ಯುವಜನತೆಗೆ ಪ್ರೇರಕ ಶಕ್ತಿ

blank

ಹೊಸನಗರ: ಸ್ವಾಮಿ ವಿವೇಕಾನಂದರ ಸಂದೇಶವು ದೇಶದ ಯುವಜನತೆಗೆ ಪ್ರೇರಕಶಕ್ತಿ ಎಂದು ಬಿಜೆಪಿ ಮುಖಂಡ ಎನ್.ಆರ್.ದೇವಾನಂದ್ ಹೇಳಿದರು.

ವಿವೇಕಾನಂದರ ಜಯಂತಿ ಅಂಗವಾಗಿ ಹೊಸನಗರ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ವಿವೇಕ ನಡಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕಾಗೋ ಸಮಾವೇಶದಲ್ಲಿ ವಿವೇಕಾನಂದರು ಭಾರತದ ಆಧ್ಯಾತ್ಮಿಕ, ಸಂಸ್ಕೃತಿ ಮತ್ತು ಇತಿಹಾಸ ಕುರಿತು ಮಾಡಿದ ಪ್ರಸಿದ್ಧ ಭಾಷಣ ವಿಶ್ವದ ಗಮನ ಸೆಳೆಯಿತು. ಅವರ ವ್ಯಕ್ತಿತ್ವ, ವಿಜ್ಞಾನ ಮತ್ತು ವೇದಾಂತದಲ್ಲಿ ಅಪಾರ ಜ್ಞಾನ, ಶಾಂತಿ ಮತ್ತು ಮಾನವೀಯತೆ ಮೌಲ್ಯಗಳ ಗ್ರಂಥವಾಗಿದ್ದರು ಎಂದು ತಿಳಿಸಿದರು.

ಮಾವಿನಕೊಪ್ಪ ಗಂಗಾಧರೇಶ್ವರ ದೇವಸ್ಥಾನದಿಂದ ಆರಂಭಗೊಂಡ ವಿವೇಕ ನಡಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಹೊಸನಗರ ಮಂಡಲದ ಮಲ್ಲಿಕಾರ್ಜುನ್, ಶ್ರೀಧರ್ ಉಡುಪ, ಹಾಲ್ಗದ್ದೆ ಉಮೇಶ್, ಸುಧಾಕರ್, ಶ್ರೀಪತಿ ರಾವ್, ವಿಶ್ವನಾಥ್ ಗಂದರಳ್ಳಿ, ಅಂಕಿತ್ ಮಕೇರಿ, ಅಭಿಲಾಷ್ ಚಿಕ್ಕಮಣತಿ, ಗಗನ್, ಮಹೇಂದರ್, ಕಾರ್ಯಕರ್ತರಿದ್ದರು.

ವಿವೇಕಾನಂದರ ಸಂದೇಶ ಪರಿಪಾಲನೆ ಮಾಡಿ

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…