ಬಾಗಲಕೋಟೆ: ಪಂಚಮಸಾಲಿ ಮುಖಂಡರಾದ ವಿನಯ್ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಪಂಚಮಸಾಲಿ ಫೇಸ್ಬುಕ್ ಪೇಜ್ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪಂಚಮಸಾಲಿ ಮುಂಚೂಣಿ ನಾಯಕರಾದ ಈ ಇಬ್ಬರನ್ನು ಸೇರಿಸಿಕೊಳ್ಳದಿದ್ರೆ ಸಮೂಹವನ್ನು ಕಡೆಗಣಿಸಿದಂತೆ. ಪಂಚಮಸಾಲಿ ಮೀಸಲಾತಿಗಾಗಿ ದುಡಿದವರಿಗೆ ಅವಕಾಶ ಸಿಗಬೇಕು. ಸಮಾಜದಲ್ಲಿ ಈ ಇಬ್ಬರು ಯುವ ನಾಯಕರು ಬೆಳೆಯುತ್ತಾರೆ ಅಂತ ಕುಂಟು ನೆಪಹೇಳಿ, ಕಾಂಗ್ರೆಸ್ ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರದಿಂದ ಇಬ್ಬರಿಗೂ ಸಚಿವ ಸ್ಥಾನ ತಪ್ಪಿಸಿದ್ದಾರೆಂದು ಅನುಮಾನ ಹೊರಹಾಕಿದ್ದಾರೆ.
ಈ ಬಗ್ಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸಹ ಬೇಸರ ಹೊರಹಾಕಿದ್ದಾರೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರಿಗೂ ಸಚಿವ ಸ್ಥಾನ ಕೊಡದೇ ಇದ್ದರೆ, ಈಗ ಕಾಂಗ್ರೆಸ್ ಬೆಂಬಲಿಸಿದ ಪಂಚಮಸಾಲಿ ಸಮಾಜ, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದೆ.
ಸಮಾಜದ ಬಾಂಧವರು ಸಚಿವ ಸ್ಥಾನ ತಪ್ಪಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಫೇಸ್ಬುಕ್ ಮೂಲಕ ಕರೆ ಕೊಡಲಾಗಿದೆ. (ದಿಗ್ವಿಜಯ ನ್ಯೂಸ್)
ಎಜುಕೇಷನ್ ಎಕ್ಸ್ಪೋ ಇಂದಿನಿಂದ: ಜಯನಗರ 5ನೇ ಬ್ಲಾಕ್ನ ಶಾಲಿನಿ ಮೈದಾನದಲ್ಲಿ ಆಯೋಜನೆ, ರಾಮಲಿಂಗಾ ರೆಡ್ಡಿ ಚಾಲನೆ
ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ರೆ ಕಾಂಗ್ರೆಸ್ ಕಚೇರಿ ಮುಂದೆ ಸಾಯ್ತೀನಿ! ಅಭಿಮಾನಿಯ ಪತ್ರ ವೈರಲ್