More

    ತೃತೀಯಲಿಂಗಿಯನ್ನು ವಿವಾಹವಾದ ಯುವಕ: ಕೊಲೆಗೆ ಸಂಚು, ಜೀವ ಬೆದರಿಕೆ ಎಂದು ಕುಟುಂಬಸ್ಥರ ವಿರುದ್ಧ ದೂರು

    ಪಾಟ್ನಾ: ತೃತೀಯಲಿಂಗಿ ಮದುವೆಯಾಗಿದ್ದಕ್ಕೆ ಯುವಕನೊಬ್ಬನನ್ನು ಪೋಷಕರು ಮನೆಯಿಂದ ಹೊರ ಹಾಕಿರುವ ಘಟನೆ ಬಿಹಾರದ ಪಾಟ್ನಾದ ದಾನಪುರದಲ್ಲಿ ನಡೆದಿದೆ.

    ಇದನ್ನೂ ಓದಿ: 15 ದಿನದ ಹಸೂಳೆಯನ್ನು ಛಾವಣಿಯಿಂದ ಬಿಸಾಕಿದ ಬೆಕ್ಕು: ಪಾಲಕರ ಕಣ್ಮುಂದೆಯೇ ನಡೆದ ಹೃದಯ ವಿದ್ರಾವಕ ಘಟನೆ

    ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್ ಫೇಸ್​ಬುಕ್ ಮೂಲಕ ಅದ್ವಿಕಾ ಚೌಧರಿ ಸಿಂಗ್​​ರನ್ನು ಭೇಟಿಯಾಗಿದ್ದು, ಎರಡು ವರ್ಷಗಳ ಸ್ನೇಹವು ಪ್ರೀತಿಗೆ ತಿರುಗಿ ಇಬ್ಬರು 2022ರಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಮನೆಗೆ ಹಿಂದಿರುಗಿದ ನಂತರ ದಂಪತಿಗಳಿಗೆ ಶಾಕ್​ ಎದುರಾಗಿದ್ದು, ಈ ಮದುವೆಯನ್ನು ತಿರಸ್ಕರಿಸಿದ್ದಾರೆ.

    ಕೊನೆಗೆ ಯುವಕನ ಹಟದಿಂದಾಗಿ, ಕುಟುಂಬದ ಸದಸ್ಯರು ಹಿಂದೂ ಸಂಪ್ರದಾಯದ ಪ್ರಕಾರ ಆಕೆಯನ್ನು ಮತ್ತೊಮ್ಮೆ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿದ ಇಬ್ಬರು ಜೂನ್‌ನಲ್ಲಿ ದೆಹಲಿಯಲ್ಲಿ ಮತ್ತೆ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಮದುವೆಗೂ ಕೂಡ ಗೈರು ಹಾಜರಾಗಿದ್ದರು.

    ಇದನ್ನೂ ಓದಿ: VIDEO | ಹೆಂಡತಿಯೊಂದಿಗೆ ಕಲಹ, ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ

    ಆದರೆ, ಇತ್ತೀಚಿಗೆ ಏಕಾಏಕಿ ಕುಟುಂಬದವರ ವರ್ತನೆ ಬದಲಾಗಿದ್ದು, ದಂಪತಿಗಳು ಕುಟುಂಬದಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ಕೊನೆಗೆ ಬೇಸತ್ತ ಇಬ್ಬರೂ ಮನೆಯನ್ನು ತೊರೆದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ನಡುವೆಯೂ ಕುಟುಂಬದವರು ತೊಂದರೆ ನೀಡಿದ್ದಾರೆ. ಕೊನೆಗೆ ಯುವಕ ತನ್ನ ತಂದೆ ಮತ್ತು ಸಹೋದರನ ವಿರುದ್ಧ ಕೊಲೆ ಸಂಚು, ಬೆದರಿಕೆ, ತನ್ನ ಪತ್ನಿಗೆ ವರದಕ್ಷಿಣೆಗಾಗಿ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts