More

    ಕ್ಯಾನ್ಸರ್​ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!

    ಬೆಂಗಳೂರು: ಈ ಕ್ಯಾನ್ಸರ್​ ಪೀಡಿತ ಬಾಲಕಿಗೆ ನಟ ಕಿಚ್ಚ ಸುದೀಪ್​ ಎಂದರೆ ಭಾರಿ ಅಭಿಮಾನ. ಆಕೆಗೆ ಸುದೀಪ್​ರನ್ನು ಭೇಟಿ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಕ್ಯಾನ್ಸರ್ ಪೀಡಿತ ಮಗುವಿನ ಆಸೆಗೆ ಕರಗಿದ ಕಿಚ್ಚ ಸುದೀಪ್ ಖುದ್ದಾಗಿ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

    ಮಗು ಸಾಕ್ಷಿ ನಾಳೆಯಿಂದ ಸ್ಪೆಷಲ್ ಟ್ರೀಟ್ ಮೆಂಟ್ ಗೆ ತೆರಳಲಿದ್ದು ಮಗುವಿನ ಜತೆ ಕೆಲ ಹೊತ್ತು ಸಮಯವನ್ನು ಸುದೀಪ್ ಕಳೆದಿದ್ದಾರೆ. ಈ ಸಂದರ್ಭ ಸುದೀಪ್​ ಬಾಲಕಿಗೆ ಆಟೋಗ್ರಾಫ್​ ನೀಡಿದ್ದು ಬ್ಯಾಗ್​ ಹಾಗೂ ಇತರ ವಸ್ತುಗಳನ್ನು ನೀಡಿ ಮಗುವನ್ನು ಖುಷಿಪಡಿಸಿದ್ದಾರೆ.

    ಬಾಲಕಿ ಸಾಕ್ಷಿಗೆ ಸುದೀಪ್​ರನ್ನು ಭೇಟಿಯಾಗಬೇಕು ಎಂಬ ಆಸೆ ಬಹಳವಾಗಿ ಕಾಡುತ್ತಿತ್ತಂತೆ. ಆಕೆಗೆ ಕೇವಲ 9 ವರ್ಷ ವಯಸ್ಸಾಗಿದ್ದು ಮೆಟಾಸ್ಟಾಟಿಕ್ ಅಲ್ಲದ ಆಸ್ಟಿಯೊಸಾರ್ಕೊಮಾದಿಂದ ಬಳಲುತ್ತಿದ್ದಾಳೆ. ಈಕೆ ಮೂರನೇ ತರಗತಿಯಲ್ಲಿ ಓದುತ್ತಿದ್ದು ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸುದೀಪ್​ರನ್ನೇ ಏಕೆ ಭೇಟಿಯಾಗಬೇಕು ಎಂದು ಕೇಳಿದ್ದಕ್ಕೆ ಆಕೆ, “ನನಗೆ ಸುದೀಪ್​ ಎಂದರೆ ಬಹಳ ಇಷ್ಟ” ಎಂದಿದ್ದಾಳೆ. ಆಕೆಗೆ ‘ರನ್ನ’ ಚಿತ್ರದ ತಿತಿಲಿ ಹಾಡು ಎಂದರೆ ಬಹಳ ಇಷ್ಟವಂತೆ… ಆಕೆಯ ತಂದೆ ಮಹೀಂದರ್, ಬಡಗಿಯಾಗಿದ್ದು ಮತ್ತು ತಾಯಿ ಸುರೇಖಾ ರಾಣಿ, ಗೃಹಿಣಿಯಾಗಿದ್ದಾರೆ. ಸಾಕ್ಷಿ ತನ್ನ ನೆಚ್ಚಿನ ಸಿನಿಮಾ ನಾಯಕನನ್ನು ನೋಡಿ ಬೆರಗಾಗಿದ್ದಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts