ವಾಪಸ್​ ಹೋಗಬೇಕಿತ್ತಾ? ಆರ್​ಸಿಬಿ ಆಪದ್ಬಾಂಧವ​ ಹ್ಯಾಸಲ್​ವುಡ್​ ವಿರುದ್ಧ ಮಿಚೆಲ್​ ಜಾನ್ಸನ್ ವಾಗ್ದಾಳಿ! Josh Hazlewood ​

Josh Hazlewood

Josh Hazlewood : ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್, ತಮ್ಮದೇ ತಂಡದ ವೇಗದ ಬೌಲರ್​ ಜೋಶ್ ಹ್ಯಾಸಲ್‌ವುಡ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ತಂಡಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) 2025ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋತ ನಂತರ ಮಿಚೆಲ್​ ಜಾನ್ಸನ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಇಂಗ್ಲೆಂಡ್​ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ, ಅಂತಿಮವಾಗಿ 27 ವರ್ಷಗಳಿಂದ ತಪ್ಪಿಸಿಕೊಂಡಿದ್ದ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಜೋಶ್ ಹ್ಯಾಸಲ್‌ವುಡ್ ಅದ್ಭುತ ಪ್ರದರ್ಶನ ನೀಡಿದರು. ಆರ್‌ಸಿಬಿ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ 22 ವಿಕೆಟ್‌ಗಳೊಂದಿಗೆ ಹ್ಯಾಸಲ್​ವುಡ್​ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಅವರು 2023-25​​ರ ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದರು. ಐಪಿಎಲ್ 2025ರ ಅಂತಿಮ ಹಂತದಲ್ಲಿ ಗಾಯಗೊಂಡಿದ್ದ ಹ್ಯಾಸಲ್‌ವುಡ್ ನಂತರ ಚೇತರಿಸಿಕೊಂಡರು. ಆಪರೇಷನ್​ ಸಿಂಧೂರ ಬಳಿಕ ಭಾರತ ಮತ್ತು ಪಾಕ್​ ನಡುವೆ ಉಂಟಾದ ಉದ್ವಿಗ್ನತೆಯಯಿಂದಾಗಿ ಐಪಿಎಲ್​ ಅನ್ನು ಕೆಲ ಕಾಲ ಮುಂದೂಡಲಾಯಿತು. ಇದು ಕೂಡ ಗಾಯಾಳುಗಳು ಚೇತರಿಸಿಕೊಳ್ಳಲು ನೆರವಾಯಿತು. ಇತ್ತ ಡಬ್ಲ್ಯೂಟಿಸಿ ಫೈನಲ್ ಸಮೀಪಿಸುತ್ತಿದ್ದರೂ ಹ್ಯಾಸಲ್​ವುಡ್​ ಐಪಿಎಲ್ 2025ರ ಪ್ಲೇಆಫ್‌ಗಳನ್ನು ಆಡಿದರು.

ಇದನ್ನೂ ಓದಿ: ವಿಮಾನ ಪತನವಾದಾಗಿನಿಂದ ನಿರ್ದೇಶಕ ನಾಪತ್ತೆ: ಪತ್ನಿಗೆ ಕೊನೇ ಕಾಲ್​ ಮಾಡಿ ಹೇಳಿದ್ದೇನು? ಆತನಿಗೆ ಏನಾಯ್ತು? Ahmedabad Plane Crash

ತಮ್ಮ ರಾಷ್ಟ್ರೀಯ ತಂಡವನ್ನು ಲೆಕ್ಕಿಸದೇ ಐಪಿಎಲ್ 2025ರಲ್ಲಿ ಆಡಿದ್ದಕ್ಕಾಗಿ ಮತ್ತು ಡಬ್ಲ್ಯೂಟಿಸಿ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಕ್ಕಾಗಿ ಮಿಚೆಲ್ ಜಾನ್ಸನ್, ಹ್ಯಾಸಲ್​ವುಡ್​ ಅವರನ್ನು ಟೀಕಿಸಿದ್ದಾರೆ. ಹ್ಯಾಸಲ್‌ವುಡ್ ಅವರು ರಾಷ್ಟ್ರೀಯ ತಂಡದ ಸಿದ್ಧತೆಗಿಂತ ಐಪಿಎಲ್​ಗೆ ಆದ್ಯತೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹ್ಯಾಸಲ್‌ವುಡ್ ಅವರ ಫಿಟ್‌ನೆಸ್ ಉತ್ತಮವಾಗಿಲ್ಲ. ಈ ಬಗ್ಗೆ ಕಳವಳ ಇದೆ. ರಾಷ್ಟ್ರೀಯ ತಂಡದ ಸಿದ್ಧತೆಗಿಂತಲೂ ವಿಳಂಬವಾದ ಐಪಿಎಲ್‌ಗೆ ಮರಳಿದ್ದನ್ನು ನೋಡಿ ನಮ್ಮ ಹುಬ್ಬೇರಿದೆ. ಈ ಬಗ್ಗೆ ಹಲವು ಪ್ರಶ್ನೆಗಳು ಸಹ ಇವೆ ಎಂದು ವೆಸ್ಟ್​ ಆಸ್ಟ್ರೇಲಿಯನ್​ಗೆ ಜಾನ್ಸನ್​ ಬರೆದಿದ್ದಾರೆ.

ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಮತ್ತು ನಾಥನ್ ಲಿಯಾನ್​ರಂತಹ ಹಿರಿಯ ಆಟಗಾರರ ಬಗ್ಗೆ ಜಾನ್ಸನ್​ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಾಲ್ವರೇ ನಮ್ಮ ಬಹುದೊಡ್ಡ ಬೌಲಿಂಗ್​ ಸಾಮರ್ಥ್ಯ. ಆದರೆ, ಇದನ್ನೇ ಲಘುವಾಗಿ ತೆಗೆದುಕೊಳ್ಳಬೇಡಿ. ಅನುಭವಿ ಆಟಗಾರರು ಕೇವಲ ಆಶಸ್ ಸರಣಿಗಾಗಿ ಮಾತ್ರ ವಿದಾಯ ಹೇಳುತ್ತಿದ್ದರೆ, ಅದು ಸರಿಯಾದ ಮನಸ್ಥಿತಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಮುಂದಿನ ಟೆಸ್ಟ್ ಆಟಗಾರರನ್ನು ಆಯ್ಕೆ ಮಾಡುವಾಗ ಭವಿಷ್ಯವನ್ನು ಸ್ವೀಕರಿಸುವುದು ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು ಇಲ್ಲಿ ಬಹಳ ಮುಖ್ಯ ಎಂದು ಜಾನ್ಸನ್​ ಹೇಳಿದರು.

ಸ್ಯಾಮ್ ಕಾನ್ಸ್ಟಾಸ್, ಜೋಶ್ ಇಂಗ್ಲಿಸ್ ಮತ್ತು ಸ್ಕಾಟ್ ಬೋಲ್ಯಾಂಡ್‌ರಂತಹ ಪ್ರತಿಭಾನ್ವಿತ ಆಟಗಾರರು ತಮ್ಮ ದೇಶವನ್ನು ಪ್ರತಿನಿಧಿಸಲು ಉತ್ಸುಕರಾಗಿದ್ದರು. ಆದರೆ, ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮನ್ನು ತಾವು ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ. ಪ್ರಸ್ತುತ ಹಿರಿಯ ಆಟಗಾರರನ್ನು ಹೊಂದಿರುವ ತಂಡವು ಒಟ್ಟಾಗಿ ಸಾಕಷ್ಟು ಸಾಧಿಸಿದೆ ಎಂದು ನಾನು ಅತಿಯಾಗಿ ಟೀಕಿಸುತ್ತಿಲ್ಲ. ಹಿರಿಯರಾದ ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶೇನ್ ಸೇರಿದಂತೆ ನಮ್ಮ ಆಟಗಾರರು ಕೆಲವು ಉತ್ತಮ ಸಾಧನೆಗಳನ್ನು ಮಾಡಿದ್ದಾರೆ. ಆದರೆ, ಮುಂಬರುವ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಹೊಸ ಆಟಗಾರರಿಗೆ ಅವಕಾಶಗಳನ್ನು ಒದಗಿಸುವುದು ಉತ್ತಮ ಎಂದು ಜಾನ್ಸನ್ ಸಲಹೆ ನೀಡಿದರು. (ಏಜೆನ್ಸೀಸ್​)

ಇರಾನ್​ ಮೇಲೆ ಇಸ್ರೇಲ್​ನಿಂದ​ ನಿರಂತರ ದಾಳಿ: ಈವರೆಗೆ 224 ಮಂದಿ ಮೃತಪಟ್ಟಿದ್ದಾರೆಂದ ಟೆಹರಾನ್​! Israel

ಆ ಒಂದು ತಪ್ಪಿಗಾಗಿ ಎಬಿಡಿ ಜತೆ ಮಾತು ಬಿಟ್ಟಿದ್ದರಂತೆ ವಿರಾಟ್​: ಮತ್ತೆ ಒಂದಾಗಿದ್ದು ಹೇಗೆ? ಕಹಿ ಕ್ಷಣ ನೆನೆದ ಮಿ. 360! Virat Kohli ​

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…