ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಿದ್ದಂತೆ ಬಿಜೆಪಿ ಹಾಗೂ ಹಿಂದು ಸಂಘಟನೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದನ್ನೇ ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದು, ನಿರಂತರವಾಗಿ ಕಾಂಗ್ರೆಸ್ಗೆ ಟಕ್ಕರ್ ನೀಡುತ್ತಲೇ ಇದೆ. ಇದರ ಭಾಗವಾಗಿ ಈಗಾಗಲೇ ರಾಜ್ಯದಾದ್ಯಂತೆ ಹನುಮಾನ್ ಚಾಲೀಸಾ ಪಠಣ ಮಾಡಿ ಕಾಂಗ್ರೆಸ್ಗೆ ತಿರುಗೇಟು ನೀಡಲಾಗಿದೆ.
ಇದನ್ನೂ ಓದಿ: ರೋಡ್ ಶೋ ವೇಳೆ ಲೋಕಕಲ್ಯಾಣ, ಮೋದಿ ಶ್ರೇಯಸ್ಸಿಗಾಗಿ ಪುರೋಹಿತರಿಂದ ವೇದ ಮಂತ್ರ ಪಠಣ
ಬಜರಂಗಿಗಳ ಆಗಮನ
ಇನ್ನು ಪ್ರಧಾನಿ ಮೋದಿ ಕಳೆದ ಮೂರು ದಿನಗಳಿಂದ ವಿವಿಧೆಡೆ ನಡೆಸಿದ ಚುನಾವಣಾ ಬಹಿರಂಗ ಸಮಾವೇಶದಲ್ಲೂ ಬಜರಂಗಿ ಎಂದು ಪ್ರಸ್ತಾಪಿಸುವ ಮೂಲಕ, ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಧಾನಿ ರೋಡ್ ಶೋ ವೇಳೆ ಬಜರಂಗಿಗಳು ಆಗಮಿಸಿದ್ದಾರೆ!
ಹನುಮನ ವೇಷ ಧರಿಸಿದ ಅಭಿಮಾನಿಗಳು
ಹೌದು, ಮೋದಿ ಅಭಿಮಾನಿಗಳು ಬಜರಂಗಿ ವೇಷ ತೊಟ್ಟು ರೋಡ್ ಶೋಗೆ ಆಗಮಿಸಿದ್ದಾರೆ. ನಗರದ ಸೌತ್ ಎಂಡ್ ಸರ್ಕಲ್ ಬಳಿ ಅಭಿಮಾನಿಗಳು ಹನುಮಂತನಂತೆ ವೇಷ ತೊಟ್ಟು ಬಂದಿದ್ದಾರೆ. ಈ ಮೂಲಕ ರೋಡ್ ಶೋನಲ್ಲಿ ಮಿಂಚಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಅಭಿಮಾನಿಗಳು ಹನುಮಂತನಂತೆ ವೇಷ ಧರಿಸಿ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ.