಬ ಚೆನ್ನಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!

ಜಾಲತಾಣದಲ್ಲಿ ವೈರಲ್ ಆಗಿರುವ ಈ ಪೋಸ್ಟ್, ನಿರ್ಮಾಪಕ ಕುಮಾರ್ ಆರೋಪಗಳಿಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ನೀಡಿರುವ ಪ್ರತಿಕ್ರಿಯೆ ಎಂಬ ಮಾತುಗಳು ಕೇಳಿಬರುತ್ತಿವೆ.