ಸೊರಬ: ಉಳವಿ ಹೋಬಳಿ ಮಳಲಗದ್ದೆ ಕೃಷಿ ಸಹಕಾರ ಪತ್ತಿನ ಸಂಘದ ಅಧ್ಯಕ್ಷ, ತಾಲೂಕಿನ ಸಹಕಾರ ಸಂಘಗಳ ಪ್ರತಿನಿಧಿ ಅಶೋಕ ಹೆಗಡೆ ಅವರು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಳಲಗದ್ದೆ ಸಂಘದ ಸಾಮಾನ್ಯ ಸಭೆಯಲ್ಲಿ ಸನ್ಮಾನಿಸಲಾಯಿತು.
ಅಶೋಕ ಹೆಗಡೆ ಮಾತನಾಡಿ, 20 ವರ್ಷಗಳಿಂದ ಸಹಕಾರ ಸಂಘದಲ್ಲಿ ರೈತರ ಪರ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ಗೆ ತಾಲೂಕಿನಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಸಂಘವು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸ್ವಂತ ಕಟ್ಟಡ ನಿರ್ಮಿಸಲು ನಿವೇಶನವನ್ನು ಸಂಘಕ್ಕೆ ಖಾತೆ ಮಾಡಿಸಲಾಗುವುದು. ಸದಸ್ಯರ ಸಹಕಾರ ಪಡೆದು ಶೀಘ್ರವೇ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ರೈತರಿಗೆ ಅನುಕೂಲವಾಗುವಂತೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸಹಕಾರ ಸಂಘದಿಂದ ಪೂರೈಸಲು ಸದಸ್ಯರೊಂದಿಗೆ ಚರ್ಚಿಸಲಾಗಿದೆ. ಸಕಾಲಕ್ಕೆ ಸರಿಯಾಗಿ ರೈತರಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದರು.
ಉಪಾಧ್ಯಕ್ಷ ಭೈರಪ್ಪ ಮೈಸಾವಿ, ನಿರ್ದೇಶಕರಾದ ನಾರಾಯಣ, ಮೋಹನ್, ತಾರಕೇಶ್ವರ, ಭಾಸ್ಕರ್, ಪುಟ್ಟಪ್ಪ, ಪ್ರಕಾಶ್, ನಾಗರತ್ನಮ್ಮ, ಸತ್ಯಪ್ಪ, ನಾಗರಾಜ್, ಕೆ.ಜಗದೀಶ್, ಸತ್ಯನಾರಾಯಣ, ಕ್ಷೇತ್ರಾಧಿಕಾರಿ ಶರಣಪ್ಪ, ಸಿಇಒ ಎಚ್.ಎಂ.ವಿನಯ್, ಶ್ರೀಧರ್ ಇತರರಿದ್ದರು.