ಬೆಂಗಳೂರು: ದೇವಸ್ಥಾನ ನಿರ್ಮಾಣಕ್ಕೆ ನಟ ಯಶ್ ದೇಣಿಗೆ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳು ನಟ ಡೇನಿಯಲ್ ಬಾಲಾಜಿ ಅವರು ದಿಗ್ವಿಜಯ ನ್ಯೂಸ್ಗೆ ಮೊದಲ ಪ್ರತಿಕ್ರಿಯೆ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಯಶ್ ಅವರಿಗೆ ನಾನು ಕೃತಜ್ಙತೆ ಸಲ್ಲಿಸುತ್ತೇನೆ. ದೇಣಿಗೆ ವಿಚಾರವನ್ನು ಪದೇ ಪದೆ ಹೇಳುವುದು ಬೇಡ. ಬಂಧುಗಳಂತೆ ಅಮ್ಮನ್ ದೇವಾಲಯದ ನಿರ್ಮಾಣಕ್ಕೆ ಯಶ್ ಸಹಕರಿಸಿದರು ಎನ್ನುವ ಮೂಲಕ ರಾಕಿಭಾಯ್ ಸಹಾಯವನ್ನು ಬಾಲಜಿ ಅವರು ನೆನೆದಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನ ಭೂಕಂಪನ ಎಫೆಕ್ಟ್! ಉತ್ತರ ಭಾರತದಲ್ಲಿ 2 ನಿಮಿಷ ನಡುಗಿದ ಭೂಮಿ, ಜನರಲ್ಲಿ ಆತಂಕ
4 ವರ್ಷಗಳ ಹಿಂದೆ ಯಶ್ ಅವರು ನನಗೆ ಕರೆ ಮಾಡಿದರು. ಸಿನಿಮಾವೊಂದರಲ್ಲಿ ನಟಿಸಲು ಆಫರ್ ಮಾಡಿದರು. ಒಂದು ಸಣ್ಣ ಕೆಲಸ ಇದೆ. 20 ದಿನಗಳು ಆಗುತ್ತದೆ ಎಂದು ಹೇಳಿದ್ದೆ. ಬಳಿಕ ಏನು ಕೆಲಸ ಎಂದು ಕೇಳಿದರು. ನಾನು ತಮಿಳುನಾಡಿನಲ್ಲಿ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದೇನೆ. ಅದು ಮುಗಿಯುವವರೆಗೂ ನಾನು ಬರಲು ಆಗುವುದಿಲ್ಲ ಎಂದಿದ್ದೆ. ಬಳಿಕ ಯಶ್ ಅವರು ನನಗೆ ಶುಭ ಕೋರಿದರು. ಇದಾದ ಕೆಲವೇ ಕ್ಷಣಗಳಲ್ಲಿ ನನ್ನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಯಿತು. ಇನ್ನು ಸಿನಿಮಾ ಪ್ರೊಡಕ್ಷನ್ ಬಗ್ಗೆಯೇ ತೀರ್ಮಾನವಾಗಿಲ್ಲ ಅಷ್ಟರಲ್ಲೇ ನೀವು ನನಗೆ ಮುಂಗಡ ಪಾವತಿಸಿದಿರಲ್ಲ ಎಂದು ಕೇಳಿದೆ. ಅದಕ್ಕೆ ಯಶ್, ಈ ಹಣ ಸಿನಿಮಾಗಾಗಿ ಅಲ್ಲ, ನಿಮ್ಮ ದೇವಸ್ಥಾನಕ್ಕೆ ನನ್ನ ದೇಣಿಗೆ ಎಂದು ಹೇಳಿದರು ಅಂತಾ ಇತ್ತೀಚೆಗೆ ನಟಡೆದ ಸಂದರ್ಶನವೊಂದರಲ್ಲಿ ಡೇನಿಯಲ್ ಬಾಲಾಜಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಯುಗಾದಿ ರಾಶಿಫಲ; ಯಾರಿಗೆ ಏನು?: ಶ್ರೀ ಶೋಭಾಕೃತ ಸಂವತ್ಸರದ ವರ್ಷ ಭವಿಷ್ಯ
ಇದೀಗ ದೇವಸ್ಥಾನ ನಿರ್ಮಾಣ ಪೂರರ್ತಿಯಾಗಿದ್ದು, ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಖುಷಿಯನ್ನು ಸ್ಥಳಿಯ ಮಾಧ್ಯಮದ ಮುಂದೆ ಹಂಚಿಕೊಂಡಿದ್ದು, ಇದೇ ಸಂದರ್ಭದಲ್ಲಿ ಯಶ್ ಅವರ ಸಹಾಯವನ್ನು ನೆನೆದಿದ್ದಾರೆ. ಇದೀಗ ದಿಗ್ವಿಜಯ ರಿಪೋರ್ಟರ್ ಜತೆ ನೀವು ಕೇಳಿದ್ದು ಓದಿದ್ದೆಲ್ಲಾ ಸತ್ಯ ಎಂದು ಯಶ್ ಸಹಾಯಕ್ಕೆ ಕೃತಜ್ಙತೆ ಸಲ್ಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಧನುಷ್ ಜತೆ ಮೀನಾ ಮದುವೆಯಂತೆ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ತಮಿಳು ನಟ…