ಮನೆ ಅಥವಾ ಜಮೀನಿನಲ್ಲಿ ನಿಧಿ ಸಿಕ್ರೆ ಯಾರ ಪಾಲಾಗುತ್ತೆ!; ಇದರ ಮೇಲೆ ಹಕ್ಕು ಯಾರಿಗಿದೆ?; ಸರ್ಕಾರದ ಪಾತ್ರ ಏನು?: ಇಲ್ಲಿದೆ ಕಂಪ್ಲೀಟ್​ ಮಾಹಿತಿ | Treasure

blank

Treasure : ಯಾರೊದೋ ಜಮೀನಿನಲ್ಲಿ ಅಥವಾ ಮನೆಯಲ್ಲಿ ನೆಲವನ್ನು ಅಗೆಯುವಾಗ ನಿಧಿ ಸಿಕ್ಕಿದೆ ಎಂದು ನೀವೂ ಕೇಳಿರಬಹುದು ಇಲ್ಲವೆ ಸಿನಿಮಾಗಳಲ್ಲಿ ನೋಡಿರಬಹುದು. ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ, ಅದು ಹೇಗೆ ಸಾಧ್ಯ? ಒಂದು ವೇಳೆ ಅವರಿಗೆ ನಿಧಿ ಸಿಕ್ಕಿರಬಹುದೆ? ಎಂದು ಒಂದಲ್ಲ ಒಂದು ಸಮಯದಲ್ಲಿ ಎಲ್ಲರೂ ಯೋಚಿಸಿದ್ದೇವೆ. ಇದೀಗ ಇಂತಹ ಘಟನೆ ನಮ್ಮೆದುರಿಗೆ ನಡೆದರೆ ಸರ್ಕಾರ ಏನು ಮಾಡುತ್ತೆ, ನಿಧಿ ಯಾರ ಪಾಲಾಗುತ್ತದೆ ಎಂಬ ಮಾಹಿತಿ ತಿಳಿಯೋಣ.

ಇದನ್ನೂ ಓದಿ:ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೆ ಸೂಚನೆ

ಇಂತಹ ನಿಧಿಗಳಿಂದ ಸಿನಿಮಾಗಳಲ್ಲಿ ಶ್ರೀಮಂತರಾಗಬಹುದು. ಆದರೆ, ನಿಜ ಜೀವನದಲ್ಲಿ ಆಗಿಲ್ಲ. ಇದಕ್ಕೆ ಕಾನೂನಿದೆ. ಸರ್ಕಾರ ಕೆಲ ಕ್ರಮಗಳನ್ನು ಕೈಗೊಳ್ಳುತ್ತೆ. ಒಂದು ವೇಳೆ ನಿಧಿ ಸಿಕ್ಕರೆ ಸಂಪೂರ್ಣ ಆಸ್ತಿಯನ್ನು ಅಥವಾ ನಿಧಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಮನೆ ಅಥವಾ ಜಮೀನಿನಲ್ಲಿ ನಿಧಿ ಸಿಕ್ರೆ ಯಾರ ಪಾಲಾಗುತ್ತೆ!; ಇದರ ಮೇಲೆ ಹಕ್ಕು ಯಾರಿಗಿದೆ?; ಸರ್ಕಾರದ ಪಾತ್ರ ಏನು?: ಇಲ್ಲಿದೆ ಕಂಪ್ಲೀಟ್​ ಮಾಹಿತಿ | Treasure

ನಿಧಿಯ ಮೇಲೆ ಸರ್ಕಾರಕ್ಕೆ ಸಂಪೂರ್ಣ ಹಕ್ಕಿದೆ

ಮೊದಲನೆಯದಾಗಿ, ಭಾರತದಲ್ಲಿ ನಿಧಿಯನ್ನು ಅಗೆಯುವ ಹಕ್ಕು ಸರ್ಕಾರಕ್ಕೆ ಬಿಟ್ಟರೆ ಯಾರಿಗೂ ಇಲ್ಲ. ಒಂದು ವೇಳೆ ನಿಧಿ ಅಗೆಯವುದು ಕಂಡುಬಂದರೆ ಕಾನೂನುಕ್ರಮ ಕೈಗೊಳ್ಳಬೇಕಾಗುತ್ತದೆ. ಯಾಕೆಂದ್ರೆ, ಇದು ನಮ್ಮ ದೇಶದಲ್ಲಿ ಕಾನೂನು ಬಾಹಿರ. 1960 ರಲ್ಲಿ ಈ ಬಗ್ಗೆ ಒಂದು ಕಾನೂನನ್ನು ರಚಿಸಲಾಯಿತು. ಅದರ ಅಡಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿದೆ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ವಿಷಯಗಳಿಗೆ ಅದು ಮಾತ್ರ ಅಧಿಕಾರ ಹೊಂದಿದೆ. ನೆಲದಡಿಯಲ್ಲಿ ಅಗೆಯುವಾಗ ಯಾವುದೇ ನಿಧಿ ಅಥವಾ ಚಿನ್ನ ಕಂಡುಬಂದರೆ ಅದು ಸರ್ಕಾರಕ್ಕೆ ಸೇರಿದೆ. ಅದು ಯಾರ ಜಮೀನಾದರೂ ಸರಿ.

ಮನೆ ಅಥವಾ ಜಮೀನಿನಲ್ಲಿ ನಿಧಿ ಸಿಕ್ರೆ ಯಾರ ಪಾಲಾಗುತ್ತೆ!; ಇದರ ಮೇಲೆ ಹಕ್ಕು ಯಾರಿಗಿದೆ?; ಸರ್ಕಾರದ ಪಾತ್ರ ಏನು?: ಇಲ್ಲಿದೆ ಕಂಪ್ಲೀಟ್​ ಮಾಹಿತಿ | Treasure

ನಿಧಿ ಕಂಡು ಬಂದರೆ ಏನು ಮಾಡಬೇಕು?

ನಿಮ್ಮ ಮನೆಯನ್ನು ಅಗೆಯುವಾಗ ಯಾವುದೇ ನಿಧಿ ಅಥವಾ ಚಿನ್ನ ಕಂಡುಬಂದರೆ, ಅಂತಹ ಸಂದರ್ಭದಲ್ಲಿ 1971 ರಲ್ಲಿ ಮಾಡಿದ ನಿಧಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಕಾಯಿದೆಯ ಪ್ರಕಾರ, ನಿಧಿಯನ್ನು ಕಂಡುಕೊಂಡ ವ್ಯಕ್ತಿಯು ಅದರ ಬಗ್ಗೆ ಪೊಲೀಸರಿಗೆ ಅಥವಾ ಆಡಳಿತಕ್ಕೆ ತಿಳಿಸಬೇಕು. ನಂತರ ಆಡಳಿತವು ಅದನ್ನು ವಶಪಡಿಸಿಕೊಂಡು ಸರ್ಕಾರಿ ಖಜಾನೆಯಲ್ಲಿ ಜಮಾ ಮಾಡುತ್ತದೆ.

ಮನೆ ಅಥವಾ ಜಮೀನಿನಲ್ಲಿ ನಿಧಿ ಸಿಕ್ರೆ ಯಾರ ಪಾಲಾಗುತ್ತೆ!; ಇದರ ಮೇಲೆ ಹಕ್ಕು ಯಾರಿಗಿದೆ?; ಸರ್ಕಾರದ ಪಾತ್ರ ಏನು?: ಇಲ್ಲಿದೆ ಕಂಪ್ಲೀಟ್​ ಮಾಹಿತಿ | Treasure

ಯಾವುದೇ ವಸ್ತು ಪುರಾತತ್ತ್ವ ಶಾಸ್ತ್ರದ ಮಹತ್ವದ್ದಾಗಿದ್ದರೆ ಅದನ್ನು ಅಧ್ಯಯನಕ್ಕಾಗಿ ಪುರಾತತ್ವ ಇಲಾಖೆಗೆ ಕಳುಹಿಸಲಾಗುತ್ತದೆ. ಆದಾಗ್ಯೂ, ಒಬ್ಬ ವ್ಯಕ್ತಿಯು ಈ ಚಿನ್ನ ಅಥವಾ ನಿಧಿ ತನ್ನದು ಎಂದು ಹೇಳಿಕೊಂಡರೆ, ಆ ವಿಷಯವು ನ್ಯಾಯಾಲಯದಲ್ಲಿ ಇತ್ಯರ್ಥವಾಗುತ್ತದೆ. ಆ ವ್ಯಕ್ತಿಯು ನಿಧಿ ತನ್ನದು ಎಂದು ಸಾಬೀತುಪಡಿಸಿದರೆ ಅದನ್ನು ಅವನಿಗೆ ಹಸ್ತಾಂತರಿಸಬಹುದು. ಅಲ್ಲದೆ, ಸುಳ್ಳು ಹೇಳುವವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.(ಏಜೆನ್ಸೀಸ್​)

ಈ ದೇಶದಲ್ಲಿ ಭಿಕ್ಷುಕರು ಭಿಕ್ಷೆ ಬೇಡಲು ಸರ್ಕಾರದ ಲೈಸನ್ಸ್​ ಪಡೆಯಲೇಬೇಕು!; ಎಲ್ಲಿ ಅಂತೀರಾ?: ಇಲ್ಲಿದೆ ಮಾಹಿತಿ | Beggars

ಫೋನ್​ ರಿಸೀವ್​ ಮಾಡಿದ ಕೂಡಲೇ ‘ಹಲೋ’ ಅನ್ನೋದೇಕೆ?; ಈ ಪದ ಹುಟ್ಟಿಕೊಂಡಿದ್ದೇಗೆ ಗೊತ್ತೆ! | Hello

Share This Article

ನಿಮ್ಮ ಸಂಪತ್ತು ವೃದ್ಧಿಯಾಗಬೇಕಾ? ಅಕ್ಷಯ ತೃತೀಯದಂದು ಹೀಗೆ ಮಾಡಬೇಕು… Akshaya Tritiya

Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಹಿಂದೂಗಳು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಈ ಅಕ್ಷಯ ತೃತೀಯ…

ರಾತ್ರಿ ಏನೂ ತಿನ್ನದೆ ಮಲಗುತ್ತಿದ್ದೀರಾ? ಆದರೆ ನೀವು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದುಕೊಳ್ಳಬೇಕು…Health Tips

Health Tips: ಇತ್ತೀಚೆಗೆ, ಅನೇಕ ಜನರು ಸಮಯದ ಅಭಾವ, ಹಸಿವಿನ ಅಭಾವ, ಉದ್ವೇಗ ಸೇರಿದಂತೆ ವಿವಿಧ…

ದಿನಾ ಒಂದು ಮೊಟ್ಟೆ ತಿನ್ನಿರಿ; ದೇಹದ ಸಕಾರಾತ್ಮಕ ಬದಲಾಣೆಗಳನ್ನು ಒಮ್ಮೆ ನೋಡಿ!: | Positive Changes

Positive Changes : ಮೊಟ್ಟೆಗಳನ್ನು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಜೀವಸತ್ವಗಳು ಮತ್ತು…