ಈ ರೀತಿನೂ ಆಮ್ಲೆಟ್​ ಮಾಡ್ತಾರಾ? ನಾನಾ ಪಾಟೇಕರ್​ ಅಡುಗೆ ತಂತ್ರಕ್ಕೆ ಆಶಿಶ್ ವಿದ್ಯಾರ್ಥಿ ಫಿದಾ! Ashish Vidyarthi

Ashish Vidyarthi

Ashish Vidyarthi : ಖಳ ನಾಯಕನಾಗಿ ತೆರೆಯ ಮೇಲೆ ಅಬ್ಬರಿಸುವ ಆಶಿಶ್ ವಿದ್ಯಾರ್ಥಿ ಅವಕಾಶಗಳ ಕೊರತೆಯಿಂದ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆಶಿಶ್​ ವಿದ್ಯಾರ್ಥಿ ಓರ್ವ ಆಹಾರಪ್ರಿಯ ಎಂಬುದು ಎಲ್ಲರಿಗೂ ತಿಳಿದಿದೆ. ಬಗೆಬಗೆಯ ಖಾದ್ಯಗಳನ್ನು ಸವಿಯುವುದರಲ್ಲಿ ಅವರ ಸದಾ ಮುಂದು.

ಆಶಿಶ್​ ವಿದ್ಯಾರ್ಥಿ ಅವರು ತಮ್ಮ ಫುಡ್​ ವ್ಲಾಗಿಂಗ್​ ಮೂಲಕ ದೇಶದ ಪ್ರಸಿದ್ಧ ಖಾದ್ಯಗಳನ್ನು ಅನ್ವೇಷಿಸುವುದೇ ಅವರ ಕೆಲಸ. ಬಗೆ ಬಗೆಯ ಖಾದ್ಯಗಳನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸುತ್ತಾರೆ. ಇದರ ಭಾಗವಾಗಿ ಇತ್ತೀಚೆಗೆ, ಆಶಿಶ್​ ವಿದ್ಯಾರ್ಥಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ನಟ ನಾನಾ ಪಾಟೇಕರ್ ಅವರೇ ಆಶಿಶ್‌ಗೆ ಅಡುಗೆ ಮಾಡಿ ಬಡಿಸಿದ್ದಾರೆ.

ವಿಡಿಯೋದಲ್ಲಿ ನಾನಾ ಪಾಟೇಕರ್​ ಅವರು ಸಿನಿಮಾ ಶೂಟಿಂಗ್​ ಸೆಟ್​ನಲ್ಲಿ ಆಶಿಶ್​ ವಿದ್ಯಾರ್ಥಿಗೆ ಆಮ್ಲೆಟ್​ ಮಾಡಿ ಬಡಿಸಿದ್ದಾರೆ. ಪಾಟೇಕರ್​ ಅವರು ಆಮ್ಲೆಟ್​ ಮಾಡಿದ ವಿಧಾನಕ್ಕೆ ಆಶಿಶ್​ ವಿದ್ಯಾರ್ಥಿ ಮನಸೋತಿದ್ದಾರೆ. ಒಂದು ಬದಿಯಲ್ಲಿ ಸುಟ್ಟ ಆಮ್ಲೆಟ್ ಅನ್ನು ಇನ್ನೊಂದು ಬದಿಗೆ ತಿರುಗಿಸಲು ಪಾಟೇಕರ್​ ಅವರು ಒಂದು ತಟ್ಟೆಯನ್ನು ಬಳಸಿದರು.

ಇದನ್ನೂ ಓದಿ: ಹಿಂದುಗಳೇ ಹಿಂತಿರುಗಿ… ಅಮೆರಿಕದ ಹಿಂದು ದೇವಾಲಯದಲ್ಲಿ ಭಾರತ ವಿರೋಧಿ ಬರಹಕ್ಕೆ ತೀವ್ರ ಖಂಡನೆ! Hindu temple

ಮೊದಲು, ಆಮ್ಲೆಟ್ ಮಿಶ್ರಣವನ್ನು ಒಂದು ಪ್ಯಾನ್‌ನಲ್ಲಿ ಸುರಿದರು. ಅದು ಒಂದು ಬದಿಯಲ್ಲಿ ಸುಟ್ಟ ನಂತರ, ಪಾಟೇಕರ್​ ಅವರು ಆಮ್ಲೆಟ್​ ಅನ್ನು ತೆಗೆದುಕೊಂಡು ಒಂದು ತಟ್ಟೆಯಲ್ಲಿ ಇಟ್ಟರು. ಇದಾದ ನಂತರ ತಟ್ಟೆಯಲ್ಲಿದ್ದದ್ದನ್ನು ಮತ್ತೆ ಪ್ಯಾನ್‌ನಲ್ಲಿ ಇಟ್ಟರು. ಆಮ್ಲೆಟ್​ ಒಂದು ಚೂರು ಮುರಿಯದಂತೆ ತಡೆಯಲು ನಾನಾ ಪಾಟೇಕರ್​ ಅವರು ಈ ತಂತ್ರವನ್ನು ಬಳಸಿದರು. ಅದನ್ನು ನೋಡಿದ ಆಶಿಶ್ ವಿದ್ಯಾರ್ಥಿ ಒಂದು ಕ್ಷಣ ಆಶ್ಚರ್ಯಚಕಿತನಾದರು. ಮೊದಲಿಗೆ, ಅದೊಂದು ತಪ್ಪು ವಿಧಾನ ಎಂದು ಭಾವಿಸಿದ್ದರು. ಆದರೆ, ಕೊನೆಯಲ್ಲಿ ಅದೊಂದು ವಿಶಿಷ್ಟ ತಂತ್ರ ಎಂದು ಹೊಗಳಿರು.

ನಾನಾ ಪಾಟೇಕರ್ ಮಾಡಿದ ಆಮ್ಲೆಟ್ ತಿಂದು ತುಂಬಾ ಚೆನ್ನಾಗಿದೆ ಎಂದು ಆಶಿಶ್​ ವಿದ್ಯಾರ್ಥಿ ಹೇಳಿದರು. ನಿಮ್ಮ ಕಾಳಜಿ, ಪ್ರೀತಿಗೆ ಮನಸೋತಿದ್ದೇನೆ ನಾನಾ ಎಂದು ಇನ್​ಸ್ಟಾಗ್ರಾಂನಲ್ಲಿ ಆಶಿಶ್​ ವಿದ್ಯಾರ್ಥಿ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಅಂದಹಾಗೆ ಆಶಿಶ್ ವಿದ್ಯಾರ್ಥಿ ಮೂಲತಃ ಬಾಲಿವುಡ್​ನವರು. ಕನ್ನಡದಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಕೆ47, ಕೋಟಿಗೊಬ್ಬ, ವಂದೇ ಮಾತರಂ, ನಂದಿ, ದುರ್ಗಿ, ಆಕಾಶ್​, ಆ ದಿನಗಳು, ಪೊರ್ಕಿ ಹಾಗೂ ಬಚ್ಚನ್​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

ಆತ ಏನಾದ್ರೂ ಕೇವಲ 20 ಓವರ್​ ನಿಂತ್ರೆ ಚಾಂಪಿಯನ್ಸ್​ ಟ್ರೋಫಿ ನಮ್ಮದೇ… ಆಕಾಶ್​ ಚೋಪ್ರಾ ಅಚ್ಚರಿ ಹೇಳಿಕೆ! Champions Trophy

ಈ 3 ರಾಶಿಯವರು ಹಣಕ್ಕಿಂತಲೂ ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs

Share This Article

ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango

mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…

ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ..  Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ.  ಚಿನ್ನದ ಅಂಗಡಿಗಳು ವ್ಯಾಪಾರದಿಂದ…

ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್​​ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice

  Sugarcane Juice: ಕಬ್ಬಿನ ಜ್ಯೂಸ್​​ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…