More

    ಪೊಲೀಸರ ಹೆಸರಿನಲ್ಲಿ ಬಹುಕೋಟಿ ರೂಪಾಯಿ ವಂಚನೆ; ಆರೋಪಿ ಬಂಧನ

    ಮುಂಬೈ: ಪೊಲೀಸರೆಂದು ಬಿಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಪ್ರತಿನಿತ್ಯ 5 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುತ್ತಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ವಶದಲ್ಲಿರುವ ಆರೋಪಿಯೂ 12ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು ದೇಶಾದ್ಯಂತ ಹಲವು ಮಂದಿಗೆ ವಂಚಿಸಿರುವುದಾಗಿ ತಿಳಿದು ಬಂದಿದೆ.

    ಪ್ರತಿಷ್ಠಿತ ಹೋಟೆಲ್​ನಲ್ಲಿ ವಾಸ್ತವ್ಯ

    ಪ್ರಕರಣದ ಮಾಸ್ಟರ್​ ಮೈಂಡ್ ಶ್ರೀನಿವಾಸ್​ ರಾವ್​ ದಾದಿ(49) ಎಂದು ಗುರುತಿಸಲಾಗಿದ್ದು ಆರೋಪಿಯೂ 12ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದು ತಾಂತ್ರಿಕ ಜ್ಞಾನದ ಹೊಂದಿದ್ದ ಎಂದು ವರದಿಯಾಗಿದೆ.

    ಮುಂಬೈನ ಬಂಗೂರ್​ ನಗರ ಠಾಣಾ ಪೊಲೀಸರು ಆರೋಪಿ ಶ್ರೀನಿವಾಸ್​ನನ್ನು ಹೈದರಾಬಾದಿನ ಪ್ರತಿಷ್ಠಿತ ಹೋಟೆಲ್​ ಒಂದರಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ಪ್ರಕರಣದ ಕಿಂಗ್​ಪಿನ್​ ಜೊತೆಗೆ ಪೊಲೀಸರು ಥಾಣೆ ಹಾಗೂ ಕಲ್ಕತ್ತಾ ಮೂಲದ ಇಬ್ಬರನ್ನು ವಶಕ್ಕೆ ಪಡೆದು ವಿಚಾರನೆಗೆ ಒಳಪಡಿಸಿದ್ದಾರೆ.

    ರಿಯಲ್​ ಎಸ್ಟೇಟ್​ ಉದ್ಯಮಿಯಂತೆ ಪೋಸ್​

    ಪ್ರಕರಣದ ಕಿಂಗ್​ಪಿನ್​ ಶ್ರೀನಿವಾಸ್​ ಸಾರ್ವಜನಿಕರ ಮುಂದೆ ರಿಯಲ್​ ಎಸ್ಟೇಟ್​ ಉದ್ಯಮಿಯಂತೆ ಪೋಸ್​ ನೀಡುತ್ತಿದ್ದ ಮತ್ತು ಟೆಲಿಗ್ರಾಮ್​ನಲ್ಲಿ ಹೆಚ್ಚು ಸಂವಹನ ನಡೆಸುತ್ತಿದ್ದ ಎಂದು ವರದಿಯಾಗಿದೆ.

    ಪೊಲೀಸರು ಇಗಾಗಲೇ ಆತನಿಗೆ ಸಂಬಂಧಿಸಿದ 40 ಬ್ಯಾಂಕ್​ ಅಕೌಂಟ್​ಗಳು ಫ್ರೀಜ್​ ಮಾಡಿರುವುದಾಗಿ ಹಾಗೂ ಒಂದೂವರೆ ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿರುವುದಾಗಿ ಬಂಗೂರ್​ ನಗರ ಠಾಣಾ ಪೊಲಿಸರು ತಿಳಿಸಿದ್ದಾರೆ.

    accused

    ಇದನ್ನೂ ಓದಿ: VIDEO| ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯನ್ನು ಥಳಿಸಿದ ಬಿಜೆಪಿ ಸಚಿವ!

    ಪೊಲೀಸರಂತೆ ಪೋಸ್​

    ಆರೋಪಿ ದಾದಿ ಹಾಗೂ ಆತನ ಸಹಚರರು ಹೆಚ್ಚಾಗಿ ಮಹಿಳೆಯರಿಗೆ ಪೊಲೀಸರಂತೆ ಕರೆ ಮಾಡಿ ನಿಔಉ ಸ್ವೀಕರಿಸುವ ಕೊರಿಯರ್​ನಲ್ಲಿ ಡ್ರಗ್ಸ್​ ಹಾಗೂ ಶಸ್ತ್ರಾಸ್ತ್ರ ಹೊಂದಿದ್ದಾಗಿ ಹೇಳಿ ಬೆದರಿಸುತ್ತಿದ್ದರು.

    ನಂತರ ನೀವು ತರಿಸಿಕೊಂಡಿರುವ ಕೊರಿಯರ್​ ನಿಮಗೆ ಸಂಬಂಧಪಟ್ಟಿಲ್ಲವೆಂದು ಪರಿಶೀಲಿಸಬೇಕೆಂದು ಹೇಳಿ ಅವರ ಬ್ಯಾಂಕ್​, ಆದಾಯ ತೆರಿಗೆ ಹಾಗೂ ಸಂಬಂಧಿಸಿತ ದಾಖಲೆಗಳನ್ನು ಪಡೆಯುತ್ತಿದ್ದರು.

    ಬಹುಕೋಟಿ ವಂಚನೆ

    ಆರೋಪಿಗಳ ಮಾತಿಗೆ ಬೆದರುತ್ತಿದ್ದ ಅಮಾಯಕರು ಕೇಳುತ್ತಿದ್ದ ದಾಖಲೆಗಳನ್ನು ಕಳುಹಿಸುತ್ತಿದ್ದರು ಮತ್ತು ಆ ನಂತರ ಅವರ ನಂಬರಿಗೆ ಬಂದ ಒಟಿಪಿಯನ್ನು ಸಹ ಹೇಳುತ್ತಿದ್ದರು. ಇದರ ಮೂಲಕ ಆರೋಪಿಗಳು ಸಂತ್ರಸ್ತರ ಮೊಬೈಲ್​ ಮೇಲೆ ಹಿಡಿತವನ್ನು ಸಾಧಿಸಿ ಹಣ ದೋಚುತ್ತಿದ್ದದು ಬೆಳಕಿಗೆ ಬಂದಿದೆ.

    ಈ ರೀತಿ ಪ್ರತಿನಿತ್ಯ 5-10 ಕೋಟಿ ರೂಪಾಯಿ ಹಣ ದೋಚುತ್ತಿದ್ದರು ಮತ್ತು ಹಣವನ್ನು ಆ ನಂತರ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಚೀನಾ ದೇಶದ ಪ್ರಜೆ ಒಬ್ಬರಿಗೆ ವರ್ಗಾಯಿಸುತ್ತಿದ್ದರು. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ, ಜಾರ್ಖಂಡ್​, ಹೈದರಾಬಾದಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಜೋನ್​-11 ಡಿಸಿಪಿ ಅಜಯ್​ ಕುಮಾರ್​ ಬನ್ಸಾಲ್​ ತಿಳಿಸಿದ್ದಾರೆ.

    Cyber Fraud

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts