blank

BBK11: ಫಿನಾಲೆ ಓಟದಿಂದ ಹೊರಬಿದ್ದ ‘ಬಿಗ್​’ ಸ್ಪರ್ಧಿ ಚೈತ್ರಾ ಕುಂದಾಪುರ!

blank

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ 11ರ ಗ್ರ್ಯಾಂಡ್​ ಫಿನಾಲೆ ಉಳಿದಿರುವುದು ಇನ್ನೂ ಎರಡೇ ವಾರಗಳಷ್ಟೇ. ಈ ವಾರದ ಮಧ್ಯೆ 100 ದಿನಗಳನ್ನು ಪೂರೈಸಿದ ಬಿಗ್ ಮಂದಿ, ವಾರಾಂತ್ಯದೊಳಗೆ ಆಡಿದ ಅಷ್ಟು ಮಾರಿಹಬ್ಬದ ಟಾಸ್ಕ್​ಗಳಲ್ಲಿ ಬಿರುಸಿನ ಪೈಪೋಟಿ ನೀಡಿ, ಇದೀಗ ಫಿನಾಲೆ ಟಿಕೆಟ್​ಗಾಗಿ ಸೆಣಸಾಡುತ್ತಿದ್ದಾರೆ. ಫಿನಾಲೆಯ ಕೊನೆಯ ಹಂತ ತಲುಪಲು ಉಳಿವಿಕೆಗಾಗಿ ಪ್ರಾರ್ಥಿಸುತ್ತಿದ್ದ ಐದು ನಾಮಿನೇಟ್ ಆದ ಸ್ಪರ್ಧಿಗಳ ಪೈಕಿ ಇದೀಗ ಚೈತ್ರಾ ಕುಂದಾಪುರ ಬಿಗ್ ಮನೆಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ: ಆರೋಗ್ಯಕರ ಟೀಕೆ ಸ್ವಾಗತ, ತಿದ್ದಿಕೊಳ್ಳುವೆ; ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್: ಸಿಎಂ

ಈ ವಾರ ನಾಮಿನೇಷನ್​ ಪಟ್ಟಿಯಲ್ಲಿ ಸಿಲುಕಿದ ತ್ರಿವಿಕ್ರಮ್, ಮೋಕ್ಷಿತಾ, ಧನರಾಜ್​, ಭವ್ಯ ಗೌಡ ಮತ್ತು ಧನರಾಜ್​ ನಡುವೆ ಅಂತಿಮವಾಗಿ ಚೈತ್ರಾ ಫಿನಾಲೆ ಓಟದಿಂದ ಹೊರಗುಳಿದಿದ್ದಾರೆ. ಮೋಕ್ಷಿತಾ, ಧನರಾಜ್​ ಜತೆ ಸಂಚಿಕೆಯ ಕೊನೆಯವರೆಗೂ ಉಳಿವು-ಗೆಲುವಿನ ಚಿಂತೆಯಲ್ಲಿ ಮುಳುಗಿದ್ದ ಚೈತ್ರಾ, ಸುದೀಪ್​ ಅವರ ಘೋಷಣೆಯ ಮೇರೆಗೆ ಬಿಗ್ ಮನೆಯಿಂದ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ.

ಈಗಾಗಲೇ ಫಿನಾಲೆ ಟಿಕೆಟ್​ ಗೆದ್ದು ನೇರವಾಗಿ ಗ್ರ್ಯಾಂಡ್​ ಫಿನಾಲೆ ವೇದಿಕೆ ಹತ್ತಿರುವ ಹನುಮಂತು ಜತೆ ಇನ್ನೂ ನಾಲ್ವರು ಯಾರಾಗುತ್ತಾರೆ ಎಂಬ ಕುತೂಹಲ ಸದ್ಯ ವೀಕ್ಷಕರಲ್ಲಿ ಕಾಡಿದೆ. ಮುಂದಿನ ವಾರ ಯಾರು ಮನೆಯಿಂದ ಎಲಿಮಿನೇಟ್ ಆಗಿ ಹೊರಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಚಿರಂಜೀವಿ, ಮಹೇಶ್​ ಬಾಬು… ಯಾರೊಬ್ಬರು ಸ್ಪಂದಿಸುತ್ತಿಲ್ಲ, ಸಾಯುವುದೇ ಉಳಿದಿರುವ ದಾರಿ! ಹಿರಿಯ ನಟಿ ಕಣ್ಣೀರು | Pavala Syamala

Share This Article

ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…

ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips

ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…