blank

ಮೂವರು ಆಟಗಾರರು, ಫಿಸಿಯೋಗೆ ಆಜೀವ ನಿಷೇಧ ಹೇರಿದ ಪಾಕ್​ ಹಾಕಿ ಫೆಡರೇಶನ್‌; ಕಾರಣ ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ

Pakistan Hockey Team

ನವದೆಹಲಿ: ಈಗಾಗಲೇ ಆರ್ಥಿಕ ಸಂಕಷ್ಟ, ಭಯೋತ್ಪಾದನೆ ಹಾಗೂ ಕ್ರೀಡೆಯಲ್ಲಿನ ವೈಫಲ್ಯದ ವಿಚಾರವಾಗಿ ಪಾಕಿಸ್ತಾನ ಸುದ್ದಿಯಲ್ಲಿದ್ದು, ವಿಶ್ವದ ಮುಂದೆ ಒಂದಿಲ್ಲೊಂದು ಕಾರಣಕ್ಕೆ ಬೆತ್ತಲಾಗುತ್ತಿದೆ. ಇದೀಗ ಪಾಕಿಸ್ತಾನದ ಮೂವರು ಹಾಕಿ ಆಟಗಾರರಿಗೆ ಅಜೀವ ನಿಷೇಧ ಹೇರಿ ಆದೇಶ ಹೊರಡಿಸಿದೆ.

blank

ಈ ಮೂವರು ಆಟಗಾರರು ಯಾವುದೇ ಮ್ಯಾಚ್ ಫಿಕ್ಸಿಂಗ್‌ ಆರೋಪವನ್ನಾಗಲಿ ಅಥವಾ ಬೇರೆ ಯಾವುದೇ ಆರೋಪದಲ್ಲಿ ಸಿಕ್ಕಿಬಿದ್ದು, ಆಜೀವ ನಿಷೇಧಕ್ಕೊಳಗಾಗಿಲ್ಲ. ಪಾಕಿಸ್ತಾನದ ಆರ್ಥಿಕ ದುಸ್ಥಿತಿಯಿಂದ ಬೇಸತ್ತು ಈ ಮೂವರು ಆಟಗಾರರು ಹಾಕಿ ಫೆಡರೇಶನ್‌ಗೆ ತಿಳಿಯದಂತೆ ಯುರೋಪಿಯನ್ ದೇಶಕ್ಕೆ ಪರಾರಿಯಾಗಲು ಯತ್ನಿಸಿದ ಮೂವರು ಪಾಕಿಸ್ತಾನಿ ಹಾಕಿ ಆಟಗಾರರು ಮತ್ತು ಫಿಸಿಯೋಥೆರಪಿಸ್ಟ್‌ ಯತ್ನಿಸಿದ್ದು, ಈ ಕಾರಣಕ್ಕಾಗಿಯೇ ಅವರನ್ನು ಬ್ಯಾನ್​ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಹಾಕಿ ಫೆಡರೇಷನ್​ ಕಾರ್ಯದರ್ಶಿ ರಾಣಾ ಮುಜಾಹಿದ್, ಮೂವರು ಆಟಗಾರರಾದ ಮುರ್ತಾಜಾ ಯಾಕೂಬ್, ಇಹ್ತೇಶಾಮ್ ಅಸ್ಲಾಮ್, ಅಬ್ದುರ್ ರೆಹಮಾನ್ ಮತ್ತು ಫಿಸಿಯೋಥೆರಪಿಸ್ಟ್‌ ವಕಾಸ್ ಕಳೆದ ತಿಂಗಳು ನೆದರ್ಲ್ಯಾಂಡ್​ ಹಾಗೂ ಪೋಲೆಂಡ್​ಗೆ ನೇಷನ್ಸ್​ ಕಪ್​ ಆಡಲು ತೆರಳಿದ್ದರು. ಪ್ರವಾಸ ಮುಗಿದ ಕೂಡಲೇ ಇಡೀ ತಂಡ ದೇಶಕ್ಕೆ ವಾಪಸ್ಸಾಗಿತ್ತು. ಆ ಬಳಿಕ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಮಂಡಳಿ ತರಬೇತಿ ಶಿಬಿರವನ್ನು ಘೋಷಿಸಿದಾಗ, ಈ ಮೂವರೂ ಆಟಗಾರರು ಸಮಸ್ಯೆಗಳಿಂದ ಶಿಬಿರಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ನಮಗೆ ಹೇಳಿದ್ದರು.

ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್​; ಎರಡನೇ ಬಾರಿ ವಿಚಾರಣೆ ಬಳಿಕ ನಟ ಚಿಕ್ಕಣ್ಣ ಹೇಳಿದ್ದಿಷ್ಟು

ಆ ಬಳಿಕ ಈ ನಾಲ್ವರಿಗೆ ನೇಷನ್ಸ್​ ಕಪ್​ ಸಮಯದಲ್ಲಿ ನೀಡಲಾಗಿದ್ದ ವೀಸಾವನ್ನು ಬಳಸಿ ನೆದರ್ಲ್ಯಾಂಡ್​ಗೆ ತೆರಳಿದ್ದು, ಅಲ್ಲಿನ ಸರ್ಕಾರದಿಂದ ಆಶ್ರಯ ಪಡೆದಿದ್ದಾರೆ. ಆಟಗಾರರ ಈ ನಡೆ ಪಾಕಿಸ್ತಾನ ಹಾಕಿಗೆ ನಿರಾಶಾದಾಯಕವಾಗಿದ್ದು, ಇವರ ಈ ನಡುವಳಿಕೆಯಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಯುರೋಪಿಯನ್ ರಾಷ್ಟ್ರಗಳಿಗೆ ವೀಸಾಗಾಗಿ ಅರ್ಜಿ ಸಲ್ಲಿಸಲು ಕಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ಇವರುಗಳನ್ನು ಬ್ಯಾನ್​ ಮಾಡಲಾಗಿದೆ ಎಂದು ರಾಣ ಮುಜಾಹಿದ್​ ತಿಳಿಸಿದ್ದಾರೆ.

blank

ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಲುಗಿರುವ ಪಾಕಿಸ್ತಾನದಲ್ಲಿ ಕ್ರೀಡಾಪಟುಗಳಿಗೆ ಸರಿಯಾದ ವೇತನವನ್ನು ನೀಡಲು ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಟಗಾರರು ತಮ್ಮ ಪ್ರಯಾಣ ಭತ್ಯೆ ಮತ್ತು ವೇತನವನ್ನು ಸರಿಯಾದ ಸಮಯಕ್ಕೆ ಪಡೆಯಲಾಗುತ್ತಿಲ್ಲ. ಹೀಗಾಗಿ ಆಟಗಾರರು ದೇಶವನನ್ಉ ತೊರೆಯುತ್ತಿದ್ದು, ವಿದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ವಿಚಾರವಾಗಿ ಪಾಕ್​ ಜಗತ್ತಿನ ಮುಂದೆ ಪದೇ ಪದೇ ಬೆತ್ತಲಾಗುತ್ತಿದೆ.

Share This Article

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…

ಪಿರಿಯಡ್ಸ್​​ ಸಮಯದಲ್ಲಿ ನಿದ್ರಾಹೀನತೆ ಅನುಭವಿಸುವುದು ಏಕೆ?; ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಇದು ಸಾಮಾನ್ಯವಾಗಿ ಮಹಿಳೆಯ ಋತುಚಕ್ರದ ಮೊದಲು ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್,…