CSK ವಿರುದ್ಧ ಮೋಸದಾಟ ಆರೋಪ! ಕ್ಯಾಮರಾ ಕಣ್ಣಿಗೆ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ರಾ ಖಲೀಲ್​-ರುತು!? ಹೀಗಿದೆ ವರದಿ

blank
blank

CSK: ನಿನ್ನೆ (ಮಾ.23) ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿ ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಸಿತು. ಕೊನೆಯವರೆಗೂ ರೋಚಕತೆಯಲ್ಲೇ ಸಾಗಿದ ಈ ಪಂದ್ಯದಲ್ಲಿ ಅಂತಿಮವಾಗಿ ಸಿಎಸ್​ಕೆ 4 ವಿಕೆಟ್​ಗಳ ಭರ್ಜರಿ ಗೆಲುವನ್ನು ಸಾಧಿಸಿತು.

ಇದನ್ನೂ ಓದಿ: ಹಣದ ಅಗತ್ಯವಿರುವವರೆಗೂ ಸಿನಿಮಾ ಮಾಡುವುದನ್ನು ಮುಂದುವರಿಸುವೆ; ಪವರ್ ಸ್ಟಾರ್​ ಪವನ್​ ಕಲ್ಯಾಣ್​​​ | Pawan Kalyan

ಐಪಿಎಲ್​ನ ಮೂರನೇ ಪಂದ್ಯ ಇದಾಗಿದ್ದು, ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮುಂಬೈ ಪಡೆಗೆ​ ಮೊದಲು ಬ್ಯಾಟ್​ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಕಣಕ್ಕಿಳಿದ ಮುಂಬೈ ಇಂಡಿಯನ್ಸ್​, 20 ಓವರ್ ಅಂತ್ಯಕ್ಕೆ 155 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ, 19.1 ಓವರ್‌ಗಳಲ್ಲಿ ಪಂದ್ಯವನ್ನು ಗೆಲುವಿನ ಮೂಲಕ ಮುಕ್ತಾಯಗೊಳಿಸಿತು. ಇದು ಸಿಎಸ್​ಕೆ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಈ ಪಂದ್ಯದಲ್ಲಿ ಖಲೀಲ್ ಅಹಮ್ಮದ್​ ಅವರ ಬೌಲಿಂಗ್ ವೇಳೆ ಕ್ಯಾಪ್ಟನ್​ ರುತುರಾಜ್, ಬೌಲರ್​​ ಜೇಬಿಗೆ ಏನೋ ಇಟ್ಟಂತೆ ಕಂಡುಬಂದ ದೃಶ್ಯ ಇದೀಗ ದೊಡ್ಡ ಆರೋಪಕ್ಕೆ ಗುರಿಯಾಗಿದೆ.

ಈ ಆರೋಪಕ್ಕೆ ಸಂಬಂಧಿಸಿದ ದೃಶ್ಯವೊಂದು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಎಸ್​ಕೆ ತಂಡದ ಖಲೀಲ್​ ಮತ್ತು ರುತುರಾಜ್​ ಬಾಲ್​ ಟಾಂಪರಿಂಗ್​​ ಮಾಡುವಲ್ಲಿ ತೊಡಗಿದ್ದರು. ಅಹಮ್ಮದ್​ ಅವರ ಜೇಬಿಗೆ ಗಾಯಕ್ವಾಡ್​ ಏನೋ ಇಟ್ಟಂತೆ ಕಂಡುಬಂದಿದೆ. ಇದರಿಂದಲೇ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಬೀಗಿದರು ಎಂದು ಕೆಲವರು ಆರೋಪಿಸಿದ್ದಾರೆ. ಆದರೆ, ಈ ಆರೋಪ ಎಷ್ಟರ ಮಟ್ಟಿಗೆ ಸುಳ್ಳು, ನಿಜ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದ ಅರ್ಚಕಗೆ 6.43 ಲಕ್ಷ ರೂ. ವಂಚನೆ

ಗಮನಿಸಬೇಕಾದ ವಿಷಯವಿದು

ಈ ದೃಶ್ಯಗಳನ್ನು ಮುಂದಿಟ್ಟು ಕಿಡಿಕಾರಿರುವ ಸಿಎಸ್​ಕೆ ವಿರೋಧಿಗಳು, ಜಾಲತಾಣಗಳಲ್ಲಿ ರುತುರಾಜ್​ ಗಾಯಕ್ವಾಡ್ ಮತ್ತು ಬೌಲರ್​ ಖಲೀಲ್ ಅಹ್ಮದ್​ರನ್ನು ವ್ಯಾಪಕವಾಗಿ ಟ್ರೋಲ್ ಮಾಡಿ ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಮೂರನೇ ಬಾರಿಗೆ ಐದು ಬಾರಿ ಚಾಂಪಿಯನ್​ಗಳು ಐಪಿಎಲ್​ನಿಂದ ಬ್ಯಾನ್ ಆಗಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ಬಹುಶಃ ರುತುರಾಜ್​ ಚೂಯಿಂಗ್ ಗಮ್ ತೆಗೆದುಕೊಳ್ಳುವ ಉದ್ದೇಶದಿಂದ ಖಲೀಲ್ ಜೇಬಿಗೆ ಕೈಹಾಕಿರಬಹುದು ಎಂದು ಅಭಿಪ್ರಾಯಿಸಿದ್ದಾರೆ.

ವಿಡಿಯೋ ಡಿಲೀಟ್​

ಈ ಕುರಿತಂತೆ ಮುಂಬೈ ಇಂಡಿಯನ್ಸ್​ ಅಥವಾ ಇತರೆ ಆಟಗಾರರಿಂದ ಇಲ್ಲಿಯವರೆಗೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಇದು ಕೇವಲ ನೆಟ್ಟಿಗರ ಊಹಾಪೋಹ, ಆಧಾರವಿಲ್ಲದ ಆರೋಪಗಳು ಎಂಬುದು ಬಲವಾಗಿದೆ,(ಏಜೆನ್ಸೀಸ್).

0.12 ಸೆಕೆಂಡ್​! ಅದೇ ವೇಗ, ನಿಖರತೆ, ಚಾಣಕ್ಷತನ; ವಯಸ್ಸಾಯ್ತು ಎಂದವರಿಗೆ ಮೈದಾನದಲ್ಲೇ ಖಡಕ್ ಉತ್ತರ ಕೊಟ್ಟ ‘ಕ್ಯಾಪ್ಟನ್​ ಕೂಲ್’​ | MS Dhoni

Share This Article

ಯಾವೆಲ್ಲ ಕಾಯಿಲೆಗಳಿಗೆ ಸೀಬೆ ಹಣ್ಣು ರಾಮಬಾಣ? ಸೇವನೆಯಿಂದ ಏನ್ನೆಲ್ಲ ಪ್ರಯೋಜನ? ಇಲ್ಲಿದೆ ಉಪಯುಕ್ತ ಮಾಹಿತಿ | Guava

Guava Fruit: ಸೀಬೆ ಹಣ್ಣು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಬಹುತೇಕರು ಕೆಂಪು ಬಣ್ಣದ ಪೇರಳೆಯನ್ನು ಬಹಳ…

ಹೃದಯಾಘಾತವನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಎಣ್ಣೆ ಇದು! ಹೊಸ ಸಂಶೋಧನೆಯಿಂದ ಸಾಬೀತು | Oil

Oil: ಭಾರತೀಯ ಅಡುಗೆಮನೆಗಳಲ್ಲಿ ಎಣ್ಣೆ ಹೆಚ್ಚು ಬಳಸುವ ವಸ್ತುಗಳಲ್ಲಿ ಒಂದಾಗಿದೆ. ಎಣ್ಣೆ ಇಲ್ಲದೆ ಬೇಯಿಸಿದ ಆಹಾರಗಳು…