ನಾಪತ್ತೆಯಾಗಿದ್ದ ಮಾಡೆಲ್ ಶೀತಲ್ ಕತ್ತು ಸೀಳಿ ಬರ್ಬರ ಹತ್ಯೆ: ಕಾಲುವೆಯಲ್ಲಿ ಶವ ಪತ್ತೆ! | Model Sheetal

blank

Model Sheetal: ಎರಡು ದಿನಗಳ ಹಿಂದೆ ಹರಿಯಾಣದಲ್ಲಿ ನಾಪತ್ತೆಯಾಗಿದ್ದ ಮಾಡೆಲ್ ಶೀತಲ್ ಅಲಿಯಾಸ್ ಸಿಮ್ಮಿ ಚೌಧರಿ ಶವವಾಗಿ ಪತ್ತೆಯಾಗಿದ್ದಾರೆ.

ಹರಿಯಾಣದ ಸೋನಿಪತ್‌ನ ಖಾರ್ಖೋಡಾ ಪ್ರದೇಶದಲ್ಲಿ ಶೀತಲ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಆಕೆಯ ಕತ್ತು ಸೀಳಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ:ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನವೇ ಭಾರತ ತಂಡಕ್ಕೆ ಶುಭ ಸುದ್ದಿ! | IND vs ENG Test

ಖಾಂಡಾ ಗ್ರಾಮದ ಬಳಿಯ ಕಾಲುವೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಆಕೆಯ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳ ಆಧಾರದ ಮೇಲೆ ಪೊಲೀಸರು ಆಕೆಯನ್ನು ಗುರುತಿಸಿದ್ದಾರೆ. ಶೀತಲ್ ಹರ್ಯಾನ್ವಿ ಸಂಗೀತ ವೀಡಿಯೊಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸಹೋದರಿ ನೇಹಾ ಅವರೊಂದಿಗೆ ಖಲೀಲಾ ಮಜ್ರಾದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್​ ಬಂಕ್​ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!: ವಿಡಿಯೋ ವೈರಲ್​ | Revolver

ಜೂನ್ 14 ರಂದು ಅಹರ್ ಮ್ಯೂಸಿಕ್ ವಿಡಿಯೋ ಚಿತ್ರೀಕರಣಕ್ಕಾಗಿ ಹಳ್ಳಿಗೆ ಹೋಗಿದ್ದರು. ಶೀತಲ್ ಮನೆಗೆ ಹಿಂತಿರುಗದ ಕಾರಣ ಅವರ ಸಹೋದರಿ ನೇಹಾ ಈ ಹಿಂದೆ ಪಾಣಿಪತ್‌ನ ಮಟ್ಲೌಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೂನ್ 15 ರ ಭಾನುವಾರ ರಾತ್ರಿ ಪೊಲೀಸರು ಶೀತಲ್ ಅವರ ಶವವನ್ನು ಪತ್ತೆ ಮಾಡಿದರು.ಇನ್ನು ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸಿಸ್)

ನಡು ರಸ್ತೆಯಲ್ಲೇ ಲವ್​​ ಬರ್ಡ್ಸ್​ ರೋಮ್ಯಾನ್ಸ್​; ಪೊಲೀಸರು ಮಾಡಿದ್ದೇನು?: ವಿಡಿಯೋ ಇಲ್ಲಿದೆ ನೋಡಿ | Romance

ಪೆಟ್ರೋಲ್​ ಬಂಕ್​ ಸಿಬ್ಬಂದಿ ಎದೆಗೆ ಏಕಾಏಕಿ ರಿವಾಲ್ವರ್ ಇಟ್ಟ ಯುವತಿ!: ವಿಡಿಯೋ ವೈರಲ್​ | Revolver

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…