ಲಾಹೋರ್: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಗೂ ಮುನ್ನವೇ ಖ್ಯಾತೆ ತೆಗೆದಿರುವ ಪಾಕಿಸ್ತಾನ ಇದೀಗ ಹೊಸ ಪ್ರಸ್ತಾವನೆ ಒಂದನ್ನು ಮುಂದಿಟ್ಟಿದೆ.
ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(PCB) ಅಧ್ಯಕ್ಷ ನಜಮ್ ಸೇಥಿ ಹೇಳಿಕೆ ನೀಡಿದ್ದು ಏಷ್ಯಾಕಪ್ ಆತಿಥ್ಯ ಪಾಕಿಸ್ತಾನದ ಕೈ ತಪ್ಪಿ ಹೋದರೆ ನಾವು ಭಾರತದಲ್ಲಿ ನಡೆಯುವ ವಿಶ್ವಕಪ್ ಅನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ.
ಬಹಿಷ್ಕರಿಸುತ್ತೇವೆ
2023ರ ಸೆಪ್ಟೆಂಬರ್ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಯೂ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು ಈ ಬಗ್ಗೆ ಪಿಸಿಬಿ ಆಕ್ಷೇಪ ವ್ಯಕ್ತಪಡಿಸಿದೆ.
ಒಂದು ವೇಳೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿರುವ ಏಷ್ಯಾಕಪ್ ಪಂದ್ಯಾವಳಿಗಳನ್ನು ಸ್ಥಳಾಂತರಿಸಿದ್ದಲ್ಲಿ ನಾವು ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ
ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧದ ಕಾರಣ ಉಭಯ ದೇಶಗಳ ನಡುವೆ ಕಳೆದ ಒಂದು ದಶಕದಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಉಭಯ ದೇಶದ ಕ್ರಿಕೆಟ್ ತಂಡಗಳು ಐಸಿಸಿ ನಡೆಸುವ ಟೂರ್ನಮೆಂಟ್ಗಳಲ್ಲಿ ತಟಸ್ಥ ಸ್ಥಳಗಳಲ್ಲಿ ಮಾತ್ರ ಆಡುತ್ತವೆ ಎಂದು ನಜಂ ಸೇಥಿ ಹೇಳಿದ್ದಾರೆ.
ಭದ್ರತೆಯ ಕಾರಣದಿಂದಾಗಿ ಬಿಸಿಸಿಐ ಪಾಕಿಸ್ತಾನಕ್ಕೆ ಆಟಗಾರರನ್ನು ಕಳುಹಿಸಲು ನಿರಾಕರಿಸಿದೆ. ಆದರೆ, ನಾವು ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಯುಎಇನಲ್ಲಿ ನಡೆಸುವುದಾಗಿ ಘೋಷಿಸಿರುವುದರ ಹೊರತ್ತಾಗಿಯೂ ಈ ನಿರ್ಧಾರ ಸರಿಯಲ್ಲ ಎಂದಿದ್ದಾರೆ.
ಇದನ್ನೂ ಓದಿ: ಚಿಕಿತ್ಸೆಗಾಗಿ ಬಿಸಿಲಿನಲ್ಲಿ 7ಕಿ.ಮೀ ನಡೆದು ಪ್ರಾಣ ಬಿಟ್ಟ ಗರ್ಭಿಣಿ!
ಬದಲಿ ತಾಣದಲ್ಲಿ ನಡೆಸಿ
ಒಂದು ವೇಳೆ ಪಾಕಿಸ್ತಾನದೊಂದಿಗೆ ಭದ್ರತೆಯ ಕಾರಣದಿಂದಾಗಿ ಭಾರತ ಕ್ರಿಕೆಟ್ ತಂಡ ಆಡಲು ಮುಂದೆ ಬಾರದಿದ್ದರೆ ನಾವು ನಮ್ಮ ತಂಡವನ್ನ ವಿಶ್ವಕಪ್ ಆಡಲು ಕಳುಹಿಸುವುದಿಲ್ಲ.
ಭಾರತದಲ್ಲಿ ನಮ್ಮ ಭದ್ರತೆಯ ಹಿತದೃಷ್ಟಯಿಂದ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದೇಶ ಅಥವಾ ಯುಎಇನಲ್ಲಿ ನಡೆಸಿ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಥಿ ಬಿಸಿಸಿಐ ಹಾಗೂ ಐಸಿಸಿಗೆ ಷರತ್ತು ವಿಧಿಸಿದದ್ದಾರೆ.