Basil Plant : ಸಾಮಾನ್ಯವಾಗಿ ಭಾರತದಲ್ಲಿ ಮನೆಯ ಮುಂದೆ ಇರುವ ತುಳಸಿಗಿಡ ದೇವರ ಸಾಮಾನ ಎಂದು ಪರಿಣಿಸಲಾಗುತ್ತದೆ. ಅಲ್ಲದೆ, ತುಳಸಿಗಿಡ ನೆಡೊದ್ರಿಂದ ಮನೆಯಲ್ಲಿ ಸದಾ ಸಕರಾತ್ಮಕ ಬೆಳವಣಿಗೆ ಇರಲಿದೆ ಎಂದು ವಾಸ್ತು ಪ್ರಕಾರ ಹೇಳಲಾಗುತ್ತದೆ.

ಆದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದಾಗ ತುಳಸಿ ಒಣಗಲು ಆರಂಭಿಸುತ್ತಂತೆ. ಅಂತಹ ಶಕ್ತಿಯು ತುಳಸಿಗೆ ಅನುಕೂಲಕರ ವಾತಾವರಣವನ್ನು ಒದಗಿಸುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ತುಳಸಿಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಕೆಂಪುದಾರ ಕಟ್ಟುವುದು ಸೇರಿದಂತೆ ಹೀಗೆ ಮಾಡಿದ್ರೆ ಅದೃಷ್ಟ ಖುಲಾಯಿಸುವುದರ ಜತೆ ಲಕ್ಷ್ಮೀಯೂ ಹರಿದು ಬರಲಿದ್ದಾಳಂತೆ!
ಇದನ್ನೂ ಓದಿ:ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಗಳಿಂದ ಬರಲಿದ್ಯಾ ಅದೃಷ್ಟ.. dreams
ತುಳಸಿಗೆ ಕಾಲವ(ಪವಿತ್ರ ದಾರ) ಕಟ್ಟೊದ್ರಿಂದ ಲಕ್ಷ್ಮೀ ಆಗಮನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಳಸಿಗೆ ಪ್ರತಿನಿತ್ಯ ನೀರು ಹಾಗೂ ಪೂಜೆ ಅರ್ಪಿಸುವುದರಿಂದ ವಿಷ್ಣು ಮತ್ತು ಲಕ್ಷ್ಮೀದೇವಿ ಅಶಿರ್ವಾದ ಸಿಗಲಿದೆ. ಅದೇರೀತಿ ತುಳಸಿ ಸಂಪತ್ತಿನ ಶಕ್ತಿಯನ್ನು ಆಕರ್ಷಿಸುತ್ತಾಳೆ. ಹೀಗಾಗಿ, ತುಳಸಿಕಾಂಡದ ಮೇಲೆ ಕಾವಲ(ಪವಿತ್ರದಾರ)ಕಟ್ಟೊದ್ರಿಂದ ತುಳಸಿ ಗಿಡ ಒಣಗಲ್ಲ. ಅಲ್ಲದೆ, ಒಣಗುವುದನ್ನು ತಡೆಯುತ್ತದೆ. ತುಳಸಿಯ ಸುತ್ತಲಿನ ಶಕ್ತಿಯು ಮೊದಲಿಗಿಂತ ಹೆಚ್ಚು ಸಕಾರಾತ್ಮಕವಾಗುತ್ತದೆ. ಆರ್ಥಿಕ ಲಾಭಗಳನ್ನು ಪಡೆಯಲು, ತುಳಸಿಗೆ ಪವಿತ್ರ ದಾರವನ್ನು ಕಟ್ಟಿಕೊಳ್ಳಿ.
ಪವಿತ್ರ ದಾರ ಕಟ್ಟೊದೇಗೆ..?
ಶುಕ್ರವಾರದಂದು ತುಳಸಿಗೆ ಕೆಂಪು ಬಣ್ಣದ ಕಲವವನ್ನು ಕಟ್ಟಬಹುದು. ಮೊದಲು ಸ್ನಾನ ಮಾಡಿ. ನಂತರ, ಒಂದು ತಟ್ಟೆಯಲ್ಲಿ ದೀಪ, ಪಾತ್ರೆಯಲ್ಲಿ ನೀರು, ಗಂಗಾಜಲ, ರೋಲಿ, ಸಿಹಿತಿಂಡಿಗಳು, ಅಕ್ಕಿ ಕಾಳುಗಳು ಮತ್ತು ಕೆಂಪು ಬಣ್ಣದ ಕಲಾವವನ್ನು ಇರಿಸಿ.
ಇದನ್ನೂ ಓದಿ:ನಿಮ್ಮ ಕನಸಿನಲ್ಲಿ ಗಿಳಿ, ಗೂಬೆ, ನವಿಲು ಕಾಣಿಸಿಕೊಂಡಿದ್ಯಾ? ಈ ಪಕ್ಷಗಳಿಂದ ಬರಲಿದ್ಯಾ ಅದೃಷ್ಟ.. dreams
ಇದಾದ ನಂತರ, ತುಳಸಿಯನ್ನು ನೀರು ಮತ್ತು ಗಂಗಾ ನೀರಿನಿಂದ ಸ್ನಾನ ಮಾಡಿ. ಬಳಿಕ, ತುಳಸಿಯವರ ಮುಂದೆ ರೋಲಿಯೊಂದಿಗೆ(ರಂಗೋಲಿ) ಸ್ವಸ್ತಿಕವನ್ನು ಮಾಡಿ. ನಂತರ ಅನ್ನ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
ತುಳಸಿ ಗಿಡದ ಮುಂದೆ ದೀಪವನ್ನು ಇರಿಸಿ ಮತ್ತು ಕೆಂಪು ಬಣ್ಣದ ಕಲಾವಾವನ್ನು(ಪವಿತ್ರ ದಾರ) ಕಾಂಡ ಮತ್ತು ಮಡಕೆಯ ಸುತ್ತಲೂ ಸುತ್ತಿ. ತುಳಸಿ ಕಾಂಡಕ್ಕೆ ಕಟ್ಟುವ ಕಲಾವ ತುಂಬಾ ಬಿಗಿಯಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.
ದಾರ ಕಟ್ಟುವಾಗ ಈ ವಿಷಯ ನೆನಪಿನಲ್ಲಿಡಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಕಾವಲ ಕಟ್ಟುವಾಗ ಕೆಲ ವಿಷಯಗಳನ್ನು ನೆನಪಿನಲ್ಲಿಡುವುದು ಸೂಕ್ತ. ಅಲ್ಲದೆ, ಕಾರ್ಯವಿಧಾನದ ಬಗ್ಗೆ ಕಾಳಜಿವಹಿಸಬೇಕು. ತುಳಸಿಯಲ್ಲಿ ಕಲವ ಕಟ್ಟುವಾಗ, ಮನಸ್ಸಿನಲ್ಲಿ ಯಾವುದೇ ರೀತಿಯ ನಕಾರಾತ್ಮಕ ಆಲೋಚನೆಗಳು ಬರಬಾರದು. ಯಾವಾಗಲೂ ಕೆಂಪುದಾರವನ್ನೇ ಕಟ್ಟಬೇಕು. ಅಲ್ಲದೆ, ಎಲ್ಲಾ ಕಾರ್ಯವಿಧಾನದ ಬಗ್ಗೆ ತಿಳಿದುಕೊಂಡೆ ಅದರ ಪ್ರಕಾರ ಪೂಜೆ ಮಾಡೋದು ಒಳಿತು. ಆಗಾ ಮಾತ್ರ ಅದೃಷ್ಟದ ಬಾಗಿಲು ತೆರೆಯೊದು ಸಾಧ್ಯವಿದೆ.
ತುಳಸಿಗೆ ಕಟ್ಟಿದ ಪವಿತ್ರ ದಾರವನ್ನು ಶಾಶ್ವತವಾಗಿ ಬಿಡಬೇಡಿ. ಬದಲಾಗಿ, ಪ್ರತಿ ತಿಂಗಳು ತುಳಸಿಗೆ ಕಟ್ಟಿರುವ ಪವಿತ್ರ ದಾರವನ್ನು ತೆಗೆದು ಹೊಸದನ್ನು ಕಟ್ಟಿಕೊಳ್ಳಿ. ಹಳೆದಾರವನ್ನು ಮಣ್ಣಲ್ಲಿ ಹೂತು ಹಾಕಿ.(ಏಜೆನ್ಸೀಸ್).
ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti
ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?