ಯೂಟ್ಯೂಬರ್ ವಾಸನ್​ ಬೈಕ್​ ಅಪಘಾತ; ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ: ರೈಟರ್ ರತ್ನ ಕುಮಾರ್

blank

ತಮಿಳುನಾಡು: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್, ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದ ಟಿಟಿಎಫ್ ವಾಸನ್, ಭಾನುವಾರ (ಸೆ.17) ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ವೀಲಿ ಮಾಡಲು ಹೋಗಿ ಅಪಘಾತಕ್ಕೀಡಾಗಿದ್ದಾರೆ. ಈ ಬಗ್ಗೆ ಜನರಲ್ಲಿ ಮನವಿ ಮಾಡಿದ ‘ಲಿಯೋ’ ಸಿನಿಮಾದ ಬರಹಗಾರ, ಈ ರೀತಿಯ ಸ್ಟಂಟ್​ಗಳನ್ನು ಬೆಂಬಲಿಸಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್​: ಬಾಯಲ್ಲಿ ನೊರೆ ಬಂದಿದ್ದರ ಹಿಂದಿನ ರಹಸ್ಯ ಬಯಲು

ಬೈಕ್ ಅಪಘಾತದ ಕುರಿತು ಮಾತನಾಡಿದ ದಳಪತಿ ವಿಜಯ್​ ನಟನೆಯ ‘ಲಿಯೋ’ ಸಿನಿಮಾದ ಬರಹಗಾರ ರತ್ನ ಕುಮಾರ್, “ಜನಪ್ರಿಯ ಯೂಟ್ಯೂಬರ್, ದಯವಿಟ್ಟು ಈ ರೀತಿಯ ಡೇರ್‌ಡೆವಿಲ್ ಬೈಕ್ ಸ್ಟಂಟ್​ಗಳನ್ನು ಪ್ರೋತ್ಸಾಹಿಸಬೇಡಿ. ನೀವು ಅಷ್ಟೂ ಆಸಕ್ತರಾಗಿದ್ದರೆ, ಇಂಥ ಸ್ಟಂಟ್​ಗಳನ್ನು ರೇಸ್ ಟ್ರ್ಯಾಕ್‌ನಲ್ಲಿ ಮಾಡಿ. ನಿಮ್ಮ ಥ್ರಿಲ್‌ಗೋಸ್ಕರ ಸಾಮಾನ್ಯ ಜನರು ಯಾಕೆ ಬಲಿಯಾಗಬೇಕು. ಶೀಘ್ರವೇ ಗುಣಮುಖರಾಗಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಅಕ್ರಮವಾಗಿ ವಿದೇಶದಿಂದ ಸಾಗಿಸುತ್ತಿದ್ದ ಇ-ಸಿಗರೇಟ್​ ವಶ!

ಟಿಟಿಎಫ್ ವಾಸನ್ ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಜಾಗದಲ್ಲಿ ಅತಿವೇಗದ ಚಾಲನೆಗಾಗಿ ವಾಸನ್​ ವಿರುದ್ಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

‘ಜವಾನ್​’ ಸಕ್ಸಸ್​; ಈ ಚಿತ್ರರಂಗದಲ್ಲಿ ಹೆಚ್ಚಾಯ್ತು ‘ನಯನತಾರ’ಗೆ ಭಾರೀ ಬೇಡಿಕೆ!

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…