Star Actor: ಚಿತ್ರರಂಗ ಅಂದಮೇಲೆ ಈ ರೀತಿಯ ಅನುಭವಗಳು ಅನೇಕ ನಟ-ನಟಿಯರಿಗೆ ಎದುರಾಗಿರುತ್ತದೆ. ಅಂತಹ ಹಲವಾರು ನಿದರ್ಶನಗಳು ಇಂದು ನಮ್ಮ ನಿಮ್ಮೆಲರ ಮುಂದಿದೆ. ಚೊಚ್ಚಲ ಚಿತ್ರದಲ್ಲಿ ನಟನಾಗಿ ಹೊರಹೊಮ್ಮುವ ಆಸೆಯನ್ನು ಹೊತ್ತುಕೊಂಡು ಬರುವ ಅದೆಷ್ಟೋ ಕಲಾವಿದರು ಕೆಲವರು ಹಿಯಾಳಿಸುವ ರೀತಿಗೆ ಕುಸಿದು, ಆ ವೃತ್ತಿಯಿಂದ ಹೊರನಡೆದು, ತಮ್ಮ ಕನಸನ್ನೇ ಮೊಟಕುಗೊಳಿಸುತ್ತಾರೆ. ಇನ್ನು ಕೆಲವರು ಎಷ್ಟೇ ಚುಚ್ಚಿ ಮಾತನಾಡಿದರು, ಕುಗ್ಗಿಸಲು ಪ್ರಯತ್ನಿಸಿದರು, ಅದಕ್ಕೆ ಜಗ್ಗದೆ ತಮ್ಮ ಸಾಧನೆ ಮುಖೇನ ಉತ್ತರಿಸುತ್ತಾರೆ.

ಇದನ್ನೂ ಓದಿ: ಉತ್ತಮ ಸಂಸ್ಕಾರ ಪಡೆದ ಮಕ್ಕಳಿಗಿದೆ ಸದೃಢ ಭವಿಷ್ಯ: ಮಾಜಿ ಶಾಸಕ ರುಕ್ಮಯ ಪೂಜಾರಿ ಅಭಿಮತ
ಅದೇ ರೀತಿಯಲ್ಲಿ ಇಲ್ಲೊಬ್ಬ ಸ್ಟಾರ್ ನಟ ತಮ್ಮ ಪ್ರಾರಂಭದ ದಿನಗಳಲ್ಲಿ ನೋಡಿದ ಕಷ್ಟದ ದಿನಗಳನ್ನು ಅವರ ಸ್ನೇಹಿತರೊಬ್ಬರು ನೇರವಾಗಿ ಕಂಡಿದ್ದು, ಅದನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ಸೂಪರ್ಸ್ಟಾರ್? ಇವರು ಯಾವ ಚಿತ್ರರಂಗದವರು? ಈ ಘಟನೆಗಳನ್ನು ಮುಕ್ತವಾಗಿ ತಿಳಿಸಿದ ಅವರ ಸ್ನೇಹಿತರು ಯಾರು? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ಈ ಹಿಂದೆ ‘ಮಾರ್ಕ್ ಆ್ಯಂಟನಿ’ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ತಮಿಳು ನಟ ವಿಶಾಲ್, ತಮ್ಮ ಆಪ್ತ ಸ್ನೇಹಿತರಾದ ಕಾಲಿವುಡ್ನ ದಳಪತಿ ವಿಜಯ್ ಅವರ ಕಷ್ಟದ ದಿನಗಳನ್ನು ಮೆಲುಕು ಹಾಕಿದರು. “ನಾನು ವಿಜಯ್ ಅವರನ್ನು ಕಾಲೇಜು ದಿನಗಳಿಂದಲೂ ನೋಡಿದ್ದೇನೆ. ಯಾಕಂದ್ರೆ, ಕಾಲೇಜಿನಲ್ಲಿ ವಿಜಯ್ ನನ್ನ ಸಹೋದರನ ಸೀನಿಯರ್ ಆಗಿದ್ದರು. ಹಾಗಾಗಿ ಅಂದಿನಿಂದಲೂ ಅವರ ಜೀವನದ ಗ್ರಾಫ್ ಹೇಗಿತ್ತು ಎಂಬುದನ್ನು ಹತ್ತಿರದಿಂದ ಕಂಡಿದ್ದೇನೆ” ಎಂದರು.
ಇದನ್ನೂ ಓದಿ: ಕಮಲ್ ಹಾಸನ್ ಮೋಡಿ: ಜೂನ್ 5ಕ್ಕೆ ತೆರೆ ಮೇಲೆ ಬರಲಿದೆ ‘ಥಗ್ಲೈಫ್’ ಸಿನಿಮಾ
“ವಿಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಒಂದು ಪ್ರತ್ಯೇಕ ಮ್ಯಾಗ್ಜೀನ್ ಅವರ ಬಗ್ಗೆ ಕೆಟ್ಟದಾಗಿ ಬರೆದಿತ್ತು. ಇವನ ಮುಖ ನೋಡಲು ಚಿತ್ರಮಂದಿರಕ್ಕೆ ಹಣ ಕೊಟ್ಟು ಹೋಗಬೇಕಾ? ಎಂದು ವ್ಯಂಗ್ಯವಾಡಿತ್ತು. ಆದ್ರೆ, ಇದಕ್ಕೆ ತಲೆಕಡಿಸಿಕೊಳ್ಳದ ವಿಜಯ್, ತನ್ನ ಕೆಲಸಗಳನ್ನು ಮುಂದುವರೆಸಿ, ಹಲವಾರು ಸಿನಿಮಾಗಳನ್ನು ಮಾಡಿದರು” ಎಂದಿದ್ದಾರೆ.
“ಸತತ ಸಿನಿಮಾಗಳನ್ನು ಮಾಡಿದ ಬಳಿಕ ಅದೇ ಮ್ಯಾಗ್ಜೀನ್ನವರು, ವಿಜಯ್ ಬಗ್ಗೆ ಪಾಸಿಟಿವ್ ಆಗಿ ಬರೆದರು. ಇದು ದಳಪತಿ ವಿಜಯ್ ಅವರ ಯಶಸ್ಸು. ಇಷ್ಟು ವರ್ಷಗಳಿಂದ ನೋಡಿರುವಂತೆ ಅವರು ಏಣಿಯನ್ನು ಹಂತ ಹಂತವಾಗಿ ಹತ್ತಿಕೊಂಡು ಮತ್ತಷ್ಟು ಎತ್ತರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ” ಎಂದು ವಿಶಾಲ್ ತಮ್ಮ ಗೆಳಯ ವಿಜಯ್ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ,(ಏಜೆನ್ಸೀಸ್).
ಏ.24ಕ್ಕೆ ವಾಪಾಸ್ ಆಗಬೇಕಿತ್ತು; ಬಂದೂಕು ಹಣೆಗಿಟ್ಟು ಗುಂಡು ಹಾರಿಸಿದ್ರು; ಮೃತ ಮಂಜುನಾಥ್ ಪತ್ನಿ ಅಳಲು | Pahalgam