ಹೊಸ ವಿವಾದದಲ್ಲಿ ಸಿಲುಕಿಕೊಂಡ ಮುಖ್ಯಮಂತ್ರಿ ಸುಖವಿಂದರ್ ಸಿಂಗ್! ‘ಕಾಡು ಕೋಳಿ’ ಸೇವಿಸಿದ್ದಾರೆ ಎಂದ ಬಿಜೆಪಿ; ಆರೋಪ ಬಗ್ಗೆ CM ಹೇಳಿದಿಷ್ಟು

blank

ಶಿಮ್ಲಾ: ಇತ್ತೀಚಿಗೆ ಶಿಮ್ಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಮಾಚಲ ಪ್ರದೇಶ ಸಿಎಂ(CM) ಸುಖವಿಂದರ್ ಸಿಂಗ್ ಸುಖ್​ ಅವರು ಕಾಡುಕೋಳಿ ಸೇವಿಸಿದ್ದಾರೆ ಎಂದು ಬಿಜೆಪಿ ಪಕ್ಷದ ನಾಯಕರು ಮತ್ತು ಪ್ರಾಣಿ ಹಕ್ಕುಗಳ ಗುಂಪು ಆರೋಪಿಸಿದ್ದು. ಸಿಎಂ ಹೊಸ ವಿವಾದಲ್ಲಿ ಸಿಲುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಸಂಬಂಧ ಈ ಕುರಿತು ಸುದ್ದಿವಾಹಿನಿಯೊಂದಿಗೆ ಶನಿವಾರ ಮಾತನಾಡಿರುವ ಸಿಎಂ ಸುಖವಿಂದರ್ ಸಿಂಗ್, ಕಾರ್ಯಕ್ರಮದಲ್ಲಿ ಹಳ್ಳಿ ಜನರು ನನಗೆ ಕಾಡುಕೋಳಿ ನೀಡಿದ್ದರು. ಆದರೆ, ನಾನು ಅದನ್ನು ಸೇವಿಸಿಲ್ಲ ಎಂದು ಆರೋಪ ತಳ್ಳಿ ಹಾಕಿದ್ದಾರೆ.

”ನನಗೆ ಸ್ಥಳೀಯ ಗ್ರಾಮಸ್ಥರು ಕಂಟ್ರಿ ಕೋಳಿ(ದೇಸಿ)ಯನ್ನು ನೀಡುತ್ತಿದ್ದರು. ಆದರೆ, ನಾನ ಅದನ್ನು ಸೇವಿಸಿಲ್ಲ. ಈ ಬಗ್ಗೆ ಸುದ್ದಿವಾಹಿನಿಯೊಂದು ನಾನು ಕೋಳಿ ತಿಂದಿದ್ದೇನೆ ಎಂದು ಪ್ರಸಾರ ಮಾಡಿದೆ. ಗುಡ್ಡಗಾಡು ಪ್ರದೇಶದ ಜನರು ಸಾಮಾನ್ಯವಾಗಿ ಮಾಂಸಹಾರ ತಿನ್ನುತ್ತಾರೆ. ಅದು ಅವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದನ್ನು ಇಲ್ಲಿನ ಜೈರಾಮ್​ ಠಾಕೂರ್​, ನಾನು ಕಾಡುಕೋಳಿ ಸೇವೆನೆ ಮಾಡಿದ್ದೇನೆ ಎಂದು ವಿಡಿಯೋ ಮಾಡಿದ್ದಾರೆ. ಇವರು ಮಾಡುತ್ತಿರುವ ಆರೋಪ ಸುಳ್ಳು” ಎಂದಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಪದಚ್ಯುತಿ; ; ಸಂಸತ್ತಿನಲ್ಲಿ ಆಗಿದ್ದೇನು? | South Korea

ಸಿಎಂ ಊಟ ಮಾಡಿತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೇ ಇಟ್ಟುಕೊಂಡು ಬಿಜೆಪಿ ಮತ್ತು ಪ್ರಾಣಿ ಹಕ್ಕುಗಳ ಗುಂಪುಗಳ ಸದಸ್ಯರು ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಿಎಂ ಈ ಕೂಡಲೇ ಕ್ಷಮೆಯಾಚಿಸಬೇಕು ಜತೆಗೆ ಕಾಡುಕೋಳಿ ಭೇಟೆ ಮಾಡಿದವರ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಒತ್ತಾಯಿಸಿದೆ.

ಇನ್ನು ನಮ್ಮ ದೇಶದಲ್ಲಿ ಅಪರೂಪದ ಪ್ರಾಣಿಗಳಲ್ಲಿ ಒಂದಾಗಿರುವ ಕಾಡಿನಕೋಳಿ(ಅರಣ್ಯ ಪ್ರದೇಶ ಕೋಳಿ)ಗಳನ್ನು ಕಾನೂನಿನಡಿಯಲ್ಲಿ ಸಂರಕ್ಷಿಸಲಾಗಿದೆ. ಈ ಕೋಳಿಗಳನ್ನು ಭೇಟಿ ಆಡುವುದು ನಿಷೇಧವಾಗಿದೆ. ಅದರೂ ಮುಖ್ಯಮಂತ್ರಿಗಳ ಔತಣಕೂಟದಲ್ಲಿ ಕಾಡುಕೋಳಿಯನ್ನು ಹೇಗೆ ಬಡಿಸಲಾಗಿತ್ತು ಎಂದು ಪ್ರಾಣಿ ಹಕ್ಕುಗಳ ಗುಂಪುಗಳು ಕಿಡಿಕಾರಿವೆ,(ಏಜೆನ್ಸೀಸ್​)

ದೆಹಲಿಯ ಶಾಲೆಗಳಿಗೆ ವಾರದೊಳಗೆ ಮೂರನೇ ಬಾಂಬ್​ ಬೆದರಿಕೆ; ವಿದ್ಯಾರ್ಥಿ ಬಂಧನ! | Bomb

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…