ಇಂದಿರಾ ಗಾಂಧಿ ಅವರ ‘ತುರ್ತುಪರಿಸ್ಥಿತಿ’ ಸಮರ್ಥಿಸಿಕೊಂಡ Priyanka Gandhi ; ಲೋಕಸಭೆಯ ಮೊದಲ ಭಾಷಣದಲ್ಲಿ ಹೇಳಿದ್ದೇನು?

blank

ನವದೆಹಲಿ: ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯ ವೇಳೆ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಬಿಜೆಪಿ ಮತ್ತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜನಾಥ್ ಸಿಂಗ್ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ ಸಂಪೂರ್ಣ ಜವಾಬ್ದಾರಿಯನ್ನು ಜವಾಹರಲಾಲ್ ನೆಹರು ಮೇಲೆ ಹಾಕಲಾಗಿದೆ. ನೀವು ಈಗಿನ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಹೇಳುತ್ತಾ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಸರ್ಕಾರಗಳನ್ನು ಸಮರ್ಥಿಸಿಕೊಂಡರು.

ಇದನ್ನು ಓದಿ: ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕಾರ; ಬಾಂಗ್ಲಾದೇಶ ನ್ಯಾಯಾಲಯ ಹೇಳಿದ್ದೇನು? | Bangladesh

ಇದಲ್ಲದೇ ಅಜ್ಜಿ ಇಂದಿರಾ ಗಾಂಧಿಯ ಹೇರಿದ್ದ ತುರ್ತುಪರಿಸ್ಥಿತಿ ಕುರಿತು ಮಾತನಾಡಿದ ಅವರು ಇಲ್ಲಿ ನಾವು 1975ರ ಬಗ್ಗೆ ಮಾತನಾಡುತ್ತೇವೆ. ನೀವು ಕಲಿಯಬೇಕು ಎಂದು ನಾನು ಹೇಳುತ್ತೇನೆ. ನೀವು ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆಯನ್ನು ಏಕೆ ನಡೆಸಬಾರದು? ಹಾಲು ಹಾಲು ಮತ್ತು ನೀರು ನೀರಾಗಿ ಬದಲಾಗುತ್ತದೆ ಎಂದು ಹೇಳಿದರು.  ಬಿಜೆಪಿ ಸರ್ಕಾರ ಸಂವಿಧಾನ ಬದಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರಿಯಾಂಕಾ ಗಾಂಧಿ, ಸಂವಿಧಾನ ಬದಲಿಸುವ ಕೆಲಸ ಆರಂಭವಾಗಿದೆ. ಸಾಮಾನ್ಯರಿಗೆ ನೀಡಿರುವ ಸಂವಿಧಾನದ ರಕ್ಷಣಾತ್ಮಕ ಕವಚವನ್ನು ಆಡಳಿತ ಪಕ್ಷದವರು ಒಡೆಯಲು ಆರಂಭಿಸಿದ್ದಾರೆ ಎಂದರು.

ಈ ಸರ್ಕಾರವು ಲ್ಯಾಟರಲ್ ಎಂಟ್ರಿ ಮತ್ತು ಖಾಸಗೀಕರಣದ ಮೂಲಕ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದೆ. ಲೋಕಸಭೆಯಲ್ಲಿ ಇಂತಹ ಫಲಿತಾಂಶ ಬರದೇ ಇದ್ದಿದ್ದರೆ ಸಂವಿಧಾನ ಬದಲಿಸುವ ಕೆಲಸ ಆರಂಭಿಸುತ್ತಿದ್ದರು. ಸಾರ್ವಜನಿಕರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸಿಕೊಟ್ಟಿರುವುದರಿಂದ ಈ ಜನರು ಸಂವಿಧಾನವನ್ನು ಬದಲಾಯಿಸುತ್ತಿದ್ದಾರೆ ಎಂಬುದು ಇಂದು ಸತ್ಯ. ಸೋಲು-ಗೆಲುವಿನ ನಂತರ ಅವರ ಸ್ವರವೇ ಬದಲಾಗಿದೆ. ಇಂದು ಸಾರ್ವಜನಿಕರು ಜಾತಿಗಣತಿ ಆಗಬೇಕು ಎಂದು ಆಗ್ರಹಿಸಿದ್ದಾರೆ. ಈ ಜನಗಣತಿ ಅಗತ್ಯವಾಗಿದ್ದು ಪ್ರತಿಯೊಬ್ಬ ವ್ಯಕ್ತಿಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸಬಹುದಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​​)

ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಜಾಮೀನು ಅರ್ಜಿ ತಿರಸ್ಕಾರ; ಬಾಂಗ್ಲಾದೇಶ ನ್ಯಾಯಾಲಯ ಹೇಳಿದ್ದೇನು? | Bangladesh

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…