More

    ಬಿಜೆಪಿಗೆ ವೋಟ್​ ಹಾಕಿದ್ದಕ್ಕೆ ಸಿಟ್ಟು; ಚಾಲಕನನ್ನು ಥಳಿಸಿ ಆಟೋ ಜಖಂ ಮಾಡಿದ ಕಿಡಿಗೇಡಿಗಳು

    ಶಿವಮೊಗ್ಗ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

    ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೂ ಅದರ ಬಿಸಿ ಕಡಿಮೆಯಾದಂತೆ ಕಾಣುತ್ತಿಲ್ಲ. ಇದೀಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಜ್ರುಲ್​, ಅಬ್ರಾರ್​ ಹಾಗೂ ಸಂಗಡಿಗ ಬಿಜೆಪಿಗೆ ಮತ ಹಾಕಿದ್ದಕ್ಕೆ ಕುಪಿತಗೊಂಡು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ವಾಹನವನ್ನು ಜಖಂಗೊಳಿಸಿರುವ ಘಟನೆ ಶಿವಮೊಗ್ಗದ ಸೋಮಿನಕೊಪ್ಪ ಬಡಾವಣೆಯಲ್ಲಿ ನಡೆದಿದೆ.

    ಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ

    ಗಾಯಾಳು ಆಟೋ ಚಾಲಕ ಹರೀಶ್​ ರಾವ್​ ಎಂದಿನಂತೆ ಕೆಲಸ ಮಾಡುತ್ತಿದ್ದ ವೇಳೆ ನಜ್ರುಲ್​ ಅಲಿಯಾಸ್​ ಡಬ್ಬಾ, ಅಬ್ರಾರ್​ ಉರುಫ್​ ಇಡ್ಲಿ, ಹಾಗೂ ಇನ್ನೋರ್ವ ಆರೋಪಿ ಇವರ ಬಳಿ ಬಂದು ಖ್ಯಾತೆ ತೆಗೆದಿದ್ದಾರೆ.

    ಈ ವೇಳೆ ಆರೋಪಿಗಳು ಹರೀಶ್​ಗೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದ್ದೀಯಾ ಎಂದು ಕೇಳಿದ್ದಾರೆ. ಈ ವೇಳೆ ಸಂತ್ರಸ್ತ ತಾನು ಬಿಜೆಪಿಗೆ ವೋಟ್​ ಮಾಡಿರುವುದಾಗಿ ಹೇಳಿದ್ಧಾನೆ.

    eshwarappa

    ಇದಕ್ಕೆ ಕುಪಿತಗೊಂಡು ಆರೋಪಿಗಳು ಚಾಲಕನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಆಟೋವನ್ನು ರಾಡ್​ನಿಂದ ಜಖಂಗೊಳಿಸಿ ಪರಾರಿಯಾಗಿದ್ದಾರೆ.

    ಇದನ್ನೂ ಓದಿ: ಸರ್ಕಾರಿ ಶಾಲೆ ಶಿಕ್ಷಕನಿಂದ ಬಾಲಕಿಯರಿಗೆ ಕಿರುಕುಳ; ಆರೋಪಿ ಅರೆಸ್ಟ್​​, ಪ್ರಾಂಶುಪಾಲ ಅಮಾನತು

    ಈಶ್ವರಪ್ಪ ಭೇಟಿ ಸಾಂತ್ವಾನ

    ಘಟನೆ ನಡೆದ ಕೂಡಲ್ಲೇ ಜಖಂಗೊಂಡ ಆಟೋ ಸಮೇತ ಚಾಲಕ ಹರೀಶ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ದುರು ಸಲ್ಲಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಈ ವೇಳೆ ಮಾಜಿ ಡಿಸಿಎಂ ಕೆ.ಎಸ್​. ಈಶ್ವರಪ್ಪ ಹಾಗೂ ದೂರುದಾರ ಹರೀಶ್​ ಎದುರಾಗಿದ್ದು ತನಗಾದ ಬಗ್ಗೆ ಹೇಳಿಕೊಂಡು ರಕ್ಷಣೆ ನೀಡುವಂತೆ ಕೋರಿ ಮಾಜಿ ಸಚಿವರ ಕಾಲಿಗೆ ಬಿದ್ದಿದ್ದಾನೆ.

    ಆಟೋ ಚಾಲಕನ ಮನವಿಗೆ ಸ್ಪಂದಿಸಿದ ಕೆ.ಎಸ್​. ಈಶ್ವರಪ್ಪ ಸಾಂತ್ವಾನ ಹೇಳಿದ್ದಾರೆ ಮತ್ತು 20,000 ಸಾವಿರ ರೂಪಾಯಿ ಪರಿಹಾರವನ್ನು ನೀಡಿದ್ದಾರೆ. ಕೂಡಲೇ ಜಿಲ್ಲಾ  ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts