Mobile : ಅಪ್ರಾಪ್ತ ವಯಸ್ಕರಲ್ಲಿ ಸ್ಮಾರ್ಟ್ಫೋನ್ ಚಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಊಟ ಮಾಡಲು ಬೇಕು ಮೊಬೈಲ್, ನಿದ್ರೆಗೆ ಜಾರುವಾಗಲೂ ಬೇಕಿದೆ ಮೊಬೈಲ್. ಪುಟ್ಟ ಮಕ್ಕಳಲ್ಲಿ ಹೆಚ್ಚುತ್ತಿರುವ ಈ ಗೀಳು, ಪೋಷಕರಲ್ಲಿ ಭಾರೀ ಆತಂಕ ಸೃಷ್ಟಿಸುತ್ತಿದೆ. ಕೆಲವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ, ಒಂದೆರೆಡು ಏಟು ಬಾರಿಸಿ, ಕಸಿದುಕೊಂಡರೆ, ಇನ್ನೂ ಕೆಲವು ಪೋಷಕರು ಎಷ್ಟೇ ಬುದ್ಧಿ ಮಾತು ಹೇಳಿದರು ಮಕ್ಕಳು ಬಗ್ಗದೆ, ತಂದೆ-ತಾಯಿಗೆ ತಿರುಗಿ ಮಾತನಾಡುತ್ತಾರೆ. ಸದ್ಯ ಇದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮೊಬೈಲ್ ಕೊಡದ ಪ್ರಾಂಶುಪಾಲರಿಗೆ ಪಿಯುಸಿ ವಿದ್ಯಾರ್ಥಿ ಬೆದರಿಕೆ ಹಾಕಿದ್ದಾನೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಅನಕ್ಕರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಕಳೆದ ಶುಕ್ರವಾರ (ಜ.17) 16 ವರ್ಷದ ಪ್ರಥಮ ಪಿಯು ವಿದ್ಯಾರ್ಥಿ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಈ ಘಟನೆ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ನಡೆದಿದ್ದೇನು?
ಶಾಲೆಗೆ ಮೊಬೈಲ್ ಫೋನ್ ತರದಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದನ್ನು ಉಲ್ಲಂಘಿಸಿ, ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ತರಗತಿಗೆ ಮೊಬೈಲ್ ತಂದಿದ್ದ. ಬೋಧನಾ ಸಮಯದಲ್ಲಿ ಮೊಬೈಲ್ ಬಳಸುವುದನ್ನು ಗಮನಿಸಿದ ಶಿಕ್ಷಕರು ತಕ್ಷಣ ವಿದ್ಯಾರ್ಥಿಯ ಬಳಿ ಹೋಗಿ ಮೊಬೈಲ್ ವಶಕ್ಕೆ ಪಡೆದು ಪ್ರಾಂಶುಪಾಲರಿಗೆ ಒಪ್ಪಿಸಿದರು.
ಮೊಬೈಲ್ ಕಸಿದುಕೊಂಡಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿ, ನೇರವಾಗಿ ಪ್ರಾಂಶುಪಾಲರ ರೂಮಿಗೆ ತೆರಳಿ ಮೊಬೈಲ್ ಫೋನ್ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ, ಪ್ರಾಂಶುಪಾಲರು ಮೊಬೈಲ್ ಕೊಡಲು ಒಪ್ಪದಿದ್ದಾಗ, ಕೊಡ್ಲಿಲ್ಲ ಅಂದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ವಿದ್ಯಾರ್ಥಿಯ ಬೆದರಿಕೆಗೆ ಹೆದರಿದ ಪ್ರಾಂಶುಪಾಲರು ಮತ್ತು ಶಿಕ್ಷಕರು ಪಿಟಿಎ ತ್ರಿಥಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಿಂದೆಲ್ಲ ಶಿಕ್ಷಕರನ್ನು ಕಂಡರೆ ವಿದ್ಯಾರ್ಥಿಗಳು ಭಯದಿಂದ ನಡುಗುತ್ತಿದ್ದರು. ಆದರೆ, ಇಂದು ಶಿಕ್ಷಕರನ್ನೇ ಹೆದರಿಸುವ ಮಟ್ಟಕ್ಕೆ ಬೆಳೆದಿರುವುದು ಆಘಾತಕಾರಿ ಸಂಗತಿ. ಅದರಲ್ಲೂ ಒಂದು ಸಣ್ಣ ಮೊಬೈಲ್ ವಿದ್ಯಾರ್ಥಿಯನ್ನು ಈ ಮಟ್ಟಕ್ಕೆ ಇಳಿಸಿರುವುದು ಚಿಂತಿಸುವ ಗಂಭೀರ ವಿಷಯವಾಗಿದೆ. (ಏಜೆನ್ಸೀಸ್)
ಗ್ಯಾಸ್ ಸಿಲಿಂಡರ್ ಏಕೆ ಕೆಂಪು ಬಣ್ಣದಲ್ಲಿರುತ್ತೆ? ಕಾರಣವೇನು? ಇಲ್ಲಿದೆ ನೋಡಿ ಉತ್ತರ… Gas Cylinders
ಸೂಪರ್ ಗ್ಲೂ ಹಾಕಿ ತುಟಿಗಳನ್ನು ಮುಚ್ಚಿದ ಯುವಕ! ಕೊನೆಗೆ ಏನಾಯ್ತು ಗೊತ್ತಾ? ಆಘಾತಕಾರಿ ವಿಡಿಯೋ ಇಲ್ಲಿದೆ… Super glue
ಕುವೈತ್ನಿಂದ ಭಾರತಕ್ಕೆ ಬಂದು ಹೋದ ಬೆನ್ನಲ್ಲೇ ಟ್ರಕ್ ಚಾಲಕನಿಗೆ ಒಲಿಯಿತು 10 ಕೋಟಿ ಬಂಪರ್ ಬಹುಮಾನ! Truck Driver