ಮಂಗಳೂರು: ದೆಹಲಿಯಲ್ಲಿರುವ ತಮ್ಮ ರಾಜ ಪರಿವಾರಕ್ಕೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಕಾಂಗ್ರೆಸ್ ಬಯಸುತ್ತಿದೆ. ಶೇ. 85 ರಷ್ಟು ಕಮಿಷನ್ ತಿನ್ನುವ ಕಾಂಗ್ರೆಸ್ ರಾಜ್ಯವನ್ನು ಹಿಂದಕ್ಕೆ ದೂಡುತ್ತದೆ. ಇದಕ್ಕಾಗಿ ಕಾಂಗ್ರೆಸ್ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೂಲ್ಕಿಯ ಕೊಲ್ನಾಡುವಿನಲ್ಲಿ ನಡೆದ ಬಿಜೆಪಿ ಬಹಿರಂಗ ಸಭೆಯಲ್ಲಿ ಭಾರತ್ ಮಾತಾ ಕೀ ಜೈ, ಬಜರಂಗಬಲಿ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ಮೋದಿ ಮಾತು ಆರಂಭಿಸಿದರು.
ಇದನ್ನೂ ಓದಿ: ರಾಮ, ಹನುಮಂತನ ಮೇಲೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಕೋಪ? ಪ್ರತಾಪ್ ಸಿಂಹ ಪ್ರಶ್ನೆ
ಮುಂದಿನ ಗುರಿಗಳು
ಪರಶುರಾಮ ಕ್ಷೇತ್ರದ ನನ್ನ ಪ್ರೀತಿಯ ತುಳುವಮ್ಮನ ಮಕ್ಕಳಿಗೆ ನಮಸ್ಕಾರಗಳು ಎಂದು ತುಳುವಿನಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ನಮ್ಮದು. ಅದರೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಮೇ. 10ರಂದು ಮತದಾನದ ದಿನವಾಗಿದೆ. ಕರ್ನಾಟಕವನ್ನು ನಂ.1 ರಾಜ್ಯ ಮಾಡೋದು ಬಿಜೆಪಿಯ ಸಂಕಲ್ಪವಾಗಿದೆ. ಕರ್ನಾಟಕದಲ್ಲಿ ಆಧುನಿಕ ಮೂಲ ಸೌಕರ್ಯ ಬಿಜೆಪಿಯ ಸಂಕಲ್ಪವಾಗಿದೆ. ರಾಜ್ಯವನ್ನು ಮ್ಯಾನುಫ್ಯಾಕ್ಚರಿಂಗ್ ಸೂಪರ್ ಪವರ್ ಮಾಡುವುದು ಬಿಜೆಪಿಯ ಗುರಿಯಾಗಿದೆ. ಇವಿಷ್ಟು ನಮ್ಮ ಮುಂದಿನ ಗುರಿಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ
ನಾವು ಹೀಗೆ ಹೇಳುತ್ತಿರುವಾಗ ಕಾಂಗ್ರೆಸ್ ಏನು ಹೇಳುತ್ತಿದೆ? ನಮ್ಮ ನಾಯಕರೊಬ್ಬರು ನಿವೃತ್ತರಾಗುತ್ತಾರೆ. ಹೀಗಾಗಿ ಅವರಿಗೆ ಒಂದು ಮತ ಕೊಡಿ ಎಂದು ಕೇಳುತ್ತಿದೆ. ಕಾಂಗ್ರೆಸ್ ಏನು ಮಾಡಲಿ ಕರ್ನಾಟಕದಲ್ಲಿ ಜನರ ಪ್ರೀತಿ ಪಡೆಯುತ್ತಿದ್ದೇನೆ. ರೈತರು, ಮಹಿಳೆಯರು ಹಾಗೂ ಮಕ್ಕಳ ಉತ್ಸಾಹ ನೋಡುತ್ತಿದ್ದೇನೆ. ನನಗೆ ಒಂದೇ ವಿಶ್ವಾಸ ಹಾಗೂ ಸಂದೇಶ ಕೇಳಿಬರುತ್ತಿದೆ. ಅದೇನೆಂದರೆ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪುನರುಚ್ಛರಿಸಿದರು.
ನಂ. 1 ಎಟಿಎಂ ಮಾಡಲು ಬಯಸುತ್ತಿದೆ
ದೇಶದ 140 ಕೋಟಿ ಜನರೇ ನನ್ನ ರಿಮೋಟ್ ಕಂಟ್ರೋಲ್. ಕರ್ನಾಟಕ ಕೃಷಿ ವಿಕಾಸದಲ್ಲಿ ನಂ. 1 ಆಗಬೇಕು. ಶಿಕ್ಷಣದಲ್ಲಿ ನಂ.1 ಆಗಿಸುವುದು ಕರ್ನಾಟಕ ಮೀನುಗಾರಿಕೆಯಲ್ಲಿ ನಂ. 1 ಆಗುವುದು ನಮ್ಮ ಲಕ್ಷ್ಯವಾಗಿದೆ. ಆದರೆ, ಕಾಂಗ್ರೆಸ್ ಏನು ಬಯಸುತ್ತಿದೆ ಅಂದರೆ, ದೆಹಲಿಯಲ್ಲಿ ಅವರ ರಾಜ ಪರಿವಾರ ಇದೆಯಲ್ಲಾ? ಅದಕ್ಕೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಬಯಸುತ್ತಿದೆ. ಶೇ. 85 ರಷ್ಟು ಕಮಿಷನ್ ತಿನ್ನುವ ಕಾಂಗ್ರೆಸ್ ರಾಜ್ಯವನ್ನು ಹಿಂದಕ್ಕೆ ದೂಡುತ್ತದೆ. ಇದಕ್ಕಾಗಿ ಕಾಂಗ್ರೆಸ್ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದರು.
ಇದನ್ನೂ ಓದಿ: ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ
ನಿಮ್ಮ ಭವಿಷ್ಯವು ಅಸ್ಥಿರ
ಮೊದಲ ಬಾರಿ ಮತ ಚಲಾಯಿಸುವವರು ರಾಜ್ಯದ ಮತ್ತು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ. ನಿಮ್ಮ ಮನಸ್ಸಿನ ಕೆಲಸ ಮಾಡಬೇಕಾದರೆ, ಕಾಂಗ್ರೆಸ್ ಇದ್ದರೆ ನಿಮಗೆ ಸಾಧ್ಯವಾಗದು. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರವಿದ್ದರೆ ನಿಮ್ಮ ಭವಿಷ್ಯವು ಅಸ್ಥಿರವಾಗುತ್ತದೆ. ಕಾಂಗ್ರೆಸ್ ಇದ್ದ ಕಡೆ ಬಂಡವಾಳ ಹೂಡುವವರು ಓಡಿ ಹೋಗುತ್ತಾರೆ. ಕಾಂಗ್ರೆಸ್ ತುಷ್ಟೀಕರಣವನ್ನು ಪ್ರೋತ್ಸಾಹಿಸುತ್ತದೆ. ರಾಜಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಬಾಂಬ್ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನ ಸತ್ತರು. ಆದರೆ, ಅಲ್ಲಿನ ಪೊಲೀಸರು ದೋಷಿಗಳನ್ನು ಜೈಲಿನಿಂದ ಬಿಟ್ಟರು. ಶಿಕ್ಷೆ ಕೊಡಲಿಲ್ಲ. ತುಷ್ಟೀಕರಣ ಇಂಥ ನೀತಿಯೊಂದೇ ಕಾಂಗ್ರೆಸ್ ಗುರುತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಒಡೆದು ಆಳುವುದೇ ಕಾಂಗ್ರೆಸ್ ನೀತಿ
ಯಾವ ರಾಜ್ಯಗಳು ಅಭಿವೃದ್ಧಿಯನ್ನು ಬಯಸುತ್ತವೆಯೋ ಅವು ಕಾಂಗ್ರೆಸ್ ಅನ್ನು ತಮ್ಮ ರಾಜ್ಯದಿಂದ ಹೊರಗೆ ಹಾಕುತ್ತವೆ. ದೇಶವು ಪ್ರಗತಿ ಆದರೆ ಅದನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಒಡೆದು ಆಳುವುದೇ ಕಾಂಗ್ರೆಸ್ ನೀತಿಯಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಿದ್ದರೆ ಕಾಂಗ್ರೆಸ್ಗೆ ಶಾಂತಿ ಇರುವುದಿಲ್ಲ. ಕಾಂಗ್ರೆಸ್ ದೇಶ ವಿರೋಧಿಗಳ ಮೇಲಿನ ಕೇಸನ್ನು ವಾಪಸ್ ಪಡೆಯುತ್ತದೆ. ಕಾಂಗ್ರೆಸ್ ರಿವರ್ಸ್ ಗೇರ್ನಲ್ಲಿ ಮತ್ತೊಂದು ದಿಕ್ಕಿಗೆ ಹೋಗುತ್ತದೆ. ಆದರೆ, ಬಿಜೆಪಿ ಸೈನಿಕರಿಗೆ ಗೌರವ ಮತ್ತು ಸನ್ಮಾನ ಕೊಡುತ್ತದೆ ಎಂದು ಮೋದಿ ಹೇಳಿದರು.
ಚಾಕಲೇಟ್ ರ್ಯಾಪರ್ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 16.5 ಲಕ್ಷ ರೂ. ಮೌಲ್ಯದ ಚಿನ್ನ ವಶಕ್ಕೆ!
ಪ್ರಧಾನಿ ಮೋದಿ ಮೂರನೇ ಚುನಾವಣಾ ಪ್ರಚಾರ ಕಾರ್ಯಕ್ರಮ ಫಿಕ್ಸ್; ಹೀಗಿದೆ ವೇಳಾಪಟ್ಟಿ