More

    ಚಾಲಕನ ನಿಯಂತ್ರಣ ತಪ್ಪಿ ನಿರ್ವಾಹಕನಿಗೆ ಗುದ್ದಿದ ಬಸ್​; ತುಂಡು ತುಂಡಾದ ದೇಹ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್​ ನಿರ್ವಾಹಕನಿಗೆ ಗುದ್ದಿದ ಕಾರಣ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಯಲಹಂಕ ಬಸ್​ ಡಿಪೋದಲ್ಲಿ ನಡೆದಿದೆ.

    ನಿರ್ವಾಹಕ ಸೋಮಪ್ಪ ಮೃತ ದೂರ್ದೈವಿ ಎಂದು ತಿಳಿದು ಬಂದಿದ್ದು ಇವರು 402b/10 ನಂಬರ್ ಬಸ್​ನ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

    ತುಂಡು ತುಂಡಾದ ದೇಹ

    ಇನ್ನು ಚಾಲಕನ ನಿಯಂತ್ರಣ ತಪ್ಪಿ​ ವೇಗವಾಗಿ ಬಸ್​ ಬಂದು ಗೋಡೆಗೆ ಗುದ್ದಿ ಪರಿಣಾಮ ನಿರ್ವಾಹಕ ಸೋಮಪ್ಪ ಇದೆರಡರ ನಡುವೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

    BMTC Bus Accident

     ಬಸ್‌ ನಿಲ್ದಾಣದಲ್ಲಿ ಟಿಟಿಗೆ ಸಂಗ್ರಹವಾದ ಟಿಕೆಟ್​ ಹಣವನ್ನು ನೀಡಿ ವಾಪಸ್​ ಆಗುತ್ತಿದ್ದ ವೇಳೆ ಘಟನೆ ನಡೆದಿದ್ದು ಬಸ್​ ಗುದ್ದಿದ ರಭಸಕ್ಕೆ ನಿರ್ವಾಹಕನ ದೇಹದ ಅಂಗಾಂಗಗಳು ಛಿದ್ರವಾಗಿದೆ.

    ಇದನ್ನೂ ಓದಿ: ದೋಸೆ ತಿನ್ನಲು ಹೋಗಿ ಪೇಚಿಗೆ ಸಿಲುಕಿದ ಅಧಿಕಾರಿ; ಮುಂದೇನಾಯ್ತು?

    ಪೊಲೀಸರಿಂದ ಸ್ಥಳ ಪರಿಶೀಲನೆ

    ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆದಿ ಬಿಎಂಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

    ಸೋಮಪ್ಪ ಅವರ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಪೊಲೀಸರು ಕಳುಹಿಸಿದ್ದು ಕುಟುಂಬರ್ಸತರಿಗೆ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts