ಗೋರಖ್ಪುರ: ಮನೆಯ ಬಳಿ ಜೋರಾಗಿ ಸಂಗೀತ ಹಾಕಿದ ಬಗ್ಗೆ ತಕರಾರು ನೀಡಿದ ನಂತರ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ಮನೆಯ ಬಾತ್ರೂಮ್ನಲ್ಲಿ 15ಕ್ಕೂ ಹೆಚ್ಚು ನಾಗರಹಾವಿನ ಮರಿ ಪ್ರತ್ಯಕ್ಷ: ವೃದ್ಧ ದಂಪತಿ ಕಂಗಾಲು
ಮೃತನನ್ನು ರುದೌಲಿ ಗ್ರಾಮದ ನಿವಾಸಿ ರಾಜ್ ಕಿಶೋರ್ (45) ಎಂದು ಗುರುತಿಸಲಾಗಿದ್ದು, ಸುನೀಲ್ ಯಾದವ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಗಣಿಗಾರಿಕೆಯ ಕಾರ್ಮಿಕನಾದ ಸುನೀಲ್, ಮೃತನ ಮನೆ ಬಳಿ ಟ್ರ್ಯಾಕ್ಟರ್ನಲ್ಲಿ ಅಶ್ಲೀಲ ಸಂಗೀತವನ್ನು ಹಾಕಿ ಜೋರಾಗಿ ಸೌಂಡ್ನ್ನು ಇಟ್ಟಿದ್ದ. ಇದಕ್ಕೆ ಕಿಶೋರ್ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವ ನಡುವೆ ವಾಗ್ವಾದ ನಡೆದಿದೆ.
ಒಂದು ಗಂಟೆ ನಂತರ ಆರೋಪಿಯು ಐದಾರು ಗಣಿಗಾರಿಕೆ ಕಾರ್ಮಿಕರೊಡನೆ ಸೇರಿ ಕಿಶೋರ್ ಹಾಗೂ ಆತನ ಮನೆಯವರ ಮೇಲೆ ಹಲ್ಲೆ ನಡೆಸಿದ್ದು, ಮಾತಿನ ಚಕಮಕಿಯ ನಡುವೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿದ ಗ್ರಾಮದ ನಿವಾಸಿಗಳು ಹೊರಗೆ ಬಂದು ಆರೋಪಿಗಳನ್ನು ಬೆನ್ನಟ್ಟಿದ್ದು ಸ್ಥಳದಿಂದ ಅವರು ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಹಾಡಿನ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ವ್ಯಕ್ತಿಯ ಪ್ರಾಣ ತೆಗೆದು ಪರಾರಿಯಾದ..
ಸಾಂದರ್ಭಿಕ ಚಿತ್ರ