ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಪದಚ್ಯುತಿ; ; ಸಂಸತ್ತಿನಲ್ಲಿ ಆಗಿದ್ದೇನು? | South Korea

blank

ಸಿಯೋಲ್​: ದಕ್ಷಿಣ ಕೊರಿಯಾದ(South Korea)ಶಾಸಕರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶನಿವಾರ(ಡಿಸೆಂಬರ್​ 14) ಅಧ್ಯಕ್ಷ ಯೂನ್ ಸುಕ್ ಯೋಲ್​​ ವಿರುದ್ಧ ದೋಷಾರೋಪಣೆ ನಿರ್ಣಯವನ್ನು ಅನುಮೋದಿಸಿದರು. ಕಳೆದ ವಾರ ಸಮರ ಕಾನೂನನ್ನು ಹೇರುವ ಪ್ರಯತ್ನದಲ್ಲಿ ಅಧ್ಯಕ್ಷರು ವಿಫಲವಾದ ನಂತರ ಈ ದೋಷಾರೋಪಣೆಯನ್ನು ತರಲಾಯಿತು.

ಇದನ್ನು ಓದಿ: ಹಿಜಾಬ್ ಇಲ್ಲದೆ ಆನ್‌ಲೈನ್ ಕನ್ಸರ್ಟ್‌ನಲ್ಲಿ ಪ್ರದರ್ಶನ; ಗಾಯಕಿಗೆ ಇರಾನ್​​​​ ನ್ಯಾಯಾಂಗ ಹೇಳಿದ್ದೇನು? | Iran

300 ಸಂಸದರ ಪೈಕಿ 204 ಮಂದಿ ಅಧ್ಯಕ್ಷರ ವಿರುದ್ಧ ಮಹಾಭಿಯೋಗದ ಪರವಾಗಿ ಮತ ಹಾಕಿದರೆ, 85 ಮಂದಿ ವಿರೋಧಿಸಿದರು. ಮೂವರು ಸಂಸದರು ಮತದಾನದಿಂದ ದೂರ ಉಳಿದರು. ಈ ಅವಧಿಯಲ್ಲಿ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ದೋಷಾರೋಪಣೆ ಆರೋಪದಲ್ಲಿ ಅಧ್ಯಕ್ಷರ ವಿರುದ್ಧ ದಂಗೆ ಮತ್ತು ಸಾಂವಿಧಾನಿಕ ಕರ್ತವ್ಯಗಳ ಉಲ್ಲಂಘನೆ ಎಂದು ಆರೋಪಿಸಲಾಗಿದೆ.

ಈಗ ಈ ವಿಷಯ ನ್ಯಾಯಾಲಯಕ್ಕೆ ಹೋಗಲಿದ್ದು, ಅಲ್ಲಿ ದೋಷಾರೋಪಣೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅವರನ್ನು ಪುನಃ ಅಧ್ಯಕ್ಷರನ್ನಾಗಿ ಮಾಡಬೇಕೇ ಅಥವಾ ತೆಗೆದುಹಾಕಬೇಕೆ ಎಂಬುದರ ಕುರಿತು ಈಗ ಸಾಂವಿಧಾನಿಕ ನ್ಯಾಯಾಲಯವು ನಿರ್ಧರಿಸುತ್ತದೆ. ಈ ನಿರ್ಧಾರವನ್ನು ಆರು ತಿಂಗಳೊಳಗೆ ನಿರೀಕ್ಷಿಸಲಾಗಿದೆ. ಈ ಬೆಳವಣಿಗೆ ದಕ್ಷಿಣ ಕೊರಿಯಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಯೂನ್ ಸುಕ್ ಯೋಲ್​​ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದರೆ, ಅವರು ದಕ್ಷಿಣ ಕೊರಿಯಾದ ಇತಿಹಾಸದಲ್ಲಿ ದೋಷಾರೋಪಣೆಗೆ ಒಳಗಾದ ಎರಡನೇ ಅಧ್ಯಕ್ಷರಾಗುತ್ತಾರೆ. ಈ ನಿರ್ಧಾರ 60 ದಿನಗಳಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಪ್ರಚೋದಿಸುತ್ತದೆ. ಸದ್ಯ ಯೂನ್ ಸುಕ್ ಯೋಲ್​​ ಅವರ ಅಧ್ಯಕ್ಷೀಯ ಅಧಿಕಾರಗಳು ಮತ್ತು ಕರ್ತವ್ಯಗಳನ್ನು ಅಮಾನತುಗೊಳಿಸಲಾಗಿದೆ. ಪ್ರಧಾನಿ ಹಾನ್ ಡಕ್-ಸೂ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಯೂನ್ ಸುಕ್-ಯೋಲ್ ತುರ್ತು ಮಿಲಿಟರಿ ಕಾನೂನನ್ನು (ಸಮರ ಕಾನೂನು) ಹೇರುವುದಾಗಿ ಮಂಗಳವಾರ(ಡಿಸೆಂಬರ್​ 3) ಘೋಷಿಸಿದರು. ದೇಶದ ಪ್ರತಿಪಕ್ಷಗಳು ಸಂಸತ್ತನ್ನು ನಿಯಂತ್ರಿಸುತ್ತಿವೆ ಹಾಗೂ ಉತ್ತರ ಕೊರಿಯಾದ ಬಗ್ಗೆ ಸಹಾನುಭೂತಿ ತೋರುತ್ತಿವೆ. ರಾಜ್ಯ ವಿರೋಧಿ ಚಟುವಟಿಕೆಗಳ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿವೆ ಎಂದು ಅವರು ಆರೋಪಿಸಿದ್ದರು.(ಏಜೆನ್ಸೀಸ್​​)

ಇಂದಿರಾ ಗಾಂಧಿ ಅವರ ‘ತುರ್ತುಪರಿಸ್ಥಿತಿ’ ಸಮರ್ಥಿಸಿಕೊಂಡ Priyanka Gandhi ; ಲೋಕಸಭೆಯ ಮೊದಲ ಭಾಷಣದಲ್ಲಿ ಹೇಳಿದ್ದೇನು?

Share This Article

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…