ಯುಪಿಎಸ್ಸಿ ಬೋರ್ಡ್ ನಡೆಸುವ ಸಿಎಸ್ಇ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದೆ. ಇದರಲ್ಲಿ 613 ಪುರುಷರು ಮತ್ತು 320 ಮಹಿಳೆಯರು ಸೇರಿದಂತೆ ಒಟ್ಟು 933 ಅಭ್ಯರ್ಥಿಗಳು ವಿವಿಧ ಸೇವೆಗಳಿಗೆ ನೇಮಕಾತಿಗೆ ಅರ್ಹತೆ ಪಡೆದಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಕಸ್ವಾ ಕುರವ್ಲಿಯ ಸೂರಜ್ ತಿವಾರಿ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2022ರಲ್ಲಿ 917 ನೇ ರ್ಯಾಂಕ್ ಗಳಿಸಿದ್ದಾರೆ. ಅವರ ಯಶಸ್ಸಿನ ಹಿಂದೆ ಸ್ಪೂರ್ತಿದಾಯಕ ಕಥೆ ಇದೆ. 2007ರಲ್ಲಿ ನಡೆದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಮತ್ತು ಒಂದು ಕೈಯನ್ನು ಕಳೆದುಕೊಂಡರೂ ಅವರು ಹಠ ಬಿಡದೇ ಸಾಧನೆ ಮಾಡಿ ಯಶಸ್ಸನ್ನು ಕಾಣಲು ಸಾಧ್ಯವಾಯಿತು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅವರ ಯಶಸ್ಸು ಅವರ ಕುಟುಂಬ ಮತ್ತು ಸಮುದಾಯದಲ್ಲಿ ಸಂತೋಷವನ್ನು ತಂದಿದೆ.
2017ರಲ್ಲಿ ರೈಲು ಅಪಘಾತ
ಸೂರಜ್ ಜನವರಿ 29, 2017 ರಂದು ದೆಹಲಿಯ ತನ್ನ ಕಾಲೇಜಿನಿಂದ ಹಿಂದಿರುಗುತ್ತಿದ್ದಾಗ ರೈಲು ಅಪಘಾತಕ್ಕೆ ಒಳಗಾಗಿದ್ದರು. ಅಪಘಾತದಲ್ಲಿ, ಅವರು ತಮ್ಮ ಎರಡೂ ಕಾಲುಗಳು ಮತ್ತು ಬಲಗೈಯನ್ನು ಕಳೆದುಕೊಂಡರು, ಇದರಿಂದಾಗಿ ಅವರು ಹಾಸಿಗೆ ಹಿಡಿದು ಹಲವಾರು ತಿಂಗಳುಗಳ ಕಾಲ ಕುಟುಂಬ ಸದಸ್ಯರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದರು. ಆದಾಗ್ಯೂ, ಈ ಅಪಘಾತ ಅವರನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ.
ಈ ಅಪಘಾತವು ಅವರ ಬರೆಯುವ ಮತ್ತು ನಡೆಯುವ ಸಾಮರ್ಥ್ಯವನ್ನು ಕಸಿದುಕೊಂಡಿದ್ದಲ್ಲದೆ, ಅವರ ಕುಟುಂಬ ಸದಸ್ಯರು ಇದನ್ನು ಅವರ ಜೀವನದ ಕರಾಳ ಅವಧಿಗಳಲ್ಲಿ ಒಂದೆಂದು ಕರೆದಿದ್ದರಿಂದ ಅದು ಅವರನ್ನು ಖಿನ್ನತೆಗೆ ತಳ್ಳಿತ್ತು. ಆದಾಗ್ಯೂ, ಸೂರಜ್ ಈ ಪರಿಸ್ಥಿತಿಯನ್ನು ಸವಾಲಾಗಿ ತೆಗೆದುಕೊಂಡರು. ಜೀವನದಲ್ಲಿ ಮತ್ತೆ ಎದ್ದು ನಿಲ್ಲುವ ಏಕೈಕ ಮಾರ್ಗವೆಂದರೆ ಕಠಿಣ ಪರಿಶ್ರಮ ಎಂದು ಅರ್ಥಮಾಡಿಕೊಂಡರು. ಪದವಿ ಮುಗಿಸಿದ ಸೂರಜ್ ಈಗ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಷ್ಯನ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.
ಈ ವರ್ಷ, ಮಹಿಳಾ ಅಭ್ಯರ್ಥಿಗಳು ನಾಗರಿಕ ಸೇವೆಗಳ ಪರೀಕ್ಷೆ 2022 ರಲ್ಲಿ ಮೊದಲ ನಾಲ್ಕು ರ್ಯಾಂಕ್ಗಳನ್ನು ಗಳಿಸಿದ್ದು, ದೆಹಲಿ ವಿಶ್ವವಿದ್ಯಾಲಯದ ಪದವೀಧರೆ ಇಶಿತಾ ಕಿಶೋರ್ ಮೊದಲ ಸ್ಥಾನವನ್ನು ಗಳಿಸಿದ್ದಾರೆ. ಗರೀಮಾ ಲೋಹಿಯಾ, ಉಮಾ ಹರಥಿ ಎನ್ ಮತ್ತು ಸ್ಮೃತಿ ಮಿಶ್ರಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.
ಸಾಧನೆಗೆ ಮೂರೇ ಬೆರಳು ಸಾಕು!
ಈ ಕುರಿತಾಗಿ ಅವರ ತಂದೆ ತಾಯಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ತಂದೆ ರಮೇಶ್ ಕುಮಾರ್ ತಿವಾರಿ ”ನನ್ನ ಮಗನ ಕಾರಣದಿಂದಾಗಿ ನನಗೆ ಇಂದು ಹೆಮ್ಮೆ ಎನಿಸುತ್ತಿದೆ. ಆತ ನಿಜಕ್ಕೂ ಧೀರ. ಅವನಿಗೆ ಸಾಧನೆ ಮಾಡಲು ಮೂರೇ ಬೆರಳು ಸಾಕು” ಎಂದಿದ್ದಾರೆ.
UP | Suraj Tiwari from Mainpuri, who lost both his legs as well as his right arm and two fingers of his left hand in a train accident at Ghaziabad’s Dadri in 2017, clears the UPSC Civil Services Exam
(Image source: Provided by Suraj Tiwari) pic.twitter.com/0eOgqRK2eh
— ANI (@ANI) May 25, 2023
ತಾಯಿ ಆಶಾ ದೇವಿ ತಿವಾರಿ ” ನನ್ನ ಮಗ ತುಂಬಾ ಧೈರ್ಯಶಾಲಿ. ಸೂರಜ್ ಎಂದಿಗೂ ಛಲ ಬಿಡಲಿಲ್ಲ. ತನ್ನ ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚು ಶ್ರಮಿಸಿದ್ದಾನೆ. ಅವನು ಯಾವಾಗಲೂ ತನ್ನ ಕಿರಿಯ ಸೋದರರಿಗೆ ಶ್ರಮಪಟ್ಟು ಕೆಲಸ ಮಾಡಲು ಕೇಳುತ್ತಾನೆ” ಎಂದು ಹೇಳಿ ಸಂತೋಷವನ್ನು ಹಂಚಿಕೊಂಡರು.