ಬಿಹಾರ: ವಿಧಾನಸಭೆಯಲ್ಲಿ ಸಿಎಂ ನಿತೀಶ್ ಕುಮಾರ್ ಅವರ ಅನುಚಿತ ಹೇಳಿಕೆಯನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದಾರೆ. ಯಾರಾದರೂ ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ಅದು ತಪ್ಪು. ಸಿಎಂ ಹೇಳಿಕೆ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಜನರು ಈ ಸಂಬಂಧ ಮಾತನಾಡುವಾಗ ಹಿಂಜರಿಯುತ್ತಾರೆ. ಲೈಂಗಿಕ ಶಿಕ್ಷಣ ವಿಷಯದ ಕುರಿತು ಚರ್ಚಿಸಲಾಗಿದೆ ಅಷ್ಟೇ. ಅದನ್ನು ಈಗ ಶಾಲೆಗಳಲ್ಲಿಯೂ ಕಲಿಸಲಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಕಲಿಸಲಾಗುತ್ತದೆ. ಮಕ್ಕಳು ಅದನ್ನು ಕಲಿಯುತ್ತಾರೆ. ಜನಸಂಖ್ಯೆ ಹೆಚ್ಚಳ ತಡೆಯಲು ಪ್ರಾಯೋಗಿಕವಾಗಿ ಏನು ಮಾಡಬೇಕು. ಇದನ್ನು ತಪ್ಪಾಗಿ ತಿಳಿದುಕೊಳ್ಳಬಾರದು. ಇದನ್ನು ಲೈಂಗಿಕ ಶಿಕ್ಷಣ ಎಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ನಿತೀಶ್ ವಿಚಿತ್ರವಾದ ಟೀಕೆಯಿಂದ ಎಲ್ಲರಿಗೂ ಅಸಮಾಧಾನ
ಮದುವೆಯ ನಂತರ ಪುರುಷರು ತಮ್ಮ ಪತ್ನಿಯರನ್ನು ಸಂ*ಭೋಗಿಸಲು ಕೇಳುತ್ತಾರೆ, ಆದರೆ ಬಿಹಾರದಲ್ಲಿ ವಿದ್ಯಾವಂತ ಮಹಿಳೆಯರು ತಮ್ಮ ಗಂಡಂದಿರನ್ನು ಸರಿಯಾದ ಸಮಯದಲ್ಲಿ ಹಾಗೆ ಮಾಡುವುದನ್ನು ನಿಲ್ಲಿಸುವಂತೆ ಕೇಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು. ಇದರಿಂದಾಗಿ ಬಿಹಾರದ ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದಾಗ ಹಿಂದೆ ಕುಳಿತಿದ್ದ ಕೆಲ ಶಾಸಕರು ನಗುತ್ತಿದ್ದರು.
ನಿತೀಶ್ ಕುಮಾರ್ ಅವರ ಹೇಳಿಕೆಯನ್ನು ಪ್ರತಿಪಕ್ಷ ಭಾರತೀಯ ಜನತಾ ಪಕ್ಷ ಟೀಕಿಸಿದೆ. ಬಿಜೆಪಿ ಒಬಿಸಿ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಆನಂದ್ ಮಾತನಾಡಿ, ಬಿಹಾರ ಸಿಎಂ ದೇಹ, ಮನಸ್ಸು ಮತ್ತು ಹೃದಯದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ನಿತೀಶ್ ಜಿ ತಮ್ಮ ಹಠಮಾರಿತನದಿಂದ ಬಿಹಾರವನ್ನು ಯಾವ ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ? ಮುಖ್ಯಮಂತ್ರಿಯವರ ಇಂತಹ ಭಾಷೆಗೆ ಆಡಳಿತ ಪಕ್ಷದ ನಾಯಕರು ಸದನದಲ್ಲಿ ನಗುತ್ತಿದ್ದಾರೆ. ಅವರು ಅಧಿಕಾರದಿಂದ ಹೀಗೆ ಮಾತನಾಡುತ್ತಿದ್ದಾರೆ. ನಾಚಿಕೆಪಡುವುದಿಲ್ಲ ಎಂದು ಹೇಳಿದರು.
#WATCH | Patna: On Bihar CM Nitish Kumar's inappropriate comments in the assembly, Bihar Deputy CM Tejashwi Yadav says, "Let me tell you one thing. It is wrong if someone misinterprets it. The statement of the CM was regarding sex education. People are hesitant whenever the topic… pic.twitter.com/0hwWD4oqr8
— ANI (@ANI) November 7, 2023
ನಿತೀಶ್ ಹೇಳಿಕೆಯನ್ನು ಸಮರ್ಥಿಸಿಕೊಂಡ ತೇಜಸ್ವಿ
ಆದರೆ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮುಖ್ಯಮಂತ್ರಿಯನ್ನು ಸಮರ್ಥಿಸಿಕೊಂಡರು. ಅವರು ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದಾರೆ. ಜನರು ಅದನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು. ಅವರು ಲೈಂಗಿಕ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಬಿಹಾರ ಸರ್ಕಾರವು ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣವನ್ನು ಹೇಗೆ ಮಾಡಿದೆ ಎಂದು ಹೇಳಿದರು. ಇದನ್ನು ಜನರು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಶಾಲೆಗಳಲ್ಲಿಯೂ ಲೈಂಗಿಕ ಶಿಕ್ಷಣದ ಬಗ್ಗೆ ಕಲಿಸಲಾಗುತ್ತಿದೆ. ಮಕ್ಕಳು ಅದನ್ನು ಕಲಿಯುತ್ತಿದ್ದಾರೆ ಎಂದರು.
ಮರೆಯಲು ಪ್ರಾರಂಭಿಸಿದ್ದಾರೆಯೇ ನಿತೀಶ್?
ಕಳೆದ ವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ನಿತೀಶ್ ಕುಮಾರ್ ಅವರು 1987 ರಲ್ಲಿ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ಸಿಪಿಐ ಮತ್ತು ಸಿಪಿಐ-ಎಂ ತನಗೆ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ, ಆ ವರ್ಷ ಯಾವುದೇ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗಷ್ಟೇ ಜನತಾ ದರ್ಬಾರ್ನಲ್ಲಿ ಗೃಹ ಸಚಿವರನ್ನು ಕರೆಸುವಂತೆ ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಿದ್ದು, ಈ ಹುದ್ದೆಯನ್ನು ತಾವೇ ನಿರ್ವಹಿಸಿದ್ದರಿಂದ ಎಡವಟ್ಟು ಎದುರಿಸಬೇಕಾಯಿತು.
ವಿಗ್ರಹಗಳ ಮೇಲೆ ಕಳ್ಳರ ಕಣ್ಣು!: 10 ವರ್ಷದಲ್ಲಿ 14 ಮೂರ್ತಿ ಕಳವು; 7 ರಾಜ್ಯಗಳಲ್ಲಿ 31 ಕಲಾಕೃತಿ ಕಣ್ಮರೆ