ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ನಿಗದಿತ ಸಮಯ ಮುಗಿಯುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳಲಾರಂಭಿಸಿದ್ದು, ಪಕ್ಷಗಳ ಬಲಾಬಲ, ಗೆಲುವಿನ ಲೆಕ್ಕಾಚಾರಗಳು ಬಹಿರಂಗಗೊಳ್ಳುತ್ತಿವೆ.
ವಿವಿಧ ಮಾಧ್ಯಮ ಸಂಸ್ಥೆಗಳು ತಮ್ಮ ಚುನಾವಣೋತ್ತರ ಸಮೀಕ್ಷೆಯ ಅಂಶಗಳನ್ನು ಪ್ರಕಟಿಸಿದ್ದು, ದಿಗ್ವಿಜಯ ಸುದ್ದಿವಾಹಿನಿ ಕೂಡ ತನ್ನ ಸಮೀಕ್ಷೆಯ ವಿವರಗಳನ್ನು ಪ್ರಕಟಿಸಲಾರಂಭಿಸಿದೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ವಿಶ್ಲೇಷಣೆಯೊಂದಿಗೆ ಈ ಸಲದ ಚುನಾವಣೋತ್ತರ ಸಮೀಕ್ಷೆಯ ಅಂಶಗಳನ್ನು ತುಲನಾತ್ಮಕವಾಗಿ ಜನರ ಮುಂದೆ ತೆರೆದಿಡಲಾಗುತ್ತಿದೆ.
ಇದನ್ನೂ ಓದಿ: ನವವಿವಾಹಿತನ ಮತಾಭಿಮಾನ: ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತದಾನ
ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ, ಎಲ್ಲಿ ಯಾವ ಪಕ್ಷ ಪ್ರಾಬಲ್ಯ ತೋರಲಿದೆ, ಸಿಎಂ ಯಾರಾಗಲಿದ್ದಾರೆ ಎಂಬೆಲ್ಲ ಅಂಶಗಳನ್ನ ದಿಗ್ವಿಜಯ ನ್ಯೂಸ್ ಎಳೆಎಳೆಯಾಗಿ ವೀಕ್ಷರ ಮುಂದೆ ಇಡುತ್ತಿದೆ.
ದಿಗ್ವಿಜಯ ಸುದ್ದಿವಾಹಿನಿಯ ಚುನಾವಣೋತ್ತರ ಸಮೀಕ್ಷೆಯ ಲೈವ್ ಅಪ್ಡೇಟ್ಸ್ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಹನ್ನೊಂದರ ಈ ಹುಡುಗಿ ಐನ್ಸ್ಟೀನ್-ಸ್ಟೀಫನ್ ಹಾಕಿಂಗ್ಗಿಂತಲೂ ಬುದ್ಧಿವಂತೆ!
ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?