ಬೆಂಗಳೂರು: ಉಡುಪಿ ಹಾಸ್ಟೆಲ್ನ ಟಾಯ್ಲೆಟ್ನಲ್ಲಿ ಕ್ಯಾಮರಾ ಇಟ್ಟ ಪ್ರಕರಣ ಗಂಭೀರ ಆಗತೊಡಗಿದ್ದು, ಇದಕ್ಕೆ ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಪ್ರವೇಶ ಮಾಡಿದೆ. ಹೀಗಾಗಿ ಈ ಪ್ರಕರಣ ಈಗ ಮತ್ತಷ್ಟು ಗಮನ ಸೆಳೆಯಲಾರಂಭಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಈ ಪ್ರಕರಣದಲ್ಲಿ ಗಮನ ಹರಿಸಿರುವ ಕುರಿತು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ವಾಶ್ರೂಮ್ನಲ್ಲಿ ಸಹಪಾಠಿ ಹುಡುಗಿಯರ ವಿಡಿಯೋ ಮಾಡಲು ಹುಡುಗಿಯರೇ ಕ್ಯಾಮರಾ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯತ್ತ ಹೊರಟಿದ್ದೇನೆ. ಮಕ್ಕಳು ಇಂಥ ಅತಿರೇಕದಲ್ಲಿ ತೊಡಗಿಕೊಳ್ಳುವುದು ಅತ್ಯಂತ ದುಃಖಕರ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ನಾನು ಈ ಪ್ರಕರಣದತ್ತ ಗಮನಹರಿಸಿದ್ದು, ವಿದ್ಯಾರ್ಥಿನಿಯರ ಜತೆ ಮಾತುಕತೆ ನಡೆಸಿ, ಪೊಲೀಸರನ್ನು ಭೇಟಿಯಾಗಿ, ಕಾಲೇಜಿಗೂ ಹೋಗಿಬರುತ್ತೇನೆ ಎಂದಿರುವ ಅವರು, ಮಹಿಳೆಯ ಘನತೆಯ ವಿಚಾರದಲ್ಲಿ ಯಾರೂ ಆಟ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.
Heading to Udupi to look into the issue where girls were filmed in a washroom by their fellow girl college mates. It is extremely saddening to see children indulging in such activities. As a @NCWIndia member, I will be looking into the matter, speaking with the students, meeting…
— KhushbuSundar (@khushsundar) July 26, 2023
ಪಾಕ್ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!