More

    ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ!

    ಬೆಂಗಳೂರು: ಇದಕ್ಕೆ ಕಾರಣ ಗ್ರಹಚಾರವೋ, ಬಿಬಿಎಂಪಿಯೋ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಆದರೆ ಈ ಘಟನೆ ವ್ಯಕ್ತಿಯೊಬ್ಬ ಜೀವನ್ಮರಣ ಹೋರಾಟ ನಡೆಸುವಂತೆ ಮಾಡಿರುವುದಂತೂ ನಿಜ. ಬೆಂಗಳೂರಿನ ಜೆ.ಪಿ.ನಗರದಲ್ಲಿ ಈ ಪ ನಡೆದಿದೆ.

    ದ್ವಿಚಕ್ರ ವಾಹನ ಸವಾರ ಶ್ರೀಧರ್ ಈ ಪ್ರಕರಣದಲ್ಲಿ ಗಾಯಗೊಂಡವರು. ಇವರು ಇಂದು ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಜೆ.ಪಿ.ನಗರ 21ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆ ವಾಹನದ ಮೇಲೇ ಬಿದ್ದಿದೆ. ಪರಿಣಾಮವಾಗಿ ಶ್ರೀಧರ್ ಕಾಲು ಮುರಿದು ಹೋಗಿದ್ದು, ತಲೆಗೂ ಗಂಭೀರ ಗಾಯವಾಗಿದೆ. ಬೈಕ್ ಕೂಡ ಜಖಂಗೊಂಡಿದೆ.

    ಇದನ್ನೂ ಓದಿ: ಪೂಜೆಯಿಂದಾಗಿ ಪ್ರಾಣಾಪಾಯದಿಂದ ಪಾರಾದ ಉದ್ಯಮಿ!; ಆಗಿದ್ದೇನು?​

    ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುವಿನ ಸಂಬಂಧಿ ಬಿಬಿಎಂಪಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಗಳ ನಿರ್ವಹಣೆಯನ್ನು ಪಾಲಿಕೆ ಸರಿಯಾಗಿ ನಿಭಾಯಿಸದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ನೆರವಾಗುವಂತೆ ಸರ್ಕಾರದ ಗಮನ ಸೆಳೆದಿದ್ದಾರೆ.

    22 ವರ್ಷ ತನ್ನೊಳಗಿದ್ದ ಹೃದಯವನ್ನು 16 ವರ್ಷಗಳ ಬಳಿಕ ಮ್ಯೂಸಿಯಮ್​ನಲ್ಲಿ ಕಣ್ಣೆದುರೇ ಕಂಡಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts