More

    ಸಮಾಲೋಚನೆ ವೇಳೆ ಡಾಕ್ಟರ್​​ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ: ಮುಂದೆ ನಡೆದದ್ದು..

    ದೆಹಲಿ: ಸಮಾಲೋಚನೆ ವೇಳೆ ಹಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೋಗಿಯನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಿಹಾರದ ನಿವಾಸಿ ರಾಜ್‌ಕುಮಾರ್ (21) ಎಂಬಾತ ಗಂಗಾರಾಮ್ ಆಸ್ಪತ್ರೆಯೊಳಗೆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಯಾಗಿದ್ದು, ನರಶಸ್ತ್ರಚಿಕಿತ್ಸಕರಾದ ಸನಾತನ್ ಸಿಂಗ್ ಚಬ್ರಾ ಎಂಬುವರ ಹೆಬ್ಬೆರಳಿಗೆ ಚಿಕ್ಕ ಗಾಯವಾಗಿದೆ. ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿರುವ ಆರೋಪಿಯು 2021ರಿಂದ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದನು.

    ಇದನ್ನೂ ಓದಿ: ತೃತೀಯಲಿಂಗಿಯನ್ನು ವಿವಾಹವಾದ ಯುವಕ: ಕೊಲೆಗೆ ಸಂಚು, ಜೀವ ಬೆದರಿಕೆ ಎಂದು ಕುಟುಂಬಸ್ಥರ ವಿರುದ್ಧ ದೂರು

    ಮಂಗಳವಾರ ಮಧ್ಯಾಹ್ನ 3.50ರ ಸುಮಾರಿಗೆ ವೈದ್ಯರ ಬಳಿ ಸಮಾಲೋಚನೆಗೆಂದು ಬಂದಿದ್ದು, ಇದ್ದಕ್ಕಿದ್ದಂತೆ ಕೋಪಗೊಂಡು ಹಣ್ಣುಗಳ ಸಿಪ್ಪೆಯನ್ನು ತೆಗೆಯಲು ಬಳಸುವ ತೀಕ್ಷ್ಣವಾದ ಚಾಕುವಿನಿಂದ ವೈದ್ಯರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾನೆ.

    ಆದರೆ, ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಮಯೋಚಿತ ಮಧ್ಯಪ್ರವೇಶದಿಂದ ವೈದ್ಯರಿಗೆ ಗಂಭೀರ ಗಾಯವಾಗುವುದು ತಪ್ಪಿದ್ದು, ಕೂಡಲೇ ಹಲ್ಲೆ ಕುರಿತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ವೈದ್ಯರ ದೂರಿನ ಮೇರೆಗೆ ರೋಗಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts