More

    ಪಿತ್ರಾರ್ಜಿತ ಆಸ್ತಿಗಾಗಿ ಹೊಡೆದಾಟ; ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಬಂದು ಮಚ್ಚಿನಿಂದ ಹಲ್ಲೆ

    ಹಾಸನ: ಪಿತ್ರಾರ್ಜಿತ ಆಸ್ತಿಗಾಗಿ ಸಹೋದರರ ಕುಟುಂಬಸ್ಥರ ನಡುವೆ ಮಾರಾಮಾರಿಯಾಗಿದ್ದು, ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಅಟ್ಟಾಡಿಸಿ ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಕದ್ದ ಕಾರನ್ನು 10 ಕಿ.ಮೀ ತಳ್ಳಿಕೊಂಡೇ ಸಾಗಿದ ಖದೀಮರು! ಮುಂದೇನಾಯ್ತು ಎಂಬುದೇ ಕುತೂಹಲ…

    ಗ್ರಾಮದ ಮಲ್ಲೇಶಗೌಡ, ಶಶಿಕುಮಾರ್, ಗೌರೀಶ್ ಹಾಗೂ ತೀರ್ಥ ಎಂಬುವರಿಗೆ ಘಟನೆಯಲ್ಲಿ ಗಾಯವಾಗಿದೆ. ಸದ್ಯ ಗಾಯಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಚ್ಚು ಹಿಡಿದು ಬಂದು ನಾಲ್ವರನ್ನು ಅಟ್ಟಾಡಿಸಿ ಹಲ್ಲೆ ಮಾಡುತ್ತಿರುವ ದೃಶ್ಯ ಗ್ರಾಮಸ್ಥರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ತಾಯಿಯಿಂದ ಬಂದಿದ್ದ ಸರ್ವೆ 211/1 ರಲ್ಲಿ 14 ಗುಂಟೆ ಪಿತ್ರಾರ್ಜಿತ ಆಸ್ತಿಯಲ್ಲಿ ಸುಮಾರು 30 ವರ್ಷಗಳಿಂದ ಮಲ್ಲೇಶ್‌ಗೌಡ ಕುಟುಂಬ ಉಳುಮೆ ಮಾಡುತ್ತಾ ಬರುತ್ತಿದೆ. ಸದ್ಯ ಕಳೆದು ಒಂದು ವಾರಗಳಿಂದ ಮಳೆಯಾಗುತ್ತಿರುವ ಕಾರಣ ತಮ್ಮ ಮಕ್ಕಳಾದ ಶಶಿಕುಮಾರ್, ಗೌರೀಶ್ ಹಾಗೂ ಸೊಸೆ ತೀರ್ಥ ಜತೆ ಸೇರಿಕೊಂಡು ಜಮೀನಿನಲ್ಲಿ ಮಲ್ಲೇಶ್‌ಗೌಡ ಉಳುಮೆಕಾರ್ಯ ಆರಂಭಿಸಿದ್ದರು.

    ಇದನ್ನೂ ಓದಿ: ಬೇರೆ ಜಾತಿಯವರನ್ನು ಮದುವೆಯಾದರೆ ಆಸ್ತಿ ಹಕ್ಕು ಕಳೆದುಹೋಗುತ್ತದೆಯೇ? ಇಲ್ಲಿದೆ ಮಾಹಿತಿ…

    ಉಳುಮೆ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಮಲ್ಲೇಶ್‌ಗೌಡನ ಸಹೋದರನ ಮಕ್ಕಳಾದ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಜವರೇಗೌಡ, ರುದ್ರೇಶ್ ಹಾಗೂ ಲೊಕೇಶ್ ಈ ಜಾಗ ನಮಗೆ ಸೇರಿದು ಎಂದು ಹೇಳಿದೆ. ಅಲ್ಲದೆ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

    ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಧುಕುಮಾರ್, ಚಂದ್ರೇಗೌಡ, ಕುಮಾರ್, ಗೌರೇಗೌಡ, ಲೊಕೇಶ್, ರುದ್ರೇಶ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts