ಆಫ್ರಿಕಾದಲ್ಲಿ ಡಾ.ರಾಜಕುಮಾರ್ ಕುರಿತ ನಾದಯೋಗಿ ಕೃತಿಯ ಮುಖಪುಟ ಬಿಡುಗಡೆ

blank

ಆಫ್ರಿಕಾ : ಪೂರ್ವ ಆಫ್ರಿಕಾದ ದರ್ ಎಸ್ ಸಲಾಂನ ತಾಂಜೇನಿಯದಲ್ಲಿ ನಡೆದ ಕಾವೇರಿ ಕನ್ನಡ ಸಂಘದ ಬೆಳ್ಳಿಹಬ್ಬ ಮಹೋತ್ಸವದಲ್ಲಿ ವರನಟ ಡಾ.ರಾಜಕುಮಾರ್ ಬಗ್ಗೆ ಪತ್ರಕರ್ತ ಮಂಜುನಾಥ್ ಚವಾಣ್ ಬರೆದಿರುವ ನಾದಯೋಗಿ ಕೃತಿಯ ಮುಖಪುಟವು ಇತ್ತೀಚೆಗೆ ಬಿಡುಗಡೆಯಾಯಿತು.

ನಾದಯೋಗಿ ಕೃತಿಯ ಮುಖಪುಟವನ್ನು ಕಾವೇರಿ ಕನ್ನಡ ಸಂಘದ ಅಧ್ಯಕ್ಷ ವಿಠ್ಠಲ ಮಲಗೊಂಡ ಬಿಡುಗಡೆ ಮಾಡಿದರು. ಭಾರತೀಯ ಹೈ ಕಮಿಷನ್ ದ್ವಿತೀಯ ಕಾರ್ಯದರ್ಶಿ ಡಾ.ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

ಚವಾಣ್ ಅವರು ಡಾ.ರಾಜ್ ಕುಟುಂಬದ ಆಪ್ತ ವಲಯದವರಾಗಿದ್ದು ತಮ್ಮ ಅನುಭವಗಳನ್ನು ಈ ಪುಸ್ತಕದ ಮೂಲಕ ಅನಾವರಣಗೊಳಿಸಿದ್ದಾರೆ. ಡಾ.ರಾಜ್ ಅಪ್ರತಿಮ ನಟ, ಗಾಯಕ ಜೊತೆಗೆ ಅಪೂರ್ವ ಸಂಗೀತಜ್ಞ ಕೂಡ. ರಂಗ ಭೂಮಿಯಲ್ಲಿ ತಾವು ಕಲಿತ ಕರ್ನಾಟಿಕ್ ಸಂಗೀತದ ಜೊತೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಕಾರಗಳನ್ನು ಕಲಿತು ಕಲಾ ಪ್ರೇಮಿಗಳ ಮನ ಮಂದಿರದಲ್ಲಿ ನೆಲೆ ಮಾಡಿದ ನಾದ ಯೋಗಿ. ಕುಂಡಲಿನಿ ಯೋಗದ ಅತೀ ಉತ್ತಮ ಸಾಧಕರಾದ ರಾಜ್ ಅವರ ವ್ಯಕ್ತಿತ್ವ ವರ್ಣನಾತೀತ.

ರಾಜಕುಮಾರ್ ಸಂಗೀತ ಯಾನದ ಕುರಿತಾದ ಸಂದರ್ಶನ , ಒಡನಾಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದ್ದು, ಇದೊಂದು ವಿಭಿನ್ನ ಪ್ರಯೋಗ ಹಾಗೇ ಸಂಗ್ರಹ ಯೋಗ್ಯ ಕೃತಿಯಾಗಿದೆ.

ರಂಗಸಂಸ್ಕೃತಿ ರಾಜ್ಯೋತ್ಸವ ; ಜನಮನ ಸೆಳೆದ ‘ಭಾಗವತರ ನಾಟಕ ಮಂಡಳಿ’

Share This Article

ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind

health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…

ವಾರದಲ್ಲಿ ಎರಡು ಬಾರಿ ಈ ಜ್ಯೂಸ್​ ಕುಡಿದರೆ ಸಾಕು ನಿಮ್ಮ ಕಿಡ್ನಿಗಳು ಫುಲ್​ ಕ್ಲೀನ್​ ಆಗಿಬಿಡುತ್ತವೆ! Kidney Health

Kidney Health : ಮೂತ್ರಪಿಂಡಗಳನ್ನು ಮಾನವ ದೇಹದ ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಈ ಮೂತ್ರಪಿಂಡಗಳು ರಕ್ತವನ್ನು…

ನಿಮ್ಮ ಸಿಬಿಲ್​ ಸ್ಕೋರ್​ ಕುಸಿದಿದ್ಯಾ? ರಾಕೆಟ್​ನಂತೆ ಜಿಗಿಯಲು ಈ​ ಸಿಂಪಲ್​ ಟಿಪ್ ಅನುಸರಿಸಿ​ | CIBIL Score

Cibil Score: ಇತ್ತೀಚಿನ ದಿನಗಳಲ್ಲಿ ಯಾರಿಗೆ ಹಣದ ಅವಶ್ಯಕತೆ ಇಲ್ಲ ಹೇಳಿ? ಬಡವನಿಂದ ಹಿಡಿದು ಶ್ರೀಮಂತರವರೆಗೂ…